ಅಂಡರ್ 23 ಉದಯೋನ್ಮುಕ ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ಬಿ. ಆರ್. ಶರತ್ ನೇತೃತ್ವದ ಭಾರತ ತಂಡ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಮುಗ್ಗರಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಢಾಕಾ[ನ.21]: ಭಾರತ ಅಂಡರ್-23 ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ಉದಯೋನ್ಮುಖ ತಂಡಗಳ ಟೂರ್ನಿಯ ಸೆಮಿಫೈನಲ್ನಲ್ಲಿ ಬದ್ಧವೈರಿ ಪಾಕಿಸ್ತಾನದ ವಿರುದ್ಧ 3 ರನ್ಗಳ ವೀರೋಚಿತ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.
📸 📸
Winning moments for Pakistan in what was a thrilling semi-final! pic.twitter.com/CminyRzRrF
ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರಲ್ಲಿ 7 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ಭಾರತ ಸನ್ವಿರ್ ಸಿಂಗ್ (76) ಹೋರಾಟದ ಹೊರತಾಗಿಯೂ ಗೆಲುವು ಸಾಧಿಸಲು ಆಗಲಿಲ್ಲ. ಕೊನೆ ಓವರಲ್ಲಿ ಭಾರತದ ಗೆಲುವಿಗೆ 8 ರನ್ಗಳು ಬೇಕಿದ್ದವು. ಆದರೆ ತಂಡ ಗಳಿಸಿದ್ದು ಕೇವಲ 4 ರನ್ ಮಾತ್ರ. ತಂಡವನ್ನು ಮುನ್ನಡೆಸಿದ ಕರ್ನಾಟಕದ ಬಿ.ಆರ್.ಶರತ್ (47) ಹಾಗೂ ಅರ್ಮಾನ್ ಜಾಫರ್ (46) ಉಪಯುಕ್ತ ರನ್ ಕೊಡುಗೆ ನೀಡಿದರೂ, ಭಾರತ ಗೆಲುವಿನ ದಡ ಮುಟ್ಟಲಿಲ್ಲ. 50 ಓವರಲ್ಲಿ 8 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಲಷ್ಟೇ ಶಕ್ತವಾಯಿತು.
KPL ಕ್ರಿಕೆಟ್ ಫಿಕ್ಸಿಂಗ್; ಪುತ್ರನ ಮೇಲಿನ ಆರೋಪಕ್ಕೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ!
ಪಾಕಿಸ್ತಾನ ಆರಂಭಿಕ ಒಮೈರ್ ಯೂಸುಫ್ (66)ರ ಅರ್ಧಶತಕ, ಸೈಫ್ ಬದರ್(47)ರ ಆಕರ್ಷಕ ಆಟದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು. ಗುರುವಾರ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ನ.23ರಂದು ಫೈನಲ್ ಪಂದ್ಯ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಭಾರತ ತಂಡ ರನ್ನರ್-ಅಪ್ ಆಗಿತ್ತು.
ಸ್ಕೋರ್:
ಪಾಕಿಸ್ತಾನ 267/7 (ಯೂಸುಫ್ 66, ಸೈಫ್ 47, ಶಿವಂ ಮಾವಿ 2-53)
ಭಾರತ 264/8 (ಸನ್ವಿರ್ 76, ಶರತ್ 47, ಸೈಫ್ 2-57)