ಮಹಾರಾಜ ಟ್ರೋಫಿ: ಪ್ಲೇ ಆಫ್‌ ಪಂದ್ಯಗಳಿಗೆ ಕ್ಷಣಗಣನೆ ಶುರು

Published : Aug 26, 2025, 11:42 AM IST
Mangaluru Dragons

ಸಾರಾಂಶ

ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡ ಶಿವಮೊಗ್ಗ ಲಯನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಕ್ವಾಲಿಫೈಯರ್‌-1ಕ್ಕೆ ಲಗ್ಗೆ ಇಟ್ಟಿದೆ. ಮಂಗಳೂರು ಡ್ರ್ಯಾಗನ್ಸ್‌ ಕೂಡ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ ಗೆದ್ದು ಅಗ್ರ-2 ಸ್ಥಾನ ಭದ್ರಪಡಿಸಿಕೊಂಡಿದೆ. 

ಮೈಸೂರು: ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಲೀಗ್‌ ಹಂತದ ಪಂದ್ಯಗಳಿಗೆ ತೆರೆ ಬಿದ್ದಿದೆ. ಬುಧವಾರ ಲೀಗ್‌ನ 2 ಕೊನೆ ಪಂದ್ಯಗಳು ನಡೆದಿದ್ದು, ಪ್ಲೇ-ಆಫ್‌ ಪಂದ್ಯಗಳು ಗುರುವಾರ ಆರಂಭಗೊಳ್ಳಲಿವೆ.

ಲೀಗ್‌ ಹಂತ ಮುಕ್ತಾಯಕ್ಕೆ ಮಂಗಳೂರು ಡ್ರ್ಯಾಗನ್ಸ್‌(15 ಅಂಕ) ಹಾಗೂ ಹುಬ್ಬಳ್ಳಿ ಟೈಗರ್ಸ್‌(14 ಅಂಕ) ಅಗ್ರ-2 ಸ್ಥಾನಗಳನ್ನು ಪಡೆದು ಕ್ವಾಲಿಫೈಯರ್‌-1ಕ್ಕೆ ಅರ್ಹತೆ ಪಡೆದುಕೊಂಡಿತು. ಇದರಲ್ಲಿ ಗೆದ್ದ ತಂಡಕ್ಕೆ ನೇರವಾಗಿ ಫೈನಲ್‌ಗೇರುವ ಅವಕಾಶ ಸಿಗಲಿದೆ. ಗುಲ್ಬರ್ಗ ಮಿಸ್ಟಿಕ್ಸ್‌(12 ಅಂಕ) ಹಾಗೂ ಬೆಂಗಳೂರು ಬ್ಲಾಸ್ಟರ್ಸ್‌(10 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನಿಯಾಗಿದ್ದು, ಎಲಿಮಿನೇಟರ್‌ನಲ್ಲಿ ಪರಸ್ಪರ ಆಡಲಿದೆ. ಈ ಎರಡೂ ಪಂದ್ಯಗಳು ಮಂಗಳವಾರ ನಡೆಯಲಿವೆ.

ನಾಳೆ ಕ್ವಾಲಿಫೈಯರ್‌-2:

ಟೂರ್ನಿಯ ಕ್ವಾಲಿಫೈಯರ್‌-2 ಪಂದ್ಯ ಬುಧವಾರ ನಡೆಯಬೇಕಿದೆ. ಕ್ವಾಲಿಫೈಯರ್‌-1ರಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್‌ನಲ್ಲಿ ಗೆದ್ದ ತಂಡಗಳು ಇದರಲ್ಲಿ ಆಡಲಿವೆ. ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ. ಫೈನಲ್‌ ಪಂದ್ಯ ಆ.28ರಂದು ನಡೆಯಲಿದೆ.

