
ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ಆಯೋಜಿಸುವ ಮಹಾರಾಜ ಟಿ20 ಟೂರ್ನಿ ಟ್ರೋಫಿ ಭಾನುವಾರ ಮೈಸೂರಿನಲ್ಲಿ ಆರಂಭವಾಗಲಿದ್ದು, ರಾಜವಂಶಸ್ಥೆ ಪ್ರಮೋದಾ ದೇವಿ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಮೊದಲ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಸೆಣಸಾಡಲಿದ್ದು, 2ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಶಿವಮೊಗ್ಗ ಸ್ಟೆ್ರೖಕರ್ಸ್ ಮುಖಾಮುಖಿಯಾಗಲಿವೆ. ಎರಡೂ ಪಂದ್ಯಗಳಿಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯ್್ರ ಮೈದಾನ ಆತಿಥ್ಯ ವಹಿಸಲಿದೆ.
ಆರಂಭಿಕ ಹಂತದ ಕೆಲ ಪಂದ್ಯಗಳು ಮೈಸೂರಿನಲ್ಲೇ ನಡೆಯಲಿದ್ದು, ಬಳಿಕ ಫೈನಲ್ ಸೇರಿದಂತೆ ಕೊನೆ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ. 6 ತಂಡಗಳ ನಡುವಿನ ಟೂರ್ನಿ ಆ.26ರಂದು ಕೊನೆಗೊಳ್ಳಲಿದೆ. ಬೆಂಗಳೂರು ತಂಡಕ್ಕೆ ಮಯಾಂಕ್ ಅಗರ್ವಾಲ್, ಗುಲ್ಬರ್ಗಾಕ್ಕೆ ಮನೀಶ್ ಪಾಂಡೆ, ಮೈಸೂರಿಗೆ ಕರುಣ್ ನಾಯರ್, ಶಿವಮೊಗ್ಗ ತಂಡಕ್ಕೆ ಕೆ.ಗೌತಮ್, ಹುಬ್ಬಳ್ಳಿ ತಂಡಕ್ಕೆ ಅಭಿಮನ್ಯು ಮಿಥುನ್ ಮತ್ತು ಮಂಗಳೂರಿಗೆ ಆರ್.ಸಮಥ್ರ್ ನಾಯಕತ್ವ ವಹಿಸಲಿದ್ದಾರೆ.
2ನೇ ಟಿ20: ಐರ್ಲೆಂಡ್ ವಿರುದ್ಧ ಗೆದ್ದ ದ.ಆಫ್ರಿಕಾ
ಬ್ರಿಸ್ಟೋಲ್: ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ದ.ಆಫ್ರಿಕಾ 44 ರನ್ ಗೆಲುವು ಸಾಧಿಸಿದ್ದು, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ದ.ಆಫ್ರಿಕಾ 6 ವಿಕೆಟ್ ಕಳೆದುಕೊಂಡು 182 ರನ್ ಕಲೆ ಹಾಕಿತು. ಹೆಂಡ್ರಿಕ್ಸ್ 42 ಹಾಗೂ ಕ್ಲಾಸೆನ್ 39 ರನ್ ಸಿಡಿಸಿದರು. ಕಠಿಣ ಗುರಿ ಬೆನ್ನತ್ತಿದ ಐರ್ಲೆಂಡ್ 18.5 ಓವರ್ಗಳಲ್ಲಿ 138 ರನ್ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ವೇಯ್್ನ ಪಾರ್ನೆಲ್ 30 ರನ್ಗೆ 5 ವಿಕೆಟ್ ಕಿತ್ತರು.
ಟಿ20: ನೆದರ್ಲೆಂಡ್್ಸ ವಿರುದ್ಧ ನ್ಯೂಜಿಲೆಂಡ್ಗೆ 2-0 ಜಯ
ಆಮ್ಸ್ಟೆರ್ಡಾಮ್: ನೆದೆರ್ಲೆಂಡ್್ಸ ವಿರುದ್ಧದ 2ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 8 ವಿಕೆಟ್ ಗೆಲುವು ಸಾಧಿಸಿದ್ದು, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್್ಸ 4 ವಿಕೆಟ್ಗೆ 147 ರನ್ ಕಲೆ ಹಾಕಿತು. ಬಸ್ ಡೆ ಲೀಡ್ 53 ರನ್ ಗಳಿಸಿದರೆ, ಟಾಮ್ ಕೂಪರ್ 26, ಎಡ್ವರ್ಡ್ಸ್ 26 ರನ್ ಕೊಡುಗೆ ನೀಡಿದರು. ಸಾಧಾರಣ ಗುರಿ ಬೆನ್ನತ್ತಿದ ಕಿವೀಸ್ 14 ಓವರಲ್ಲಿ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಮಿಚೆಲ್ ಸ್ಯಾಂಟ್ನರ್ 77 ಹಾಗೂ ಡ್ಯಾರಿಲ್ ಮಿಚೆಲ್ 51 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.