ಆಂಧ್ರಕ್ಕೆ ಶಾಕ್: ಅಮರಾವತಿ ಪ್ರಾಜೆಕ್ಟ್ ಕೈಬಿಟ್ಟ ವಿಶ್ವ ಬ್ಯಾಂಕ್!

Published : Jul 19, 2019, 03:14 PM IST
ಆಂಧ್ರಕ್ಕೆ ಶಾಕ್: ಅಮರಾವತಿ ಪ್ರಾಜೆಕ್ಟ್ ಕೈಬಿಟ್ಟ ವಿಶ್ವ ಬ್ಯಾಂಕ್!

ಸಾರಾಂಶ

ಆಂಧ್ರದ ಅಮರಾವತಿ ಯೋಜನೆಯ ಕನಸಿಗೆ ವಿಘ್ನ| ಅಮರಾವತಿ ಯೋಜನೆಯಿಂದ ಹೊರಬಂದ ವಿಶ್ವ ಬ್ಯಾಂಕ್| ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆ| 300 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದ ವಿಶ್ವ ಬ್ಯಾಂಕ್| ಕಾರಣ ತಿಳಿಸದೇ ಯೋಜನೆಯಿಂದ ಹೊರಬಂದ ವಿಶ್ವ ಬ್ಯಾಂಕ್| ವಿಶ್ವ ಬ್ಯಾಂಕ್ ನಿರ್ಧಾರದ ಹಿಂದೆ ಅಮರಾವತಿ ವಿರುದ್ಧದ ರೈತರ ದೂರು ಕಾರಣ ಎಂಬ ಶಂಕೆ| 

ಅಮರಾವತಿ(ಜು.19): ಮಹತ್ವದ ಬೆಳವಣಿಗೆಯೊಂದರಲ್ಲಿ ಅಮರಾವತಿ ಯೋಜನೆಯಿಂದ ವಿಶ್ವ ಬ್ಯಾಂಕ್ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ.

ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಯಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದ ವಿಶ್ವ ಬ್ಯಾಂಕ್, ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿರುವ ವಿಶ್ವಬ್ಯಾಂಕ್, ಅಮರಾವತಿ ಯೋಜನೆಯಿಂದ ಹಿಂದೆ ಸರಿಯುವ ತನ್ನ ನಿರ್ಧಾರಕ್ಕೆ ಸೂಕ್ತ ಕಾರಣವನ್ನೂ ತಿಳಿಸಿಲ್ಲ.

ಮೂಲಗಳ ಪ್ರಕಾರ, ಅಮರಾವತಿ ಯೋಜನೆ ವಿರುದ್ಧ ರೈತರು ಭಾರೀ ಪ್ರಮಾಣದಲ್ಲಿ ದೂರು ನೀಡುತ್ತಿರುವದರಿಂದ, ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಯೋಜನೆಗೆ ಹೂಡಿಕೆ ಮಾಡದಿರಲು ವಿಶ್ವ ಬ್ಯಾಂಕ್ ನಿರ್ಧರಿಸಿದೆ ಎನ್ನಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

LPG Price: ಚೆನ್ನೈ, ಹೈದರಾಬಾದ್‌ಗಿಂತ ಬೆಂಗಳೂರೇ ಬೆಸ್ಟ್; ದೇಶದಲ್ಲಿ ಎಲ್ಲೆಲ್ಲಿ ಗ್ಯಾಸ್ ಸಿಲಿಂಡರ್ ಅಗ್ಗ? ಎಲ್ಲಿ ದುಬಾರಿ?
ಆದಾಯ ಹೆಚ್ಚಳಕ್ಕೆ BMTC ಹೊಸ ಪ್ಲಾನ್; ಬಸ್‌ನಲ್ಲಿ ಪ್ರಯಾಣಿಕರಿಗೆ ಸಿಗಲಿದೆ ನ್ಯೂ QR ಕೋಡ್