ಅಳೆದು ತೂಗಿ ಎಲ್ಲಾ ಕ್ಷೇತ್ರಗಳಿಗೂ ಅನುದಾನ, ಯೋಜನೆ| ಪ್ರವಾಸೀ ತಾಣಗಳ ಅಭಿವೃದ್ಧಿಗೂ ಒತ್ತು
ನವದೆಹಲಿ[ಜು.05]: ನಿರ್ಮಲಾ ಸೀತಾರಾಮನ್ ಬಹು ನಿರೀಕ್ಷಿತ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಅಳೆದು ತೂಗಿ ಯೋಜನೆ ಹಾಗೂ ಅನುದಾನ ಘೋಷಿಸಿರುವ ಹಣಕಾಸು ಸಚಿವೆ, ಭಾರತದ ಪ್ರವಾಸೀ ತಾಣಗಳ ಅಭಿವೃದ್ಧಿಗೂ ಒತ್ತು ನೀಡಿದ್ದಾರೆ.
Budget 2019; Finance Minister Nirmala Sitharaman at Lok Sabha:
The Govt is developing 17 iconic tourism sites as world-class tourist centres to improve the flow of domestic and foreign tourists to these destinations. pic.twitter.com/msSfS32XKx
ಬಜೆಟ್ ನಲ್ಲಿ ಭಾರತದ ಪ್ರವಾಸೀ ಕೆಂದ್ರಗಳ ಅಭಿವೃದ್ಧಿಯನ್ನು ಉಲ್ಲೇಖಿಸಿರುವ ನಿರ್ಮಲಾ ಸೀತಾರಾಮನ್ 17 ಪ್ರಮುಖ ಪ್ರವಾಸಿ ತಾಣಗಳನ್ನ ವಿಶ್ವ ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೇ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಭಾರತದ ರಾಯಭಾರ ಕಚೇರಿ ತೆರೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.