ಕೊರೋನಾ ಓಡಿಸಲು ಮಂತ್ರ ಜಪಿಸಿದ್ದ ಅಠಾವಳೆ ಈಗ ಅಡುಗೆಯಲ್ಲಿ ಬ್ಯೂಸಿ!

By Kannadaprabha NewsFirst Published Apr 5, 2020, 3:39 PM IST
Highlights

ಕೊರೋನಾ ವೈರಸ್ ಆತಂಕ, ದೇಶದಾದ್ಯಂತ ಲಾಕ್‌ಡೌನ್| ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಉಳಿದ ದೇಶ ವಾಸಿಗರು| ಮನೆಯಲ್ಲಿ ಅಡುಗೆ ತಯಾರಿಸುವುದರಲ್ಲಿ ಬ್ಯೂಸಿಯಾದ ಕೇಂದ್ರ ಸಚಿವೆ

ಮುಂಬೈ(ಏ.05): ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜನ ಸಾಮಾನ್ಯರು ಮಾತ್ರವಲ್ಲದೇ, ಸೆಲೆಬ್ರಿಟಿ, ರಾಜಕೀಯ ನಾಯಕರು ಹಾಗೂ ಗಣ್ಯರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಉಳಿದಿದ್ದಾರೆ. ಈ ಲಾಕ್‌ಡೌನ್ ಪರಿಣಾಮ ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ ಮೇಲೂ ಬಿದ್ದಿದೆ. 

ಹೌದು ಲಾಕ್‌ಡೌನ್ ನಿಯಮ ಪಾಲಿಸುತ್ತಿರುವ ಕೇಂದ್ರ ಸಚಿವ ಸದ್ಯ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅಠಾವಳೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ಆfಲೇಟ್ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ.

कोरोना विरुद्ध लढा यशस्वी करण्यासाठी लोकडाऊनमध्ये घरीच राहा.आवडत्या छंदाला वेळ द्या. आज मी घरी आम्लेट तयार केले. किचन मध्ये अनेक वर्षांनी वेळ दिला. pic.twitter.com/fHdilPaUmt

— Dr.Ramdas Athawale (@RamdasAthawale)

ಇನ್ನು ಕೊರೋನಾ ತಾಂಡವಕ್ಕೆ ದೇಶದಾದ್ಯಂತ 68 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ ಮೂರು ಸಾವಿರ ಗಡಿ ದಾಟಿದೆ. ಹೀಗಿರುವಾಗ ಲಾಕ್‌ಡೌನ್ ನಿಗದಿಯಂತೆ ತೆರವಾಗುತ್ತಾ ಅಥವಾ ಮುಂದುವರೆಯುತ್ತಾ? ಕಾದು ನೊಡಬೇಕಷ್ಟೇ

click me!