
ನವದೆಹಲಿ: 19ನೇ ಆವೃತ್ತಿ ಐಪಿಎಲ್ ಮೇ 31ಕ್ಕೆ ಕೊನೆಗೊಳ್ಳಲಿದ್ದು, ಅದರ ಬಳಿಕ ಕೇವಲ 6 ದಿನಗಳ ಅಂತರದಲ್ಲೇ ಭಾರತ ತಂಡ ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ನಿರಂತರ ಕ್ರಿಕೆಟ್ನ ಒತ್ತಡ ತಪ್ಪಿಸಲು ಕೆಲ ಪ್ರಮುಖ ಆಟಗಾರರಿಗೆ ಟೆಸ್ಟ್ನಿಂದ ವಿಶ್ರಾಂತಿ ನೀಡಲಾಗುತ್ತದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಭಾರತದ ಪ್ರಮುಖ ಆಟಗಾರರು ಐಪಿಎಲ್ನ ಪ್ಲೇ-ಆಫ್, ಫೈನಲ್ಗೇರುವ ತಂಡಗಳಲ್ಲಿದ್ದರೆ ಅವರನ್ನು ಟೆಸ್ಟ್ನಲ್ಲಿ ಆಡಿಸುವ ಸಾಧ್ಯತೆಯಿಲ್ಲ. ಉದಾಹರಣೆಗೆ, ಮುಂಬೈ, ಗುಜರಾತ್ ತಂಡಗಳು ಈ ಐಪಿಎಲ್ನಲ್ಲಿ ಪ್ಲೇ-ಆಫ್ಗೇರಿದರೆ ಶುಭ್ಮನ್ ಗಿಲ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲ ಆಟಗಾರರನ್ನು ಟೆಸ್ಟ್ನಲ್ಲಿ ಆಡಿಸುವುದಿಲ್ಲ. ಈ ತಂಡಗಳು ಪ್ಲೇ-ಆಫ್ಗೇರದಿದ್ದರೆ ಮತ್ತು ಆಟಗಾರರಿಗೆ ವಿಶ್ರಾಂತಿ ಅಗತ್ಯವಿಲ್ಲದಿದ್ದರೆ ಮಾತ್ರ ಆಫ್ಘನ್ ಟೆಸ್ಟ್ನಲ್ಲಿ ಆಡಿಸಬಹುದು ಎಂದು ಹೇಳಲಾಗುತ್ತಿದೆ.
ಇನ್ನು, ಭಾರತ ‘ಎ’ ತಂಡ ಹಾಗೂ ದೇಸಿ ಟೂರ್ನಿಗಳಲ್ಲಿ ಮಿಂಚಿರುವ ಆಟಗಾರರಿಗೆ ಟೆಸ್ಟ್ನಲ್ಲಿ ಆಡುವ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಈ ಯೋಜನೆ ಪ್ರಕಾರ, ದೇವದತ್ ಪಡಿಕ್ಕಲ್, ವೇಗಿಗಳಾದ ಆಕಿಬ್ ನಬಿ, ಗುರ್ನೂರ್ ಬ್ರಾರ್, ಸ್ಪಿನ್ನರ್ ಮಾನವ್ ಸುತಾರ್, ಹರ್ಷ್ ದುಬೆಯನ್ನು ಆಫ್ಘನ್ ಟೆಸ್ಟ್ಗೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ನವದೆಹಲಿ: ಅಫ್ಘಾನಿಸ್ತಾನದ ಮಾಜಿ ವೇಗದ ಬೌಲರ್ ಶಪೂರ್ ಜದ್ರಾನ್ ಅವರು ಜೀವಕ್ಕೆ ಅಪಾಯವಿರುವ ಭೀಕರ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 38 ವರ್ಷದ ಶಪೂರ್ ಹಿಮೋಫಾಗೋಸಿಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್(ಎಚ್ಎಲ್ಎಚ್) ಎಂಬ ಅಪರೂಪದ ಹಾಗೂ ಅಪಾಯಕಾರಿ ರೋಗಕ್ಕೆ ತುತ್ತಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲೇ ಅವರಲ್ಲಿ ಈ ರೋಗ ಪತ್ತೆಯಾಗಿದ್ದು, ಜನವರಿಯಿಂದ ದೆಹಲಿಯ ಆಸ್ಪತ್ರೆಯಲ್ಲಿದ್ದಾರೆ. ಎಚ್ಎಲ್ಎಚ್ ಎಂಬುದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ರೋಗವಾಗಿದ್ದು, ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ. ಇದು ದೇಹದ ಬಹುತೇಕ ಅಂಗಗಳನ್ನು ಹಾನಿಯುಂಟು ಮಾಡುತ್ತದೆ. ಈಗ ಶಫೂರ್ ದೇಹಕ್ಕೆ ಸಂಪೂರ್ಣವಾಗಿ ಸೋಂಕು ಹರಡಿದೆ. ಶಫೂರ್ 2009-2020ರ ನಡುವೆ ಅಫ್ಘಾನಿಸ್ತಾನ ಪರ 44 ಏಕದಿನ, 36 ಟಿ20 ಪಂದ್ಯಗಳನ್ನಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.