
ಬೆಂಗಳೂರು(ಅ.15): ಡಿಜಿಟಲೀಕರಣ ಇಂದಿನ ಆಧುನಿಕ ಯುಗಕ್ಕೆ ಬೇಕಾಗಿರುವ ಅನಿವಾರ್ಯ ಸಾಧನ. ಡಿಜಿಟಲೀಕರಣದಿಂದಾಗುವ ಲಾಭಗಳ ಪಟ್ಟಿ ಅತ್ಯಂತ ದೊಡ್ಡದಿದೆ. ಮಾನವ ಶ್ರಮವನ್ನು ಕಡಿಮೆ ಮಾಡುವ ಡಿಜಿಟಲೀಕರಣಕ್ಕೆ ಇಂದಿನ ಬಹುತೇಕ ಕಂಪನಿಗಳು ಮಾರು ಹೋಗಿವೆ.
ಅದರಂತೆ ದೇಶದ ಪ್ರಮುಖ ಖಾಸಗಿ ಕಂಪನಿಯಾದ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್(ಟಿಸಿಎಸ್) ಕೂಡ ಡಿಜಿಟಲೀಕರಣದತ್ತ ಧೃಢ ಹೆಜ್ಜೆ ಇರಿಸಿದ್ದು, ತನ್ನ ದೈನಂದಿನ ವ್ಯವಹಾರಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ.
ಇದೇ ಕಾರಣಕ್ಕೆ ಆಧುನಿಕ ತಂತ್ರಜ್ಞಾನದ ಅರಿವಿರುವ ಯುವ ಪೀಳಿಗೆಗೆ ಉದ್ಯೋಗಾವಕಾಶದ ಬಾಗಿಲು ತೆರೆದಿರುವ ಟಿಸಿಎಸ್, ಹೆಚ್ಚು ಸಂಖ್ಯೆಯಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ನೀಡಿದೆ.
ಸುಮಾರು 30 ಸಾವಿರ ಯುವಕರಿಗೆ ಉದ್ಯೋಗ ಒದಗಿಸಿರುವ ಟಿಸಿಎಸ್, ಈ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ತೆರೆಯುವ ಜೊತೆಗೆ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ.
ದೇಶದ ಅತ್ಯಂತ ದೊಡ್ಡ ಸಾಫ್ಟವೇರ್ ಸೇವೆ ಒದಗಿಸುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಿಸಿಎಸ್, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜೊತೆ ಜೊತೆಗೆ ಡಿಜಿಟಲೀಕರಣಕ್ಕೂ ಮುಂದಾಗಿರುವುದು ನವಪೀಳಿಗೆಯ ಸಂತಸಕ್ಕೆ ಕಾರಣವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.