ಅಂಪೈರ್ ಜೊತೆ ಗಿಲ್ ವಾಗ್ವಾದ; ಕೆಲಕಾಲ ಪಂದ್ಯ ಸ್ಥಗಿತ

Suvarna News   | Asianet News
Published : Jan 04, 2020, 09:55 AM IST
ಅಂಪೈರ್ ಜೊತೆ ಗಿಲ್ ವಾಗ್ವಾದ; ಕೆಲಕಾಲ ಪಂದ್ಯ ಸ್ಥಗಿತ

ಸಾರಾಂಶ

ರಣಜಿ ಪಂದ್ಯದಲ್ಲಿ  ವಾಗ್ವಾದದಿಂದ ಪಂದ್ಯ ಸ್ಥಗಿತಗೊಂಡ ಘಟನೆ ನಡೆದಿದೆ. ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಶುಭ್‌ಮನ್ ಗಿಲ್ ವಾಗ್ವಾದ ನಡೆಸಿದ ಕಾರಣ ಪಂದ್ಯವೇ ಕೆಲಕಾಲ ಸ್ಥಗಿತಗೊಂಡಿದೆ. 

ಮೊಹಾಲಿ(ಜ.04): ಭಾರತ ಕ್ರಿಕೆಟ್‌ ತಂಡದ ಯುವ ಪ್ರತಿಭೆ ಶುಭ್‌ಮನ್‌ ಗಿಲ್‌, ಇಲ್ಲಿ ಶುಕ್ರವಾರದಿಂದ ಆರಂಭಗೊಂಡ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಅಂಪೈರ್‌ ಜತೆ ವಾಗ್ವಾದ ನಡೆಸಿ ವಿವಾದಕ್ಕೆ ಕಾರಣರಾಗಿದ್ದಾರೆ. ಈ ಪ್ರಸಂಗದಿಂದಾಗಿ ಪಂದ್ಯ 10 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು.

ಇದನ್ನೂ ಓದಿ: ರಣಜಿ ಟ್ರೋಫಿ: ಬೌಲಿಂಗ್‌ನಲ್ಲಿ ಮಿಂಚಿ ಬ್ಯಾಟಿಂಗ್‌ನಲ್ಲಿ ಎಡವಿದ ಕರ್ನಾಟಕ

ಭಾರತ ‘ಎ’ ತಂಡದ ನಾಯಕರಾಗಿರುವ ಗಿಲ್‌, 10 ರನ್‌ ಗಳಿಸಿದ್ದಾಗ ಸುಬೋಧ್‌ ಭಾಟಿ ಎಸೆತದಲ್ಲಿ ಕೀಪರ್‌ಗೆ ಕ್ಯಾಚ್‌ ನೀಡಿ ಔಟಾದರು ಎಂದು ಅಂಪೈರ್‌ ಘೋಷಿಸಿದರು. ನೇರವಾಗಿ ಅಂಪೈರ್‌ ಮೊಹಮದ್‌ ರಫಿ ಬಳಿಗೆ ತೆರಳಿದ ಗಿಲ್‌, ತಾವು ಚೆಂಡು ತಮ್ಮ ಬ್ಯಾಟ್‌ಗೆ ತಗುಲಿಯೇ ಇಲ್ಲ ಹೇಗೆ ಔಟ್‌ ನೀಡಿದಿರಿ ಎಂದು ವಾದಕ್ಕಿಳಿದರು. ಬಳಿಕ ಸ್ಕೆ$್ವೕರ್‌ ಲೆಗ್‌ ಅಂಪೈರ್‌ ಪಶ್ಚಿಮ್‌ ಪಾಠಕ್‌ರನ್ನು ಸಂಪರ್ಕಿಸಿದ ರಫಿ, ಕೆಲ ಕಾಲ ಚರ್ಚಿಸಿ ಗಿಲ್‌ ಔಟ್‌ ಇಲ್ಲ ಎಂದು ತೀರ್ಪು ಬದಲಿಸಿದರು. ಆದರೆ ಗಿಲ್‌ ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. 23 ರನ್‌ ಗಳಿಸಿ ಔಟಾದರು.

ಇದನ್ನೂ ಓದಿ: ಭಾರತ vs ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ, ತಂಡದ ವಿವರ ಇಲ್ಲಿದೆ!.

ಗಿಲ್‌ ಔಟಾಗಿದ್ದರು ಎಂದು ದೆಹಲಿ ತಂಡದ ಆಟಗಾರರು ಬಲವಾಗಿ ನಂಬಿದ್ದರು. ಇದೇ ಕಾರಣ ಉಪನಾಯಕ ನಿತೀಶ್‌ ರಾಣಾ, ತೀರ್ಪು ಬದಲಿಸಲು ಹೇಗೆ ಸಾಧ್ಯ ಎಂದು ಅಂಪೈರ್‌ಗಳನ್ನು ಪ್ರಶ್ನಿಸಿದರು. ಅಂಪೈರ್‌ ತೀರ್ಪು ಪ್ರಶ್ನಿಸಿ ಅನುಚಿತವಾಗಿ ವರ್ತಸಿದ ಕಾರಣ, ಗಿಲ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!