ನಾಪತ್ತೆಯಾಗಿದ್ದ ಕ್ರಿಕೆಟಿಗ ಕೇದರ್ ಜಾಧವ್ ತಂದೆ ಕೊನೆಗೂ ಪತ್ತೆ..!

Published : Mar 28, 2023, 11:01 AM ISTUpdated : Mar 28, 2023, 11:40 AM IST
ನಾಪತ್ತೆಯಾಗಿದ್ದ ಕ್ರಿಕೆಟಿಗ ಕೇದರ್ ಜಾಧವ್ ತಂದೆ ಕೊನೆಗೂ ಪತ್ತೆ..!

ಸಾರಾಂಶ

ಕೊನೆಗೂ ನೆಮ್ಮದಿಯ ನಿಟ್ಟುಸಿರುಬಿಟ್ಟ ಕೇದಾರ್ ಜಾಧವ್ ಕುಟುಂಬ ನಾಪತ್ತೆಯಾಗಿದ್ದ ಕೇದಾರ್ ಜಾಧವ್ ತಂದೆ ಕೊನೆಗೂ ಪತ್ತೆ ಪುಣೆಯ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ ಕೇದಾರ್ ಜಾಧವ್

ಪುಣೆ(ಮಾ.28): ಭಾರತ ಕ್ರಿಕೆಟ್‌ ತಂಡದ ಆಟಗಾರ ಕೇದಾರ್ ಜಾಧವ್ ಅವರ ತಂದೆ ಮಹಾದೇವ್‌ ಜಾಧವ್ ಸೋಮವಾರ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಇದೀಗ ನಾಪತ್ತೆಯಾಗಿ ಕೆಲವೇ ಗಂಟೆಗಳಲ್ಲಿ ಮಹಾದೇವ್ ಜಾಧವ್ ಕೊನೆಗೂ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

75 ವರ್ಷದ ತಮ್ಮ ತಂದೆ ನಾಪತ್ತೆಯಾಗಿದ್ದಾರೆ ಎಂದು ಟೀಂ ಇಂಡಿಯಾ ಕ್ರಿಕೆಟಿಗ ಕೇದಾರ್ ಜಾಧವ್‌, ಪುಣೆ ನಗರದ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಕೇದಾರ್ ಜಾಧವ್ ದೂರು ದಾಖಲಿಸಿದ ನಂತರ, ಪೊಲೀಸರು ಅವರ ತಂದೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಾಪತ್ತೆಯಾದ ವರದಿಯ ಪ್ರಕಾರ, ಕೇದಾರ್ ಜಾಧವ್ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರೋಡ್ ಪ್ರದೇಶದ ನಿವಾಸಿಗಳು. ಮಹದೇವ್ ಜಾಧವ್ ಮಾರ್ಚ್ 27 ರಂದು ಮುಂಜಾನೆ ಯಾರಿಗೂ ಮಾಹಿತಿ ನೀಡದೇ ಮನೆಯಿಂದ ಹೊರಹೋಗಿದ್ದಾರೆ. ಆ ಬಳಿಕ ಮನೆಗೆ ವಾಪಸಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. 

ಅಲಂಕಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಸಹನೆ ನೇತೃತ್ವದ ತಂಡ ಮಹದೇವ್ ಜಾಧವ್‌ಗಾಗಿ ಹುಡುಕಾಟ ಆರಂಭಿಸಿತ್ತು. ಇದೀಗ ಕೇದಾರ್ ಜಾಧವ್‌, ಮುಂಡ್ವಾ ಏರಿಯಾದಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಇದೀಗ ಅವರು, ತಮ್ ಕುಟುಂಬ ಕೂಡಿಕೊಂಡಿದ್ದಾರೆ" ಎಂದು ಮುಂಡ್ವಾ ಪೊಲೀಸ್ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್ ಅಜಿತ್ ಲೋಕ್ಡೆ ತಿಳಿಸಿದ್ದಾರೆ.

ಟೀಮ್‌ ಇಂಡಿಯಾ ಕ್ರಿಕೆಟಿಗನ ತಂದೆ ನಾಪತ್ತೆ, ಪೊಲೀಸರಿಗೆ ದೂರು!

ಕೇದಾರ್ ಜಾಧವ್ ಅವರು ಭಾರತ ಪರ 73 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇನ್ನು 2007ರಿಂದಲೂ ಕೇದಾರ್ ಜಾಧವ್, ರಣಜಿ ಟ್ರೋಫಿ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.

ಬಿಸಿ​ಸಿಐ ಗುತ್ತಿಗೆ ಕಳೆ​ದು​ಕೊಂಡ ಅಜಿಂಕ್ಯಾ, ಭುವಿ!

