IPL 2022: ಈತನಿಗೆ ಕುಟುಂಬಕ್ಕಿಂತ ಕ್ರಿಕೆಟ್​​ ಆಟವೇ ದೊಡ್ಡದಾಯ್ತು..!

Published : May 03, 2022, 04:59 PM IST
IPL 2022: ಈತನಿಗೆ ಕುಟುಂಬಕ್ಕಿಂತ ಕ್ರಿಕೆಟ್​​ ಆಟವೇ ದೊಡ್ಡದಾಯ್ತು..!

ಸಾರಾಂಶ

* ಮುಂಬೈ ಇಂಡಿಯನ್ಸ್‌ ಪರ ಮಿಂಚಿನ ಪ್ರದರ್ಶನ ತೋರಿದ ಕುಮಾರ್​ ಕಾರ್ತಿಕೇಯ * 9 ವರ್ಷದಿಂದ ಆಡಿ ಬೆಳೆದ ಮನೆಗೆ ಈವರೆಗೆ ಕಾಲಿಟ್ಟಿಲ್ಲ ಕುಮಾರ್​ ಕಾರ್ತಿಕೇಯ * ಐಪಿಎಲ್​​ನಲ್ಲಿ ಆಡಿದ ಬಳಿಕ ಮನೆಗೆ ಮರಳಿ ಹೋಗಲು ನಿರ್ಧರಿಸಿದ್ದಾರೆ

ಬೆಂಗಳೂರು(ಮೇ.03): ಯಾರಿಗೂ ಗೊತ್ತಿರದ, ಕಿವಿಗೂ ಬೀಳದ ಹೊಸ ಹೆಸರುಗಳು ಐಪಿಎಲ್​​​ನಲ್ಲಿ​​ ಕೇಳಿ ಬರ್ತಿವೆ. ಮುಂಬೈ ತಂಡದ ತಿಲಕ್​​​​ ವರ್ಮಾ, ಲಖನೌದ ಆಯುಶ್​ ಬದೋನಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಈಗ ಈ ಲಿಸ್ಟ್​​ಗೆ ಮತ್ತೊಂದು ಹೆಸರು ಸೇರ್ಪಡೆಯಾಗ್ತಿದೆ. ಆ ಹೆಸರೇ ಕುಮಾರ್​ ಕಾರ್ತಿಕೇಯ (Kumar Kartikeya). 

24 ವರ್ಷದ ಕಾರ್ತಿಕೇಯ, ಬೇಸಿಕಲಿ ಲೆಫ್ಟ್ ಆರ್ಮ್​ ಬೌಲರ್​​. ಮಧ್ಯಪ್ರದೇಶದ ಪರ ಡೊಮೆಸ್ಟಿಕ್​​​ನಲ್ಲಿ ಛಾಪು ಮೂಡಿಸಿದ್ದಾನೆ. ಇಷ್ಟಾದ್ರು ಈ ಎಡಗೈ ವೇಗಿಯ ಹೆಸರು ಯಾರೊಬ್ಬರಿಗೂ ಗೊತ್ತಿರ್ಲಿಲ್ಲ. ಯಾವಾಗ ಮುಂಬೈ ಇಂಡಿಯನ್ಸ್​ ತಂಡವನ್ನ ಸೇರಿದ್ರೋ, ಆಗ ಕಾರ್ತಿಕೇಯ ಹೆಸರು ಸ್ವಲ್ಪ ಮಟ್ಟಿಗೆ ನೋಟಿಸ್​ ಆಗಿತ್ತು. ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ  ಡೆಬ್ಯು ಪಂದ್ಯದಲ್ಲಿ 1 ವಿಕೆಟ್ ಪಡೆಯುತ್ತಿದ್ದಂತೆ ಕಾರ್ತಿಕೇಯ ಹೆಸರು ಮತ್ತಷ್ಟು ಪ್ರಜ್ವಲಿಸಿತು. ಈಗ ತಾನೇ ಐಪಿಎಲ್​ ಲೋಕಕ್ಕೆ ಅಂಬೆಗಾಲಿಟ್ಟಿರೋ ಮಧ್ಯಪ್ರದೇಶ ವೇಗಿಯ ಕ್ರಿಕೆಟ್​ ಲೈಫ್​​ ಒಂದು ಸ್ಪೂರ್ತಿ. ಆ ಇಂಟ್ರೆಸ್ಟಿಂಗ್​​ ಕಥೆಯನ್ನ ನಾವೀಗ ಹೇಳ್ತೀವಿ ಕೇಳಿ.

