ದುಬೈನಲ್ಲೇ ಐಪಿಎಲ್ ಫಿಕ್ಸ್: ಸಕಲ ಸಿದ್ಧತೆಗಳು ಆರಂಭ..!

Published : Jul 18, 2020, 09:46 AM ISTUpdated : Jul 18, 2020, 09:48 AM IST
ದುಬೈನಲ್ಲೇ  ಐಪಿಎಲ್ ಫಿಕ್ಸ್: ಸಕಲ ಸಿದ್ಧತೆಗಳು ಆರಂಭ..!

ಸಾರಾಂಶ

ಬಹುನಿರೀಕ್ಷಿತ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಂತೆ ಕಾಣುತ್ತಿದೆ. ದುಬೈನಲ್ಲಿ ಟೂರ್ನಿ ಆಯೋಜನೆ ಬಹುತೇಕ ಪಕ್ಕಾ ಎನಿಸಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಆರಂಭವಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದುಬೈ(ಜು.18): 2020ರ ಐಪಿ​ಎಲ್‌ ಟೂರ್ನಿ ಆಯೋಜಿ​ಸಲು ಯುನೈ​ಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಕ್ರಿಕೆಟ್‌ ಸಂಸ್ಥೆ ಎಲ್ಲ ರೀತಿಯ ಸಿದ್ಧತೆ ಮಾಡಿ​ಕೊಂಡಿದ್ದು, ಬಿಸಿ​ಸಿಐನಿಂದ ಅಧಿ​ಕೃತ ಪ್ರಕ​ಟಣೆಯಷ್ಟೇ ಬಾಕಿ ಇದೆ. 

ಕ್ರೀಡಾಂಗಣಗಳಲ್ಲಿ ಪಿಚ್‌ ಸಿದ್ಧ ಪಡಿ​ಸಿದ್ದು, ಅಭ್ಯಾಸಕ್ಕೂ ಸೂಕ್ತ ವ್ಯವಸ್ಥೆ ಮಾಡ​ಲಾ​ಗಿದೆ ಎಂದು ದುಬೈ ಕ್ರೀಡಾಂಗಣದ ಮುಖ್ಯಸ್ಥ ಸಲ್ಮಾನ್‌ ಹನೀಫ್‌, ಶುಕ್ರ​ವಾರ ಮಾಧ್ಯ​ಮ​ಗ​ಳಿಗೆ ಮಾಹಿತಿ ನೀಡಿ​ದ್ದಾರೆ. ದುಬೈ, ಅಬು​ಧಾಬಿ, ಶಾರ್ಜಾದಲ್ಲಿ ಪಂದ್ಯ​ಗ​ಳನ್ನು ಆಯೋ​ಜನೆಗೊಳ್ಳಲಿವೆ ಎಂದು ಸ್ಥಳೀಯ ಮಾಧ್ಯ​ಮ​ವೊಂದು ವರದಿ ಮಾಡಿದೆ. ಆಟ​ಗಾ​ರರು, ಸಿಬ್ಬಂದಿಯ ವಾಸ್ತ​ವ್ಯಕ್ಕೆ ಕ್ರೀಡಾಂಗಣಗಳ ಸುತ್ತ​ಮುತ್ತಲಿನ ಹೋಟೆಲ್‌ಗಳ​ನ್ನು ಬಿಸಿ​ಸಿಐ ಈಗಾ​ಗಲೇ ಗುರು​ತಿ​ಸಿ​ದೆ ಎನ್ನ​ಲಾ​ಗಿದೆ.

ಕುಮಟಾದಿಂದ ಟೀಂ ಇಂಡಿಯಾವರೆಗೆ: ವಿಶ್ವದಲ್ಲೇ ನಂ.1 ಥ್ರೋಡೌನ್ ತಜ್ಞನ ರೋಚಕ ಸ್ಟೋರಿಯಿದು..!

ಮಾರ್ಚ್ 29ರಿಂದ ಮೇ 17ರವರೆಗೆ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಕೊರೋನಾ ಹಾಗೂ ಲಾಕ್‌ಡೌನ್ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಈಗಾಗಲೇ ಏಷ್ಯಾಕಪ್ ಹಾಗೂ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಈ 2 ಟೂರ್ನಿಗಳು ಮುಂದೂಡಲ್ಪಟ್ಟಿರುವುದು ಐಪಿಎಲ್ ಆಯೋಜನೆಗೆ ಇನ್ನಷ್ಟು ಬಲ ಬಂದಂತಾಗಿದೆ. 

ಯುಎಇನಲ್ಲಿ ಐಪಿಎಲ್ ಆಯೋಜನೆ ಬಿಸಿಸಿಐಗೆ ಹೊಸದೇನಲ್ಲ. 2014ರ ಲೋಕಸಭಾ ಚುನಾವಣೆ ವೇಳೆ ಅರ್ಧದಷ್ಟು ಟೂರ್ನಿಯು ದುಬೈನಲ್ಲೇ ನಡೆದಿತ್ತು. ಇದೀಗ ದುಬೈನಲ್ಲಿ ಪೂರ್ಣ ಪ್ರಮಾಣದಲ್ಲಿ ಟೂರ್ನಿ ನಡೆಯುವ ಸಾಧ್ಯತೆಯಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಾಲೆ ಟೆಸ್ಟ್‌: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ; ಲಂಕಾ ಪಡೆಗೆ ಹೊಸ ಅಸ್ತ್ರ ಪಾದಾರ್ಪಣೆ
BCCI ಮಾಸ್ಟರ್ ಪ್ಲಾನ್: ಅಜಿತ್ ಅಗರ್ಕರ್‌, ಕೋಚ್‌ ಗೌತಮ್ ಗಂಭೀರ್‌ಗಿಂತ ಉನ್ನತ ಹುದ್ದೆ ವಿವಿಎಸ್‌ ಲಕ್ಷ್ಮಣ್ ಹೆಗಲಿಗೆ?