David Warner: ಈತ ಮಾಡ್ರನ್​​ ಕ್ರಿಕೆಟ್​​ನ ‘ತ್ಯಾಗ’ರಾಜ..!

Published : May 07, 2022, 04:28 PM IST
David Warner: ಈತ ಮಾಡ್ರನ್​​ ಕ್ರಿಕೆಟ್​​ನ ‘ತ್ಯಾಗ’ರಾಜ..!

ಸಾರಾಂಶ

* ಡೇವಿಡ್ ವಾರ್ನರ್‌ ಓರ್ವ ಟೀಂ ಪ್ಲೇಯರ್ ಎನ್ನುವುದು ಮತ್ತೊಮ್ಮೆ ಸಾಬೀತು * ಸನ್‌ರೈಸರ್ಸ್ ಎದುರು ಶತಕ ಬಾರಿಸಲು ಅವಕಾಶವಿದ್ದರೂ ತ್ಯಾಗ ಮಾಡಿದ ವಾರ್ನರ್‌ * ತಂಡದ ಗೆಲುವಿಗಾಗಿ ಶತಕವನ್ನೇ ಬಲಿಕೊಟ್ಟ ಎಡಗೈ ಬ್ಯಾಟರ್‌

ಮುಂಬೈ(ಮೇ.07): ಸಚಿನ್​​ ತೆಂಡುಲ್ಕರ್​​​ (Sachin Tendulkar) ಗಾಡ್​​ ಆಫ್​ ಕ್ರಿಕೆಟರ್​​. ಶತಕಗಳ ಶತಕರಾಜ. ಇಂದಿಗೂ ಸಚಿನ್​​​ ಹೆಸರು ಕೇಳಿದ್ರೆ ಎಲ್ಲರ ಮನಸ್ಸಲ್ಲಿ ಹೆಮ್ಮೆಯ ಭಾವ ಮೂಡುತ್ತೆ. ಅಂತಹ ಕೊಡುಗೆಯನ್ನ ಭಾರತೀಯ ಕ್ರಿಕೆಟ್​ಗೆ ದಿ ಗ್ರೇಟ್​ ಲೆಜೆಂಡ್ ನೀಡಿದ್ದಾರೆ. ಆದ್ರೆ ಇಷ್ಟೆಲ್ಲಾ ಸಾಧಿಸಿದ ಸವ್ಯಸಾಚಿ ಸಚಿನ್​​​ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ರು ಸ್ವಾರ್ಥಿ ಕ್ರಿಕೆಟರ್​ ಅನ್ನೋ ಹಣೆಪಟ್ಟಿ ಬದಲಾಗ್ಲಿಲ್ಲ. ಸೆಂಚುರಿ ವಿಷಯದಲ್ಲಿ ಸಚಿನ್​​  ತುಂಬಾ ಸ್ವಾರ್ಥಿ ಅನ್ನೋ ಅಪವಾದ ಈಗಲೂ ಇದೆ. ಸಚಿನ್​ರನ್ನು ಹೆಗಲಮೇಲೆ ಹೊತ್ತು ಮೆರೆದಾಡಿಸಿದ ಅಭಿಮಾನಿ ದೇವರುಗಳಿಗೆ ಅವರ ಆಟದ ಬಗ್ಗೆ ಹೊಗಳುವ, ತೆಗಳುವ ಎರಡೂ ಹಕ್ಕಿದೆ ಅನ್ನೋದನ್ನ ಮರೆಯುವಂತಿಲ್ಲ.

ಸದ್ಯ ನಾವು ಸಚಿನ್​ ಸ್ವಾರ್ಥಿಯಾಗಿದ್ರಾ ಅನ್ನೋ ಟಾಪಿಕ್​​​ ಎತ್ತಲು ಕಾರಣ ಈ ತ್ಯಾಗರಾಜ. ತಂಡದ ಗೆಲುವಿಗಾಗಿ ಈತ ತನ್ನ ಸೆಂಚುರಿಯನ್ನೇ ತ್ಯಜಿಸಿ, ಮಾಡ್ರನ್​ ಕ್ರಿಕೆಟ್​ನ ರಿಯಲ್​​ ನಿಸ್ವಾರ್ಥ ಕ್ರಿಕೆಟರ್ ಅನ್ನಿಸಿಕೊಂಡಿದ್ದಾನೆ. ಅಂದಹಾಗೇ ಆ ತ್ಯಾಗಮಯಿ ಆಟಗಾರ ಬೇರಾರು ಅಲ್ಲ, ಆತನೇ ಡೇವಿಡ್​ ವಾರ್ನರ್​.

ನನಗೆ ಸೆಂಚುರಿ ಮುಖ್ಯವಲ್ಲ, ತಂಡದ ಗೆಲುವೇ ಮುಖ್ಯ:

