
ಕಾಲಿವುಡ್ನಲ್ಲಿ(Kollywood) ಬಹುನಿರೀಕ್ಷಿತ ಸಿನಿಮಾ ಬೀಸ್ಟ್ ಎಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ. ವಿಜಯ್(Vijay) ಅಭಿನಯದ ಮಾಸ್ ಮೂವಿ ಬಿಡುಗಡೆಗೆ ಇನ್ನು ಮೂರೇ ತಿಂಗಳು ಬಾಕಿ ಇರುವಾಗ ಅಭಿಮಾನಿಗಳು ಇನ್ನಷ್ಟು ಥ್ರಿಲ್ ಆಗಿದ್ದಾರೆ. ಸ್ಪೆಷಲ್ ಫ್ಯಾನ್ ಬೇಸ್ ಇರುವಂತಹ ಕಾಲಿವುಡ್ ನಟ ವಿಜಯ್ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತವೆ. ಈ ಬಾರಿ ನಟನಿಗೆ ಪೂಜಾ ಹೆಗ್ಡೆ ಸಾಥ್ ಕೊಟ್ಟಿದ್ದು ಈ ಜೋಡಿಯನ್ನು ಬೆಳ್ಳಿ ತೆರೆಯ ಮೇಲೆ ನೋಡೋಕೆ ಸಿನಿಪ್ರಿಯರು ಎಕ್ಸೈಟ್ ಆಗಿದ್ದಾರೆ.
ಥಲಪತಿ ವಿಜಯ್ ಅವರ ಬ್ಲಾಕ್ಬಸ್ಟರ್ ಸಿನಿಮಾ ಮಾಸ್ಟರ್ ಬಿಡುಗಡೆಯೊಂದಿಗೆ ವರ್ಷ ಪ್ರಾರಂಭವಾಯಿತು. COVID-19 ಸಾಂಕ್ರಾಮಿಕ ಮತ್ತು ಥಿಯೇಟರ್ಗಳು 50 ಪ್ರತಿಶತದಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೂ, ಸಿನಿಮಾ ದೇಶಾದ್ಯಂತ ಬೃಹತ್ ಉತ್ತಮ ಪ್ರತಿಕ್ರಿಯೆ ಕಂಡಿತು. ಈಗ, ನಟ ಬೀಸ್ಟ್ನ ಹೊಸ ಪೋಸ್ಟರ್ನೊಂದಿಗೆ ವರ್ಷವನ್ನು ಕೊನೆಗೊಳಿಸುತ್ತಿದ್ದಾರೆ. ಚಿತ್ರವು ಏಪ್ರಿಲ್ 2022 ರಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.
ಬೀಸ್ಟ್ನ ಚಿತ್ರತಂಡ ವಿಜಯ್ ಅವರ ಸಖತ್ತಾಗಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಚಿತ್ರವು ಏಪ್ರಿಲ್ 2022 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಹೊಸ ಪೋಸ್ಟರ್ನಲ್ಲಿ, ತೀವ್ರವಾಗಿ ಕಾಣುವ ವಿಜಯ್ ಅವರ ಮುಖದ ಮೇಲೆ ಗಾಯದ ಗುರುತುಗಳು ಮತ್ತು ಉಪ್ಪು ಮತ್ತು ಮೆಣಸು ಗಡ್ಡದಲ್ಲಿ ಕಾಣಬಹುದು. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಬೀಸ್ಟ್ ನಟ ವಿಜಯ್ ಮತ್ತು ಸಂಗೀತ ಸಂಯೋಜಕ ಅನಿರುದ್ಧ ರವಿಚಂದರ್ ಅವರನ್ನು ಮತ್ತೆ ಒಂದಾಗಿಸುತ್ತದೆ. ಇವರಿಬ್ಬರು ಕೊನೆಯದಾಗಿ ಮಾಸ್ಟರ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಚಿತ್ರದ ಹಾಡುಗಳು ಸೂಪರ್ಹಿಟ್ ಆಗಿದ್ದು, ದೇಶಾದ್ಯಂತ ಜನರಿಂದ ಭಾರೀ ಮೆಚ್ಚುಗೆ ಪಡೆದಿತ್ತು.
