ಕಮೆಂಟ್ರಿಯಿಂದ ಗೇಟ್‌ಪಾಸ್: ಕೊನೆಗೂ ತುಟಿಬಿಚ್ಚಿದ ಮಂಜ್ರೇಕರ್..!

Kannadaprabha News   | Asianet News
Published : Mar 16, 2020, 01:17 PM IST
ಕಮೆಂಟ್ರಿಯಿಂದ ಗೇಟ್‌ಪಾಸ್: ಕೊನೆಗೂ ತುಟಿಬಿಚ್ಚಿದ ಮಂಜ್ರೇಕರ್..!

ಸಾರಾಂಶ

ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಸಂಜಯ್ ಮಂಜ್ರೇಕರ್‌ಗೆ ಬಿಸಿಸಿಐ ವೀಕ್ಷಕ ವಿವರಣೆಯಿಂದ ಗೇಟ್‌ಪಾಸ್ ನೀಡಿದೆ. ಈ ಬಗ್ಗೆ ಮಂಜ್ರೇಕರ್ ತುಟಿಬಿಚ್ಚಿದ್ದಾರೆ. ಏನಂದ್ರು ಸಂಜಯ್ ಎನ್ನೋದನ್ನು ನೀವೇ ನೋಡಿ.. 

ನವದೆಹಲಿ(ಮಾ.16): ಬಿಸಿಸಿಐ ವೀಕ್ಷಕ ವಿವರಣೆಗಾರರ ತಂಡದಿಂದ ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಸಂಜಯ್‌ ಮಂಜ್ರೇಕರ್‌ ಬೇಸರ ವ್ಯಕ್ತಪಡಿಸಿದ್ದಾರೆ. ವೀಕ್ಷಕ ವಿವರಣೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟಎಂದು ಭಾವಿಸಿದ್ದೆ ಎಂದು ಮಂಜ್ರೇಕರ್‌ ಹೇಳಿದ್ದಾರೆ. 

ವೀಕ್ಷಕ ವಿವರಣೆಗಾರ ಮಂಜ್ರೇಕರ್‌ಗೆ ಬಿಸಿಸಿಐ ಗೇಟ್‌ಪಾಸ್.!

‘ವೀಕ್ಷಕ ವಿವರಣೆ ಮಾಡಲು ನಾನು ಅರ್ಹ ಎಂದು ಎಂದೂ ಭಾವಿಸಿರಲಿಲ್ಲ. ನನಗೆ ಸಿಕ್ಕ ಅದೃಷ್ಟಎಂದೇ ತಿಳಿದಿದ್ದೆ. ಇತ್ತೀಚಿನ ದಿನಗಳಲ್ಲಿ ನನ್ನ ಕಾರ್ಯ ವೈಖರಿ ಬಗ್ಗೆ ಬಿಸಿಸಿಐಗೆ ಸಮಾಧಾನವಿರಲಿಲ್ಲ ಎನಿಸುತ್ತದೆ. ಒಬ್ಬ ವೃತ್ತಿಪರನಾಗಿ ಕ್ರಿಕೆಟ್‌ ಮಂಡಳಿಯ ನಿರ್ಧಾರವನ್ನು ಗೌರವಿಸುತ್ತೇನೆ’ ಎಂದು ಮಂಜ್ರೇಕರ್‌ ಟ್ವೀಟ್‌ ಮಾಡಿದ್ದಾರೆ. 

ಕಮೆಂಟರಿ ಬದಲು ಸಲಹೆ ನೀಡಲು ಹೋದ ಮಂಜ್ರೇಕರ್‌ಗೆ ಮಂಗಳಾರತಿ!

ಕಳೆದ ವರ್ಷ ವಿಶ್ವಕಪ್‌ ವೇಳೆ ರವೀಂದ್ರ ಜಡೇಜಾ ವಿರುದ್ಧ ನೀಡಿದ್ದ ಹೇಳಿಕೆ, ಬಾಂಗ್ಲಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ ವೇಳೆ ಸಹ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಜತೆಗಿನ ವಾದದಿಂದಾಗಿ ಸಂಜಯ್‌ ವಿವಾದ ಸೃಷ್ಟಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!
ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಿಂದ ಹೊರಬಿದ್ದ ಟಾಪ್-5 ಆಟಗಾರರಿವರು! ಪಟ್ಟಿಯಲ್ಲಿವೆ ಅಚ್ಚರಿ ಹೆಸರು