ಭಾರತದ ಈ ಒಂದು ಕ್ಷೇತ್ರಕ್ಕೆ ವಿಶ್ವಬ್ಯಾಂಕ್‌ನಿಂದ 5700 ಕೋಟಿ ರು. ನೆರವು!

Published : Jul 07, 2020, 04:58 PM ISTUpdated : Jul 07, 2020, 05:00 PM IST
ಭಾರತದ ಈ ಒಂದು ಕ್ಷೇತ್ರಕ್ಕೆ ವಿಶ್ವಬ್ಯಾಂಕ್‌ನಿಂದ 5700 ಕೋಟಿ ರು. ನೆರವು!

ಸಾರಾಂಶ

ಭಾರತದ ಎಂಎಸ್‌ಎಂಇ ಕ್ಷೇತ್ರಕ್ಕೆ ವಿಶ್ವಬ್ಯಾಂಕ್‌ನಿಂದ 5700 ಕೋಟಿ ರು. ನೆರವು| ವಿಶ್ವ ಬ್ಯಾಂಕ್‌ ಜೊತೆ ಕೇಂದ್ರ ಸರ್ಕಾರ 5700 ಕೋಟಿ ರು. ಮೊತ್ತದ ಒಪ್ಪಂದ| ಕೊರೋನಾ ವೈರಸ್‌ ಬಿಕ್ಕಟ್ಟಿನಿಂದ ನಲುಗಿರುವ ಕ್ಷೇತ್ರ

ನವದೆಹಲಿ(ಜು.07): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಣಕಾಸಿನ ಹರಿವನ್ನು ಹೆಚ್ಚಿಸುವ ಉದ್ದೇಶದಿಂದ ವಿಶ್ವ ಬ್ಯಾಂಕ್‌ ಜೊತೆ ಕೇಂದ್ರ ಸರ್ಕಾರ 5700 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕೊರೋನಾ ಹೋರಾಟ: ಭಾರತಕ್ಕೆ ವಿಶ್ವಬ್ಯಾಂಕ್‌ 7600 ಕೋಟಿ ರೂ. ನೆರವು!

ಕೊರೋನಾ ವೈರಸ್‌ ಬಿಕ್ಕಟ್ಟಿನಿಂದ ನಲುಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಚೇತರಿಕೆ ಹಾಗೂ ಲಕ್ಷಾಂತರ ಜನರ ಉದ್ಯೋಗವನ್ನು ರಕ್ಷಿಸುವ ಉದ್ದೇಶದಿಂದ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ವಿಶ್ವಬ್ಯಾಂಕಿನ ಎಂಎಸ್‌ಎಂಇ ತುರ್ತು ಪ್ರತಿಕ್ರಿಯಾ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ರೂಪದ ನೆರವು ದೊರೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಇನ್ನು ಕಳೆದ ತಿಂಗಳಷ್ಟೇ ಕೊರೋನಾ ವಿರುದ್ಧದ ಹೋರಾಟಕ್ಕೆಂದು ಭಾರತಕ್ಕೆ 7500 ಕೋಟಿ ರು. ನೀಡಲು ವಿಶ್ವ ಬ್ಯಾಂಕ್‌ ಅನುಮೋದನೆ ನೀಡಿತ್ತು. ಕೊರೋನಾದಿಂದ ಬಡವರು, ಜನಸಾಮಾನ್ಯರು ಬಾಧಿತರಾಗಿದ್ದು, ಅವರ ನೆರವಿಗೆ ಸರ್ಕಾರ ನೆರವು ನೀಡುತ್ತಿದೆ. ಇದಕ್ಕೆ ಸಹಾಯ ಮಾಡಲೆಂದು ವಿಶ್ವಬ್ಯಾಂಕ್‌ ನೆರವು ನೀಡಿತ್ತು

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!