ಉದಯೋನ್ಮುಖರ ಕ್ರಿಕೆಟ್‌; ಪಾಕ್ ಎದುರು ಭಾರ​ತಕ್ಕೆ ಸೋಲು

Published : Nov 21, 2019, 09:44 AM IST
ಉದಯೋನ್ಮುಖರ ಕ್ರಿಕೆಟ್‌; ಪಾಕ್ ಎದುರು ಭಾರ​ತಕ್ಕೆ ಸೋಲು

ಸಾರಾಂಶ

ಅಂಡರ್ 23 ಉದಯೋನ್ಮುಕ ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ಬಿ. ಆರ್. ಶರತ್ ನೇತೃತ್ವದ ಭಾರತ ತಂಡ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಮುಗ್ಗರಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಢಾಕಾ[ನ.21]: ಭಾರತ ಅಂಡರ್‌-23 ಕ್ರಿಕೆಟ್‌ ತಂಡ ಇಲ್ಲಿ ನಡೆ​ಯು​ತ್ತಿ​ರುವ ಉದ​ಯೋ​ನ್ಮುಖ ತಂಡಗಳ ಟೂರ್ನಿಯ ಸೆಮಿ​ಫೈ​ನಲ್‌ನಲ್ಲಿ ಬದ್ಧವೈರಿ ಪಾಕಿ​ಸ್ತಾನದ ವಿರುದ್ಧ 3 ರನ್‌ಗಳ ವೀರೋ​ಚಿತ ಸೋಲು ಕಂಡು ಟೂರ್ನಿ​ಯಿಂದ ಹೊರ​ಬಿ​ದ್ದಿದೆ. 

ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!

ಬುಧ​ವಾರ ನಡೆದ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿ​ಸ್ತಾನ 50 ಓವ​ರಲ್ಲಿ 7 ವಿಕೆಟ್‌ ನಷ್ಟ​ಕ್ಕೆ 267 ರನ್‌ ಗಳಿ​ಸಿತು. ಕಠಿಣ ಗುರಿ ಬೆನ್ನ​ತ್ತಿದ ಭಾರತ ಸನ್ವಿರ್‌ ಸಿಂಗ್‌ (76) ಹೋರಾ​ಟದ ಹೊರ​ತಾ​ಗಿಯೂ ಗೆಲುವು ಸಾಧಿ​ಸಲು ಆಗ​ಲಿಲ್ಲ. ಕೊನೆ ಓವ​ರಲ್ಲಿ ಭಾರ​ತದ ಗೆಲು​ವಿಗೆ 8 ರನ್‌ಗಳು ಬೇಕಿ​ದ್ದವು. ಆದರೆ ತಂಡ ಗಳಿ​ಸಿದ್ದು ಕೇವಲ 4 ರನ್‌ ಮಾತ್ರ. ತಂಡವನ್ನು ಮುನ್ನಡೆ​ಸಿದ ಕರ್ನಾ​ಟಕದ ಬಿ.ಆರ್‌.ಶ​ರತ್‌ (47) ಹಾಗೂ ಅರ್ಮಾನ್‌ ಜಾಫರ್‌ (46) ಉಪ​ಯುಕ್ತ ರನ್‌ ಕೊಡುಗೆ ನೀಡಿ​ದರೂ, ಭಾರ​ತ ಗೆಲು​ವಿನ ದಡ ಮುಟ್ಟ​ಲಿಲ್ಲ. 50 ಓವ​ರಲ್ಲಿ 8 ವಿಕೆಟ್‌ ನಷ್ಟಕ್ಕೆ 264 ರನ್‌ ಗಳಿ​ಸ​ಲಷ್ಟೇ ಶಕ್ತ​ವಾ​ಯಿತು.

KPL ಕ್ರಿಕೆಟ್ ಫಿಕ್ಸಿಂಗ್; ಪುತ್ರನ ಮೇಲಿನ ಆರೋಪಕ್ಕೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ!

ಪಾಕಿ​ಸ್ತಾನ ಆರಂಭಿಕ ಒಮೈರ್‌ ಯೂಸುಫ್‌ (66)ರ ಅರ್ಧ​ಶ​ತಕ, ಸೈಫ್‌ ಬದರ್‌(47)ರ ಆಕ​ರ್ಷಕ ಆಟದ ನೆರವಿ​ನಿಂದ ಉತ್ತಮ ಮೊತ್ತ ಕಲೆಹಾಕಿತು. ಗುರು​ವಾರ ನಡೆ​ಯ​ಲಿ​ರುವ 2ನೇ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಆಫ್ಘಾ​ನಿ​ಸ್ತಾನ ಹಾಗೂ ಬಾಂಗ್ಲಾ​ದೇಶ ತಂಡ​ಗಳು ಮುಖಾ​ಮುಖಿ​ಯಾ​ಗ​ಲಿವೆ. ನ.23ರಂದು ಫೈನಲ್‌ ಪಂದ್ಯ ನಡೆ​ಯ​ಲಿದೆ. ಕಳೆದ ಆವೃ​ತ್ತಿಯಲ್ಲಿ ಭಾರತ ತಂಡ ರನ್ನರ್‌-ಅಪ್‌ ಆಗಿತ್ತು.

ಸ್ಕೋರ್‌: 
ಪಾಕಿಸ್ತಾನ 267/7 (ಯೂಸುಫ್‌ 66, ಸೈಫ್‌ 47, ಶಿವಂ ಮಾವಿ 2-53)
ಭಾರತ 264/8 (ಸನ್ವಿರ್‌ 76, ಶರತ್‌ 47, ಸೈಫ್‌ 2-57)
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Virat Kohliಯಿಂದ ಪಾಂಡ್ಯವರೆಗೆ ಟೀಂ ಇಂಡಿಯಾದ ಯಾವೆಲ್ಲ ಆಟಗಾರರು ರೊನಾಲ್ಡೊ ಫ್ಯಾನ್ಸ್ ಗೊತ್ತಾ?
ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಕರ್ನಾಟಕಕ್ಕೆ ಓಡಿ ಬಂದ Rahul Dravid; ಯಂತ್ರೋದ್ಧಾರಕ ಹನುಮನಿಗೆ ವಿಶೇಷ ಮೊರೆ!