IPL 2021 ಕೆಕೆಆರ್‌ಗೆ ಮೂರನೇ ಕಪ್ ಗೆದ್ದು ಕೊಡ್ತಾರಾ ಗಿಲ್‌, ರಸೆಲ್‌?

Kannadaprabha News   | Asianet News
Published : Apr 06, 2021, 01:44 PM IST
IPL 2021 ಕೆಕೆಆರ್‌ಗೆ ಮೂರನೇ ಕಪ್ ಗೆದ್ದು ಕೊಡ್ತಾರಾ ಗಿಲ್‌, ರಸೆಲ್‌?

ಸಾರಾಂಶ

2 ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್‌ ಇದೀಗ ಮೂರನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಕೆಕೆಆರ್‌ ತಂಡದ ಬಲ ಹಾಗೂ ದೌರ್ಬಲ್ಯದ ವಿಶ್ಲೇಷಣೆ ಇಲ್ಲಿದೆ ನೋಡಿ. 

ಬೆಂಗಳೂರು(ಏ.06): ಕಳೆದ ಆವೃತ್ತಿಯಲ್ಲಿ ನೆಟ್‌ ರನ್‌ರೇಟ್‌ ಆಧಾರದಲ್ಲಿ ಪ್ಲೇ-ಆಫ್‌ಗೇರುವ ಅವಕಾಶದಿಂದ ವಂಚಿತಗೊಂಡಿದ್ದ ಕೋಲ್ಕತಾ ನೈಟ್‌ರೈಡ​ರ್ಸ್‌, ಈ ವರ್ಷ ಪ್ರಶಸ್ತಿ ರೇಸ್‌ನಲ್ಲಿ ಮುನ್ನುಗ್ಗುವ ಉತ್ಸಾಹದಲ್ಲಿದೆ. ವಿಶ್ವಕಪ್‌ ವಿಜೇತ ನಾಯಕ ಇಯಾನ್‌ ಮೊರ್ಗನ್‌ ತಂಡ ಮುನ್ನಡೆಸಲಿದ್ದ, ಶುಭ್‌ಮನ್‌ ಗಿಲ್‌ ಹಾಗೂ ಆ್ಯಂಡ್ರೆ ರಸೆಲ್‌ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.

ಪ್ರಾಬಲ್ಯ: ಕೆಕೆಆರ್‌ನ ಬಲವೆಂದರೆ ಭಾರತೀಯ ತಾರೆಗಳು. ಪ್ರಮುಖವಾಗಿ ಗಿಲ್‌, ದಿನೇಶ್‌ ಕಾರ್ತಿಕ್‌, ನಿತೀಶ್‌ ರಾಣಾ, ಪ್ರಸಿದ್ಧ್ ಕೃಷ್ಣ, ವರುಣ್‌ ಚಕ್ರವರ್ತಿ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಟಿ20 ಮಾದರಿಯಲ್ಲಿ ಈ ಆಟಗಾರರು ಅನುಭವ ಹೊಂದಿದ್ದಾರೆ. ಇವರೊಂದಿಗೆ ಮಾರ್ಗನ್‌, ರಸೆಲ್‌, ನರೈನ್‌, ಶಕೀಬ್‌, ಕಮಿನ್ಸ್‌, ಫಗ್ರ್ಯೂಸನ್‌, ಸೀಫರ್ಟ್‌, ಬೆನ್‌ ಕಟ್ಟಿಂಗ್‌ರಂತಹ ವಿದೇಶಿ ತಾರೆಯರ ಬಲವೂ ತಂಡಕ್ಕಿದೆ.

IPL 2021 ರಾಯಲ್ಸ್‌ ಲಕ್‌ ಬದಲಿಸ್ತಾರಾ ಮೋರಿಸ್, ಸ್ಟೋಕ್ಸ್?

ದೌರ್ಬಲ್ಯ: ಕಳೆದ ಆವೃತ್ತಿಯಲ್ಲಿ ರಸೆಲ್‌ ಬ್ಯಾಟಿಂಗ್‌ನಲ್ಲಿ ಭಾರೀ ವೈಫಲ್ಯ ಕಂಡಿದ್ದರು. ಹೀಗಾಗಿ ಅವರ ಮೇಲೆ ಒತ್ತಡವಿದೆ. ವಿದೇಶಿ ಆಟಗಾರರ ಆಯ್ಕೆಯಲ್ಲಿ ತಂಡಕ್ಕೆ ಗೊಂದಲ ಎದುರಾಗಲಿದೆ. ಕಮಿನ್ಸ್‌, ಶಕೀಬ್‌, ನರೈನ್‌, ಫಗ್ರ್ಯೂಸನ್‌, ಕಟ್ಟಿಂಗ್‌ ನಡುವೆ ಒಂದು ಸ್ಥಾನಕ್ಕೆ ಪೈಪೋಟಿ ಏರ್ಪಡಬಹುದು. ದಿನೇಶ್‌ ಕಾರ್ತಿಕ್‌ ಸ್ಥಿರತೆ ಕಂಡುಕೊಳ್ಳದಿದ್ದರೆ ತಂಡದ ಸಂಯೋಜನೆಯಲ್ಲಿ ಸಮಸ್ಯೆ ಎದುರಾಗಲಿದೆ.

ಬಲಿಷ್ಠ ಪ್ಲೇಯಿಂಗ್‌ ಇಲೆವೆನ್‌

ಶುಭ್‌ಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ನಿತೀಶ್‌ ರಾಣಾ, ದಿನೇಶ್‌ ಕಾರ್ತಿಕ್‌, ಇಯಾನ್‌ ಮೊರ್ಗನ್‌, ಆ್ಯಂಡ್ರೆ ರಸೆಲ್‌, ಶಕೀಬ್‌ ಅಲ್‌ ಹಸನ್‌, ಪ್ಯಾಟ್‌ ಕಮಿನ್ಸ್‌, ಪ್ರಸಿದ್ಧ್ ಕೃಷ್ಣ, ವರುಣ್‌ ಚಕ್ರವರ್ತಿ, ಹರ್ಭಜನ್‌/ಶಿವಂ ಮಾವಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