ಏಪ್ರಿಲ್ನಲ್ಲಿ ಸಿನಿಮಾ ಬಿಡುಗಡೆಯಾಗುವುದರೊಂದಿಗೆ, ಇದು ಎಪ್ರಿಲ್ ತಿಂಗಳ ಮೂರನೇ ದೊಡ್ಡ ರಿಲೀಸಿಂಗ್ ಆಗಿರಲಿದೆ. ಕೆಜಿಎಫ್ 2 ಮತ್ತು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಏಪ್ರಿಲ್ 14, 2022 ರಂದು ಬಿಡುಗಡೆಯಾಗಲು ಸಿದ್ಧವಾಗಿವೆ.
ದಕ್ಷಿಣ ಭಾರತೀಯ ಸಿನಿಮಾ ರಂಗದ ಬಹು ಬೇಡಿಕೆಯ ನಟಿ ಪೂಜಾ ಹೆಗ್ಡೆ ಆ್ಯಕ್ಷನ್ ಪ್ಯಾಕ್ಡ್ ಥ್ರಿಲರ್ ಸಿನಿಮಾದಲ್ಲಿ ಅಭಿನಯಿಸಲು ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ವಿಜಯ್ ಜೊತೆ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿದ್ದರೂ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ ನಟಿ. ಕೊರೋನಾ ಮಧ್ಯೆಯೂ ಕಾಲಿವುಡ್ನ ಬಹುತೇಕ ನಟರು ಚಿತ್ರಮಂದಿರಗಳಲ್ಲಿಯೇ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಗಮನಾರ್ಹವಾಗಿ ಜೈ ಭೀಮ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
RRR ಬಿಡುಗಡೆ ವಿಳಂಬ
ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಬಿಗ್ ಪ್ರಾಜೆಕ್ಟ್ ಆರ್ಆರ್ಆರ್ ರಿಲೀಸ್ ಡೇಟ್ ಮತ್ತೆ ಮುಂದೂಡಲಾಗಿದೆ. ದೇಶದಲ್ಲಿ ಮತ್ತೆ ಕೊರೋನಾ ಹೆಚ್ಚಾಗಿದ್ದು, ಒಮಿಕ್ರೋನ್ ಅಬ್ಬರವೂ ಜೋರಾಗಿದ್ದು ಈ ನಿಟ್ಟಿನಲ್ಲಿ ಸಿನಿಮಾ ರಿಲೀಸ್ ತಡಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿನಿಮಾ ಮುಂದೂಡಿ ಚಿತ್ರತಂಡ ಟ್ವೀಟ್ ಮಾಡಿದೆ. ಬಹುನಿರೀಕ್ಷಿತ ಟಾಲಿವುಡ್ ಸಿನಿಮಾದಲ್ಲಿ ಸೌತ್ ಸ್ಟಾರ್ಗಳಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಅಭಿನಯಿಸುತ್ತಿದ್ದು ಸಿನಿಮಾ ಜನವರಿ 7ರಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಸಿನಿಮಾದ ಪ್ರಚಾರ ಕಾರ್ಯಕ್ರಮ ಜೋರಾಗಿ ನಡೆಯುತ್ತಿತ್ತು. ಬಿಗ್ಬಾಸ್ ವೇದಿಕೆಯಲ್ಲಿ ಸಿನಿಮಾ ಪ್ರಮೋಟ್ ಮಾಡಲಾಗಿತ್ತು. ಆದರೆ ಇದೀಗ ಕೊರೋನಾ ಏರಿಕೆಯಿಂದ ರಿಲೀಸ್ಗೆ ತಡೆ ಬಿದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.