
ಬೆಂಗಳೂರು(ಏ.02) ಆರ್ಸಿಬಿ ಫಾರ್ಮ್, ಕಳೆದೆರಡು ಪಂದ್ಯದಲ್ಲಿ ಗೆಲುವು ಮಾತ್ರವಲ್ಲ, ನೀಡಿದ ಪ್ರದರ್ಶನ, ಇದೀಗ ತವರಿನ ಮೈದಾನ, ಅಭಿಮಾನಿಗಳ ಬೆಂಬಲ. ಹೀಗೆ ಎಲ್ಲಾ ಲೆಕ್ಕಾಚಾರ ಮಾಡಿ ಹ್ಯಾಟ್ರಿಕ್ ಗೆಲುವಿನ ಅಲೆಯಲ್ಲಿದ್ದ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಆರಂಭದಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರ ಇರಲಿಲ್ಲ. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಪರದಾಡಬೇಕಾಯಿತು. ಆದರೆ ಅಂತಿಮ ಹಂತದ ಹೋರಾಟ ಆರ್ಸಿಬಿ ಕೈಹಿಡಿಯಿತು ಇದರ ಪರಿಣಾಮ ಆರ್ಸಿಬಿ 8 ವಿಕೆಟ್ ಕಳೆದುಕೊಂಡು 169 ರನ್ ಸಿಡಿಸಿದೆ.
ಗುಜರಾತ್ ಟೈಟಾನ್ಸ್ಗೆ ಆರ್ಸಿಬಿ 170 ರನ್ ಟಾರ್ಗೆಟ್ ನೀಡಿದೆ. ಈ ಟಾರ್ಗೆಟ್ ಆರ್ಸಿಬಿ ಡಿಫೆಂಡ್ ಮಾಡಿಕೊಳ್ಳುತ್ತಾ? ಚಿನ್ನಸ್ವಾಮಿ ಮೈದಾನದಲ್ಲಿ ಡಿಫೆಂಡ್ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಆರ್ಸಿಬಿ ಅತ್ಯಲ್ಪ ಮೊತ್ತವನ್ನು ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಡಿಫೆಂಡ್ ಮಾಡಿಕೊಂಡಿದೆ. ಆದರೆ ಈ ಬಾರಿ ಇದು ಸಾಧ್ಯವಾಗುತ್ತಾ ಅನ್ನೋದು ಯಕ್ಷ ಪ್ರಶ್ನೆ.
ಆರ್ಸಿಬಿ ಬ್ಯಾಟಿಂಗ್
ಕಳೆದೆರಡು ಪಂದ್ಯ ನೋಡಿ, 3ನೇ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್ ನೋಡಿದರೆ ನಿರಾಸೆಯಾಗುವುದು ಖಚಿತ. ಕಾರಣ ಇಂದು ಆರ್ಸಿಬಿ ಅಬ್ಬರಿಸುವ ಮೊದಲೇ ವಿಕೆಟ್ ಕೈಚೆಲ್ಲಿತು. ವಿರಾಟ್ ಕೊಹ್ಲಿ ಕೇವಲ 7 ರನ್ ಸಿಡಿಸಿ ಔಟಾಗಿದ್ದರು. ಪಿಲಿಫ್ ಸಾಲ್ಟ್ 14 ರನ್ ಸಿಡಿಸಿ ನಿರ್ಗಮಿಸಿದರು. ದೇವದತ್ ಪಡಿಕ್ಕಲ್ ಕೇವಲ 4 ರನ್ ಸಿಡಿಸಿದರು. ನಾಯಕ ರಜತ್ ಪಾಟೀದಾರ್ 12 ರನ್ ಸಿಡಿಸಿ ಔಟಾದರು. 42 ರನ್ಗೆ ಆರ್ಸಿಬಿ 4 ವಿಕೆಟ್ ಕಳೆದುಕೊಂಡಿತ್ತು.
ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಜಿತೇಶ್ ಶರ್ಮಾ ಜೊತೆಯಾಟದಿಂದ ಆರ್ಸಿಬಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಹೊರಬಂದಿತು. ಜಿತೇಶ್ ಶರ್ಮಾ 33 ರನ್ ಸಿಡಿಸಿದರು. ಲಿವಿಂಗ್ಸ್ಟೋನ್ ಬ್ಯಾಟಿಂಗ್ ಮುಂದುವರಿಸಿದರೆ, ಕ್ರುನಾಲ್ ಪಾಂಡ್ಯ ಅಬ್ಬರಸಿಲಿಲ್ಲ. 5 ರನ್ ಸಿಡಿಸಿ ನಿರ್ಗಮಿಸಿದರು.
ಲಿಯಾಮ್ ಲಿವಿಂಗ್ ಸ್ಟೋನ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನೆರವಾಯಿತು. ಅಂತಿಮ ಹಂತದಲ್ಲಿ ಆರ್ಸಿಬಿ ಅಬ್ಬರಿಸಿತು. ಲಿವಿಂಗ್ಸ್ಟೋನ್ 54 ರನ್ ಸಿಡಿಸಿದರು. ಇತ್ತ ಡೇವಿಡ್ 32 ರನ್ ಸಿಡಿಸಿದರು. ಈ ಮೂಲಕ 169 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.