ಹುಬ್ಬಳ್ಳಿ ಅಬ್ಬರಕ್ಕೆ ಶಿವಮೊಗ್ಗ ತತ್ತರ

ಮೈಸೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಲೀಗ್‌ ಹಂತದ ತನ್ನ ಕೊನೆ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ಅಬ್ಬರಿಸಿ ಬೊಬ್ಬಿರಿಸಿದೆ. ಸೋಮವಾರ ಶಿವಮೊಗ್ಗ ಲಯನ್ಸ್‌ ವಿರುದ್ಧ ಪಂದ್ಯದಲ್ಲಿ ಹುಬ್ಬಳ್ಳಿ 105 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ತಂಡ 7ನೇ ಗೆಲುವಿನೊಂದಿಗೆ ಅಂಕಪಟ್ಟಿಯ ಅಗ್ರ-2ರಲ್ಲಿ ಸ್ಥಾನ ಪಡೆದು, ಕ್ವಾಲಿಫೈಯರ್‌-1ಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು. ಶಿವಮೊಗ್ಗ 10ರಲ್ಲಿ 8ನೇ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 3 ವಿಕೆಟ್‌ಗೆ 195 ರನ್‌ ಕಲೆಹಾಕಿತು. ದೇವದತ್‌ ಪಡಿಕ್ಕಲ್‌ 15 ಎಸೆತಕ್ಕೆ 33 ರನ್‌ ಗಳಿಸಿ ಔಟಾದರೆ, ಮೊಹಮ್ಮದ್‌ ತಾಹ(15 ಎಸೆತಕ್ಕೆ 8 ರನ್‌) ನಿರಾಸೆ ಅನುಭವಿಸಿದರು. ಆದರೆ ಕೃಷ್ಣನ್‌ ಶ್ರೀಜಿತ್‌ ಹಾಗೂ ಅಭಿನವ್‌ ಮನೋಹರ್‌ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಶ್ರೀಜಿತ್‌ 40 ಎಸೆತಕ್ಕೆ 2 ಬೌಂಡರಿ, 6 ಸಿಕ್ಸರ್‌ನೊಂದಿಗೆ ಔಟಾಗದೆ 66 ರನ್‌ ಸಿಡಿಸಿದರೆ, ಅಭಿನವ್‌ 35 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 63 ರನ್‌ ಚಚ್ಚಿದರು. ಈ ಜೋಡಿ ಮುರಿಯದ 4ನೇ ವಿಕೆಟ್‌ಗೆ 126 ರನ್‌ ಸೇರಿಸಿತು.

ದೊಡ್ಡ ಗುರಿ ನೋಡಿಗೆ ಕಂಗಾಲಾದ ಶಿವಮೊಗ್ಗ 15.5 ಓವರ್‌ಗಳಲ್ಲಿ ಕೇವಲ 90 ರನ್‌ಗೆ ಆಲೌಟಾಯಿತು. ಧ್ರುವ್‌ ಪ್ರಭಾಕರ್‌(29) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಯಶ್‌ ರಾಜ್‌ ಪೂಂಜ 3 ವಿಕೆಟ್‌ ಕಿತ್ತರು.

ಮಂಗ್ಳೂರಿಗೆ ಭರ್ಜರಿ ಗೆಲುವಿನ ಸಿಹಿ

2ನೇ ಪಂದ್ಯದಲ್ಲಿ ಗುಲ್ಬರ್ಗ ವಿರುದ್ಧ ಮಂಗಳೂರು 39 ರನ್‌ಗಳಲ್ಲಿ ಗೆದ್ದಿತು. ಮಂಗಳೂರು 6 ವಿಕೆಟ್‌ಗೆ 180 ರನ್‌ ಗಳಿಸಿತು. ಶಿವರಾಜ್‌ 22 ಎಸೆತಕ್ಕೆ ಔಟಾಗದೆ 46 ರನ್‌ ಸಿಡಿಸಿದರು. ಗುಲ್ಬರ್ಗ 9 ವಿಕೆಟ್‌ಗೆ 141 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್ ತಂಡದಲ್ಲಿ ಸಂಚಲನ: ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು?
ಕೊಹ್ಲಿ-ರೋಹಿತ್ ಮುಂದಿನ ವಿಜಯ್ ಹಜಾರೆ ಟ್ರೋಫಿ ಮ್ಯಾಚ್ ಆಡೋದು ಯಾವಾಗ? ಲೈವ್ ಸ್ಟ್ರೀಮ್ ಇರುತ್ತಾ?