IPL 2021: RCB vs PBKS ಇದು ನಿಮ್ಮ ಪ್ರಕಾರ out/Not out?

Published : Oct 03, 2021, 04:48 PM IST
IPL 2021: RCB vs PBKS ಇದು ನಿಮ್ಮ ಪ್ರಕಾರ out/Not out?

ಸಾರಾಂಶ

* ಚರ್ಚೆಗೆ ಗ್ರಾಸವಾದ ದೇವದತ್ ಪಡಿಕ್ಕಲ್‌ ನಾಟೌಟ್‌ ತೀರ್ಪು  * ಶಾರ್ಜಾದಲ್ಲಿ ನಡೆಯುತ್ತಿರುವ ಆರ್‌ಸಿಬಿ-ಪಂಜಾಬ್ ಪಂದ್ಯ  

ಶಾರ್ಜಾ(ಅ.03): ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಹಾಗೂ ಪಂಜಾಬ್ ಕಿಂಗ್ಸ್‌ ನಡುವಿನ ಪಂದ್ಯದಲ್ಲಿ ಥರ್ಡ್‌ ಅಂಪೈರ್ ನೀಡಿದ ತೀರ್ಪೊಂದು ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಪಂಜಾಬ್ ಸ್ಪಿನ್ನರ್‌ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್‌ (Devdutt Padikkal) ಗೆ ಜೀವದಾನ ಸಿಕ್ಕಂತೆ ಆಗಿದೆ.

ಹೌದು, ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಥರ್ಡ್‌ ಅಂಪೈರ್ ನೀಡಿದ ತೀರ್ಪು ಚರ್ಚೆ ಹುಟ್ಟುಹಾಕಿದೆ. ಪಂದ್ಯದ 8ನೇ ಓವರ್‌ ದಾಳಿಗಿಳಿದ ರವಿ ಬಿಷ್ಣೋಯಿ (Ravi Bishnoi) ಬೌಲಿಂಗ್‌ನಲ್ಲಿ ಪಡಿಕ್ಕಲ್ ರಿವರ್ಸ್‌ ಸ್ವೀಪ್‌ ಮಾಡುವ ಯತ್ನ ನಡೆಸಿದರು. ಬಿಷ್ಣೋಯಿ ಗೂಗ್ಲಿ ಗ್ರಹಿಸುವಲ್ಲಿ ಪಡಿಕ್ಕಲ್‌ ವಿಫಲರಾದರು. ಚೆಂಡು ಪಡಿಕ್ಕಲ್ ಗ್ಲೌಸ್‌ ಸವರಿ ವಿಕೆಟ್ ಕೀಪರ್‌ ರಾಹುಲ್‌ ಕೈ ಸೇರಿತು. ಔಟ್‌ಗೆ ಮನವಿ ಸಲ್ಲಿಸಿದರೂ ಆನ್‌ ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ. ತಡಮಾಡದ ರಾಹುಲ್‌ ಡಿಆರ್‌ಎಸ್‌ ಮೊರೆ ಹೋದರು.

IPL 2021: ಪಂಜಾಬ್ ಕಿಂಗ್ಸ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

ಥರ್ಡ್‌ ಅಂಪೈರ್‌ ರಿಪ್ಲೇ ನೋಡಿದಾಗ ಚೆಂಡು ಪಡಿಕ್ಕಲ್‌ ಗ್ಲೌಸ್‌ ಸವರಿ ರಾಹುಲ್ ಕೈಸೇರಿದ್ದು ಸ್ಪಷ್ಟವಾಗಿದ್ದರೂ ಸಹಾ ಅಂಪೈರ್ ನಾಟೌಟ್‌ ನೀಡಿದರು. ಇದು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಯಾರೆಲ್ಲಾ ಏನಂದ್ರು ಇಲ್ಲಿದೆ ನೋಡಿ.

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12 ಓವರ್‌ ಅಂತ್ಯದ ವೇಳೆಗೆ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡು 73 ರನ್‌ ಬಾರಿಸಿದೆ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಚ್‌ನಲ್ಲಿ ಕೂತು ಬೇರೆಯವರ ಆಟ ನೋಡೋದು ಸುಲಭ ಅಲ್ಲ -ಒಂದೂವರೆ ವರ್ಷದ ತಪ್ಪಸ್ಸಿಗೆ ಪಡಿಕ್ಕಲ್ ಭಾವುಕ
ಮಹಾತ್ಮನಿಗೆ ಐಸಿಸಿ ವಿಶೇಷ ಗೌರವ.. 2027ರ ಏಕದಿನ ವಿಶ್ವಕಪ್‌ಗೆ ದಿನಾಂಕ ನಿಗದಿ..!