ಏನನ್ನಾದ್ರು ಸಾಧಿಸುವ ಛಲದಿಂದ ಕುಟುಂಬ ತೊರೆದ ಯುವವೇಗಿ: 

ಯಸ್​​​, ನಮ್ಮ ಕಣ್ಣ ಮುಂದೆ ಅನೇಕ ಕ್ರಿಕೆಟರ್ಸ್​ ಬಡತನ ಮೆಟ್ಟಿ ನಿಂತು ದೊಡ್ಡ ಸಾಧನೆ ಮಾಡಿದ್ದನ್ನ ನೀವೆಲ್ಲರೂ ನೋಡಿದ್ದೀರಾ. ಅಂತೆಯೇ ಈ ಕಾರ್ತಿಕೇಯ ಕ್ರಿಕೆಟ್​​​ನಲ್ಲಿ ಏನನ್ನಾದರೂ ಸಾಧಿಸಲೇಬೇಕು ಅನ್ನುವ ಛಲದಿಂದ 2014ರಲ್ಲೇ ಮನೆ ತೊರೆದಿದ್ದಾರೆ. 9 ವರ್ಷದಿಂದ ಆಡಿ ಬೆಳೆದ ಮನೆಗೆ ಈವರೆಗೆ ಕಾಲಿಟ್ಟಿಲ್ಲ. ಕುಟುಂಬದವರು ಮನೆಗೆ ಬಾ ಎಂದ್ರೂ ಆ ಕಡೆಗೆ ಒಮ್ಮೆಯೂ ತಿರುಗಿ ನೋಡಿಲ್ಲ. ಈ ಸತ್ಯವನ್ನು ವೇಗಿ ಕುಮಾರ್​ ಕಾರ್ತಿಕೇಯ ಈಗ ಬಿಚ್ಚಿಟ್ಟಿದ್ದಾರೆ.

IPL 2022 ಜಡೇಜಾ ಚೆನ್ನೈ ಸೂಪರ್‌ ಕಿಂಗ್ಸ್‌ ಕ್ಯಾಪ್ಟನ್ಸಿ ತೊರೆದಿದ್ದು ಸ್ವನಿರ್ಧಾರ ಅಲ್ವಾ..?

'ನಾನು ಕಳೆದ ಒಂಭತ್ತು ವರ್ಷದಿಂದ ಮನೆಗೆ ಹೋಗಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದ ಬಳಿಕವೇ ಹೋಗಲು ನಿರ್ಧರಿಸಿದ್ದೇ. ತಂದೆ-ತಾಯಿ ಆಗಾಗ ಪೋನ್​ ಮಾಡಿ ಕರೆಯುತ್ತಿದ್ದರು. ಆದರೂ ಹೋಗಲಿಲ್ಲ. ಕೊನೆಗೆ ಐಪಿಎಲ್​​ನಲ್ಲಿ ಆಡಿದ ಬಳಿಕ ಮನೆಗೆ ಮರಳಿ ಹೋಗಲು ನಿರ್ಧರಿಸಿದ್ದೇನೆ.’ಎಂದು ಮುಂಬೈ ಇಂಡಿಯನ್ಸ್ (Mumbai Indians)​ ತಂಡದ ವೇಗಿ ಕುಮಾರ್​ ಕಾರ್ತಿಕೇಯ ಹೇಳಿದ್ದಾರೆ. 

ಮುಂಬೈ ತಂಡದ ಕಾಯಂ ಆಟಗಾರನಾಗ್ತಾರಾ ಕಾರ್ತಿಕೇಯ:

ಕೊನೆಗೂ 9 ವರ್ಷದ ಬಳಿಕ ಹುಟ್ಟಿದ ಊರಿಗೆ ತೆರಳು ಕಾರ್ತಿಕೇಯ ಸಜ್ಜಾಗಿದ್ದು ನಿಜಕ್ಕೂ ಖುಷಿಯ ವಿಚಾರ.ಈಗ ತಾನೇ ಕಲರ್​ಫುಲ್​​​ ಟೂರ್ನಿಗೆ ಧುಮುಕಿರೋ ಈ ಯಂಗ್ ಬೌಲರ್​​​​​​ ಸಿಕ್ಕ ಅವಕಾಶಗಳನ್ನ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಇನ್ನುಳಿದ ಪಂದ್ಯಗಳಲ್ಲಿ ಅದ್ಭುತ ಆಟವಾಡಿದ್ರೆ, ಮುಂಬೈ ತಂಡದ ಕೀ ಬೌಲರ್ ಆಗಿ ರೂಪಗೊಳ್ಳಬಹುದು. ಅಂತಹದೊಂದು ಪ್ರದರ್ಶನವನ್ನ 20 ಲಕ್ಷದ ಬೌಲರ್​ ನೀಡ್ತಾರಾ ? ಇಲ್ಲ ಹೀಗೆ ಬಂದು ಹಾಗೇ ಮರೆಯಾಗ್ತಾರಾ ಅನ್ನೋದನ್ನ ಕಾದು ನೋಡಬೇಕು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?