ಹೀನಾಯ ಸೋತ 'ಶಾಕುಂತಲಂ' OTTಗೆ; ಸೈಲೆಂಟ್ ಆಗಿ ಸ್ಟ್ರೀಮಿಂಗ್ ಆರಂಭಿಸಿದ ಸಮಂತಾ ಸಿನಿಮಾ

By Shruthi KrishnaFirst Published May 11, 2023, 5:11 PM IST
Highlights

ಹೀನಾಯ ಸೋತ 'ಶಾಕುಂತಲಂ' ಸಿನಿಮಾ OTTಗೆ ಎಂಟ್ರಿ ಕೊಟ್ಟಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಸೌತ್ ಸ್ಟಾರ್ ಸಮಂತಾ ಇತ್ತೀಚೆಗಷ್ಟೆ ಶಾಕುಂತಲಂ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ನಿರೀಕ್ಷೆಯ ಗೆಲುವು ದಾಖಲಿಸಿಲ್ಲ. ಚಿತ್ರಮಂದಿರಗಳಲ್ಲಿ ಶಾಕುಂತಲಂ ಸಿನಿಮಾ ಹೀನಾಯ ಸೋಲು ಕಂಡಿದ್ದು ಚಿತ್ರತಂಡಕ್ಕೆ ಭಾರಿ ನಿರಾಸೆಯಾಗಿತ್ತು. ಪೌರಾಣಿಕ ಕಥಾಹಂದರ ಹೊಂದಿದ್ದ ಶಾಕುಲತಂ ಸಿನಿಮಾ ಪ್ರೇಕ್ಷಕರಿಗೆ ಕೊಂಚವು ಇಷ್ಟವಾಗಿಲ್ಲ. ಹಾಗಾಗಿ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಚಿತ್ರಮಂದಿರಗಳಲ್ಲಿ ಹೀನಾಯ ಸೋತ ಸಿನಿಮಾ ಸೈಲೆಂಟ್ ಆಗಿ ಒಟಿಟಿಗೆ ಎಂಟ್ರಿ ಕೊಟ್ಟಿದೆ. ವಿಶೇಷ ಎಂದರೆ ಯಾವುದೇ ಪ್ರಚಾರವಿಲ್ಲದೆ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. 

ಶಾಕುಂತಲಂ ಸಿನಿಮಾ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ರಿಲೀಸ್ ಆಗಿದೆ. ಚಿತ್ರಮಂದಿರಗಳಲ್ಲಿ ಹೀನಾಯ ಸೋಲುಕಂಡ ಕಾರಣಕ್ಕೆ ಯಾವುದೇ ಪ್ರಚಾರವಿಲ್ಲದೇ ಶಾಕುಂತಲಂ ಸಿನಿಮಾ ಸೈಲೆಂಟ್ ಆಗಿ  ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಶಾಕುಂತಲಂ’ ಸಿನಿಮಾ ಸಿದ್ಧಗೊಂಡಿತ್ತು. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಅದ್ದೂರಿಯಾಗಿ ಸಿದ್ಧವಾಗಿದ್ದ ಶಾಕುಂತಲಂ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದ್ದು ಎಲ್ಲಾ ಭಾಷೆಯಲ್ಲೂ ‘ಶಾಕುಂತಲಂ’ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ. ಒಟಿಟಿ ಪ್ರೇಕ್ಷಕರನ್ನಾದ್ರೂ ಶಾಕುಂತಲಂ ಗಮನ ಸೆಳೆಯುತ್ತಾ ಎಂದು ಕಾದುನೋಡ ಬೇಕಿದೆ. 

ಏಪ್ರಿಲ್​ 14ರಂದು ಬಿಡುಗಡೆ ಆದ ಈ ಸಿನಿಮಾ ಮೊದಲ ವೀಕೆಂಡ್​ ಕಳೆದರೂ ಎರಡಂಕಿ ಮುಟ್ಟಲು ವಿಫಲವಾಯಿತು. 3 ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ 10 ಕೋಟಿ ರೂಪಾಯಿ ಕೂಡ ಕಲೆಕ್ಷನ್ ಮಾಡಿಲ್ಲ. ಇದು ಚಿತ್ರತಂಡಕ್ಕೆ ಭಾರಿ ನಿರಾಸೆ ಮೂಡಿಸುವ ಜೊತೆಗೆ ದೊಡ್ಡ ನಷ್ಟ ಅನುಭವಿಸಿದರು.  ಒಟಿಟಿಯಲ್ಲಾದರೂ ಈ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆಯೇ ಕಾದು ನೋಡಡಬೇಕಿದೆ. ಈ ಸಿನಿಮಾ ಮೇಲೆ ಸಮಂತಾ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಅನಾರೋಗ್ಯದ ನಡುವೆಯೂ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಬ್ಬರದ ಪ್ರಚಾರ ಮಾಡಿದ್ದರು. ಏನೇ ಮಾಡಿದರೂ ಪ್ರೇಕ್ಷಕರು ಮಾತ್ರ ಚಿತ್ರಮಂದಿರದ ಕಡೆ ಮುಖ ಮಾಡಿಲ್ಲ.

ಸಮಂತಾ ಜೊತೆ ವಿಚ್ಛೇದನಕ್ಕೆ ನಿಜವಾದ ಕಾರಣ ಬಹಿರಂಗಪಡಿಸಿದ ನಾಗ ಚೈತನ್ಯ

Our team is overwhelmed to have been honored with these prestigious Global Awards ✨
Thank you for this incredible recognition 🙏 streaming now on . https://t.co/obv3N5qKUwpic.twitter.com/2EjTVaOlLO

— Gunaa Teamworks (@GunaaTeamworks)

ಈ ಸಿನಿಮಾದಲ್ಲಿ ಶಕುಂತಲೆಯಾಗಿ ಸಮಂತಾ ರುತ್​ ಪ್ರಭು ಕಾಣಿಸಿಕೊಂಡಿದ್ದಾರೆ. ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದರು. ಸಮಂತಾ ಮಗಳ ಪಾತ್ರದಲ್ಲಿ ಅಲ್ಲುಅರ್ಜುನ್ ಪುತ್ರಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಗುಣಶೇಖರ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ.
 

click me!