
ಅಹಮ್ಮದಾಬಾದ್(ಏ.26): ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಜೋರ್ಡನ್ ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್ಮನ್ಗಳಿಂದ ಯಾವ ನೆರವು ಇರಲಿಲ್ಲ. ಕೆಕೆಆರ್ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಪ್ಯಾಟ್ ಕಮಿನ್ಸ್, ಸುನಿಲ್ ನರೈನ್ ಸೇರಿದ ಕೆಕೆಆರ್ ಬೌಲಿಂಗ್ ಪಡೆ ಪಂಜಾಬ್ ಕಿಂಗ್ಸ್ ತಂಡವನ್ನು 123 ರನ್ಗಳಗೆ ಕಟ್ಟಿ ಹಾಕಿತು.
ನಾಯಕ ರಾಹುಲ್ 19 ರನ್ ಸಿಡಿಸಿ ಔಟಾದರೆ, ಮಯಾಂಕ್ ಅಗರ್ವಾಲ್ ಹೋರಾಟ ನೀಡಿದರು. ಕ್ರಿಸ್ ಗೇಲ್, ದೀಪಕ್ ಹೂಡ ಆಸರೆಯಾಗಲಿಲ್ಲ. ಹೋರಾಟ ನೀಡಿದ ಅಗರ್ವಾಲ್ 31 ರನ್ ಸಿಡಿಸಿ ಔಟಾದರು.
ಮೊಯಿಸಿಸ್ ಹೆನ್ರಿಕೆಸ್ , ಶಾರೂಖ್ ಖಾನ್ ಅಬ್ಬರಿಸಲಿಲ್ಲ. ಕ್ರಿಸ್ ಜೋರ್ಡನ್ 30 ರನ್ ಕಾಣಿಕೆ ನೀಡಿದರು. ರವಿ ಬಿಶ್ನೋಯ್ ಕೇವಲ 1ರನ್ ಸಿಡಿಸಿ ಔಟಾದರು. ಪರಿಣಾಮ ಪಂಜಾಬ್ ಕಿಂಗ್ಸ್ 9 ವಿಕೆಟ್ ನಷ್ಟಕ್ಕೆ 123 ರನ್ ಸಿಡಿಸಿತು.
ಪ್ರಸಿದ್ಧ್ ಕೃಷ್ಣ 3, ಪ್ಯಾಟ್ ಕಮಿನ್ಸ್ ಹಾಗೂ ಸುನಿಲ್ ನರೈನ್ ತಲಾ 2 ವಿಕೆಟ್ ಕಬಳಿಸಿದರು. ಶಿವಂ ಮಾವಿ ಹಾಗೂ ಚಕ್ರವರ್ತಿ ತಲಾ 1 ವಿಕೆಟ ಕಬಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.