ನವ​ದೆ​ಹ​ಲಿ: 2022-23ನೇ ಸಾಲಿನ 26 ಆಟ​ಗಾ​ರ​ರ​ನ್ನೊ​ಳ​ಗೊಂಡ ಕೇಂದ್ರ ಗುತ್ತಿಗೆ ಪಟ್ಟಿ​ಯನ್ನು ಭಾನು​ವಾರ ಬಿಸಿ​ಸಿಐ ಪ್ರಕ​ಟಿ​ಸಿದ್ದು, ಕೆಲ ಆಟ​ಗಾ​ರರು ಬಡ್ತಿ ಪಡೆ​ದಿ​ದ್ದರೆ ಹಲವು ಆಟ​ಗಾ​ರ​ರು ಅಚ್ಚ​ರಿ ಎಂಬಂತೆ ಪಟ್ಟಿ​ಯಿಂದಲೇ ಹೊರ​ಬಿ​ದ್ದಿ​ದ್ದಾರೆ. ಕಳೆದ ಸಾಲಿ​ನಲ್ಲಿ ‘ಬಿ’ ದರ್ಜೆ(3 ಕೋಟಿ ರು.)​ಯ​ಲ್ಲಿದ್ದ ಅಜಿಂಕ್ಯಾ ರಹಾನೆ ಹಾಗೂ ಇಶಾಂತ್‌ ಶರ್ಮಾ ಈ ಬಾರಿ ಪಟ್ಟಿ​ಯಲ್ಲಿ ಸ್ಥಾನ ಗಿಟ್ಟಿ​ಸಿ​ಕೊಂಡಿಲ್ಲ. ಇವರಿಬ್ಬ​ರೂ ಇನ್ನು ಭಾರತ ಪರ ಆಡು​ವ ಸಾಧ್ಯತೆ ಇಲ್ಲ ಎಂದೇ ವಿಶ್ಲೇ​ಷಿ​ಸ​ಲಾ​ಗು​ತ್ತಿದೆ. 

ಇದೇ ವೇಳೆ ಪ್ರಮುಖ ವೇಗಿ ಭುವ​ನೇ​ಶ್ವರ್‌ ಕುಮಾರ್‌, ಕರ್ನಾ​ಟ​ಕದ ಮಯಾಂಕ್‌ ಅಗ​ರ್‌​ವಾಲ್‌, ಹನುಮ ವಿಹಾರಿ, ದೀಪಕ್‌ ಚಹರ್‌ ಹಾಗೂ ವೃದ್ಧಿ​ಮಾನ್‌ ಸಾಹ ಕೂಡಾ ಪಟ್ಟಿ​ಯಿಂದ ಹೊರ​ಬಿ​ದ್ದಿ​ದ್ದರು. ಕಳೆದ ಸಾಲಿ​ನಲ್ಲಿ ಇವ​ರೆ​ಲ್ಲರೂ ‘ಸಿ’ ದರ್ಜೆ​(1 ಕೋಟಿ ರು.)ಯಲ್ಲಿ​ದ್ದ​ರು. ಇನ್ನು ಕೆ.ಎ​ಲ್‌.​ರಾ​ಹುಲ್‌ ಹಾಗೂ ಶಾರ್ದೂಲ್‌ ಠಾಕೂರ್‌ ಹಿಂಬಡ್ತಿ ಪಡೆ​ದಿ​ದ್ದಾ​ರೆ.

ಇಂದೋರ್‌ ಪಿಚ್‌ನ ಕಳ​ಪೆ ರೇಟಿಂಗ್‌ ತೆರ​ವು

ದುಬೈ: ಭಾರ​ತ-ಆಸ್ಪ್ರೇ​ಲಿಯಾ ನಡು​ವಿನ 3 ಟೆಸ್ಟ್‌ ಪಂದ್ಯಕ್ಕೆ ಆತಿ​ಥ್ಯ ವಹಿ​ಸಿದ್ದ ಇಂದೋ​ರ್‌ನ ಹೋಲ್ಕರ್‌ ಕ್ರೀಡಾಂಗ​ಣದ ಪಿಚ್‌ಗೆ ರೆಫ್ರಿ ನೀಡಿದ್ದ ಕಳಪೆ ರೇಟಿಂಗ್‌​ಅನ್ನು ಬಿಸಿ​ಸಿಐ ಮನವಿ ಬಳಿಕ ಐಸಿಸಿ ಬದ​ಲಾವಣೆ ಮಾಡಿದ್ದು, ಸರಾ​ಸ​ರಿ​ಗಿಂತ ಕಡಿಮೆ ಎಂದು ರೇಟಿಂಗ್‌ ನೀಡಿದೆ. ಹೀಗಾಗಿ ಪಿಚ್‌ಗೆ ನೀಡ​ಲಾ​ಗಿದ್ದ 3 ಡಿಮೆ​ರಿಟ್‌ ಅಂಕ​ಗ​ಳ​ನ್ನು 1ಕ್ಕೆ ಕಡಿ​ತ​ಗೊ​ಳಿ​ಸಿದೆ. ಇಂಧೋರ್‌ ಪಿಚ್‌ಗೆ ಕಳಪೆ ರೇಟಿಂಗ್‌ ನೀಡಿ​ದ್ದನ್ನು ಪ್ರಶ್ನಿಸಿದ್ದ ಬಿಸಿ​ಸಿಐ, ತೀರ್ಪು ಮರು​ಪ​ರಿ​ಶೀ​ಲಿ​ಸು​ವಂತೆ ಐಸಿ​ಸಿಗೆ ಮನವಿ ಸಲ್ಲಿ​ಸಿತ್ತು. ಈ ಬಗ್ಗೆ ಐಸಿ​ಸಿಯ ಇಬ್ಬರು ಸದ​ಸ್ಯರ ಸಮಿತಿ ಪರಿ​ಶೀ​ಲನೆ ನಡೆಸಿ ಕಳಪೆ ರೇಟಿಂಗ್‌ ತೆರ​ವು​ಗೊ​ಳಿ​ಸಿದೆ. ಇದೇ ವೇಳೆ ಅಹ​ಮ​ದಾ​ಬಾ​ದ್‌ನ ಪಿಚ್‌ಗೆ ಐಸಿಸಿ ಸರಾ​ಸರಿ ರೇಟಿಂಗ್‌ ನೀಡಿ​ದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?