ಯೆಸ್​​, ಈಗಾಗ್ಲೆ ತಮ್ಮ ಸ್ಫೋಟಕ ಆಟದೊಂದಿಗೆ ಡೇವಿಡ್​ ವಾರ್ನರ್ (David Warner) ಹೆಸರು ವಾಸಿಯಾಗಿದ್ದಾರೆ. ಈಗ ಆ ಜನಪ್ರೀಯತೆ ಮತ್ತಷ್ಟು ಹೆಚ್ಚಾಗುವ ಕೆಲಸವೊಂದನ್ನು ವಾರ್ನರ್​ ಮಾಡಿದ್ದಾರೆ. ಸನ್‌ರೈಸರ್ಸ್‌ ಹೈದ್ರಾಬಾದ್​ (Sunrisers Hyderabad) ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗಾಗಿ ತನ್ನ ಸೆಂಚುರಿಯನ್ನೇ ಬಲಿ ಕೊಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ನಿಜ, ಹೈದ್ರಾಬಾದ್​​ ವಿರುದ್ಧ  ವೀರಾವೇಶ ತೋರಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಆರಂಭಿಕ ಬ್ಯಾಟರ್ ವಾರ್ನರ್​ ಸ್ಪೋಟಕ 92 ರನ್​ ಗಳಿಸಿ ಗೆಲುವಿಗೆ ಕಾರಣರಾಗಿದ್ರು. ಈ ಪಂದ್ಯದಲ್ಲಿ ಲೆಫ್ಟಿ ಆಟಗಾರನಿಗೆ ಶತಕ ಸಿಡಿಸುವ ಉತ್ತಮ ಅವಕಾಶವಿತ್ತು. 19 ಓವರ್​ ಮುಕ್ತಾಯದಂತ್ಯಕ್ಕೆ ವಾರ್ನರ್​​ 92 ರನ್​ ಗಳಿಸಿದ್ರು. ಕೊನೆ ಓವರ್​​ನಲ್ಲಿ  ಇನ್ನೂ ಎಂಟು ಗಳಿಸಿದ್ರೆ ಪ್ರಸಕ್ತ ಐಪಿಎಲ್​​ನಲ್ಲಿ ಡೇವಿಡ್ ವಾರ್ನರ್ ಮೊದಲ ಸೆಂಚುರಿ ದಾಖಲಿಸಬಹುದಿತ್ತು. ಇದಕ್ಕೆ ಸಹ ಆಟಗಾರ ರೋಮನ್​ ಪೊವೆಲ್ (Rovman Powell)​ ಕೂಡ ಸಹಕರಿಸಿದ್ರು. ಆದ್ರೆ ವಾರ್ನರ್​​ ಇದನ್ನ ತಿರಸ್ಕರಿಸಿದ್ರು. ನೀನೇ ಎಲ್ಲಾ ಬಾಲ್​​ಗಳನ್ನ ಆಡು ಎಂದು ವಾರ್ನರ್​ ಹೇಳಿದ್ರು ಎಂದು ಪೊವೆಲ್​​ ಹೇಳಿದ್ದಾರೆ.

IPL 2022: ಸನ್‌ರೈಸರ್ಸ್‌ ಮುಳುಗಿಸಿ ಸೇಡು ತೀರಿಸಿಕೊಂಡ ಡೇವಿಡ್ ವಾರ್ನರ್..!​

ಕೇಳಿದ್ರಾ ಸ್ಪೋಟಕ ದಾಂಡಿಗ ಪೊವೆಲ್​​ ಹೇಳಿದ ಮಾತುಗಳನ್ನ. ಫೈನಲ್​​ ಓವರ್ ಶುರುವಾಗೋಕು ಮುನ್ನ ಪೊವೆಲ್​​​, ವಾರ್ನರ್ ಜೊತೆ ಮಾತುಕತೆ ನಡೆಸಿ, ಮೊದಲ ಬಾಲ್ ಸಿಂಗಲ್​ ತೆಗೆದು ನಿಮಗೆ ಸ್ಟ್ರೈಕ್​​​​​ಕೊಡುವುದಾಗಿ ವಾರ್ನರ್​ಗೆ ಹೇಳಿದ್ದರಂತೆ. ಆದ್ರೆ ಇದನ್ನ ಒಪ್ಪದ ಆಸೀಸ್ ಬ್ಯಾಟರ್​​​, ನಾನು ಹಾಗೆಲ್ಲಾ ಮಾಡಲ್ಲ. ನೀನೆ ಎಲ್ಲಾ ಬಾಲ್​ಗಳನ್ನ ಆಡಲು ಪ್ರಯತ್ನಿಸು ಎಂದರಂತೆ. 

ನಿಜಕ್ಕೂ ವಾರ್ನರ್​​​​ ಎಂತಹ ನಿಸ್ವಾರ್ಥಿ ಕ್ರಿಕೆಟರ್ ಅಲ್ವಾ ? ಬೇರೆ ಯಾರೇ ಆಗಿದ್ರೆ ಸಿಂಗಲ್ ತೆಗೆದುಕೊಡ್ತೀನಿ ಅಂದಾಗ ಓಕೆ ಎಂದು ಸೆಂಚುರಿ ಪೂರ್ಣಗೊಳಿಸಿಕೊಳ್ಳುವವರು. ಆದ್ರೆ ವಾರ್ನರ್​​​ ಹಾಗೇ ಮಾಡ್ಲಿಲ್ಲ. ತನ್ನ ಸೆಂಚುರಿ ಮಿಸ್ ಆದ್ರೂ ಪರ್ವಾಗಿಲ್ಲ. ನೀನೇ ಆಡು ಎನ್ನುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ನಡೆಯಿಂದ ವಾರ್ನರ್​​​​​ ತಮ್ಮನ್ನ ಪ್ರೀತಿಸುವ ಅಭಿಮಾನಿಗಳ ಹೃದಯಕ್ಕೆ ಮತಷ್ಟು ಹತ್ತಿರ ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ. ಡೇವಿಡ್ ವಾರ್ನರ್ ಓರ್ವ ಟೀಂ ಪ್ಲೇಯರ್ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಾ ಹೇಳಿ..?
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!