ಕೊರೋನಾ ಶಂಕಿತ ಕುಟುಂಬಸ್ಥರಿಂದ ಓಡಾಟ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Suvarna News   | Asianet News
Published : Mar 23, 2020, 03:37 PM ISTUpdated : Mar 23, 2020, 05:17 PM IST
ಕೊರೋನಾ ಶಂಕಿತ ಕುಟುಂಬಸ್ಥರಿಂದ ಓಡಾಟ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಸಾರಾಂಶ

ಅಧಿಕಾರಿಗಳ ಸೂಚನೆ ಪಾಲಿಸದ ಕೊರೋನಾ ಶಂಕಿತನ ಕುಟುಂಬಸ್ಥರು| ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ನಡೆದ ಘಟನೆ| ಕೊರೋನಾ ಶಂಕಿತನ ಕುಟುಂಬಸ್ಥರ ಉದ್ದಟತನದಿಂದ ಭಯಭೀತರಾದ ಗ್ರಾಮಸ್ಥರು|

ಮಂಡ್ಯ[ಮಾ.23]: ಕೊರೋನಾ ಶಂಕಿತನ ಕುಟುಂಬಸ್ಥರು ಅಧಿಕಾರಿಗಳ ಸೂಚನೆ ಪಾಲಿಸದೆ ರಾಜಾರೋಷವಾಗಿ ಹೊರಗಡೆ ಓಡಾಡುತ್ತಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಇಂದು[ಸೋಮವಾರ] ನಡೆದಿದೆ. ಕೊರೋನಾ ಶಂಕಿತನ ಕುಟುಂಬಸ್ಥರ ಉದ್ದಟತನದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. 

ದುಬೈನಿಂದ ವಾಪಸ್ಸಾಗಿದ್ದ ವ್ಯೆಕ್ತಿಯಲ್ಲಿ ಕೊರೋನಾ ಶಂಕೆ ವ್ಯಕ್ತವಾಗಿತ್ತು.ಹೀಗಾಗಿ ಆ ವ್ಯೆಕ್ತಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

‘ಕೊರೋನಾ ಶಂಕಿತರೇ ಹುಷಾರ್: ಹೊರಗಡೆ ಓಡಾಡಿದ್ರೆ ಪೊಲೀಸರು ಅರೆಸ್ಟ್ ಮಾಡ್ತಾರೆ’

ಶಂಕಿತನ ಕುಟುಂಬಸ್ಥರಿಗೆ ಮನೆಯಲ್ಲೇ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರು. ಆದರೆ, ಜಿಲ್ಲಾಧಿಕಾರಿಗಳ ಆದೇಶವನ್ನ ಉಲ್ಲಂಘಿಸಿದ ಶಂಕಿತನ ಕುಟುಂಬಸ್ಥರು ಹೊರಗಡೆ ಓಡಾಡುತ್ತಿದ್ದಾರೆ. ಸದ್ಯ ಶಂಕಿತನ ಕುಟುಂಬಸ್ಥರ ಮೇಲೆ ಬೆಸಗರಹಳ್ಳಿ ಪೊಲೀಸರು ನಿಗಾ ವಹಿಸಿದ್ದಾರೆ. 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?