ಬರೋಬ್ಬರಿ ₹67,270 ಕೋಟಿ ರೂ ಯಾರದೆಂಬುದೇ ಗೊತ್ತಿಲ್ಲ, ಹಣ ಹಕ್ಕುದಾರರಿಗೆ ತಲುಪಿಸಲು ಆರ್‌ಬಿಐ ವಿಶೇಷ ಜಾಗೃತಿ ಅಭಿಯಾನ

Published : Sep 25, 2025, 09:32 PM IST
RBI Monetary Policy

ಸಾರಾಂಶ

ಬರೋಬ್ಬರಿ ₹67,270 ಕೋಟಿ ಹಕ್ಕುದಾರರಿಲ್ಲದ ಠೇವಣಿಯನ್ನು ಮರಳಿ ನೀಡಲು ಆರ್‌ಬಿಐ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದೆ. UDGAM ಪೋರ್ಟಲ್ ಮತ್ತು ಸ್ಥಳೀಯ ಭಾಷೆಯ ಪ್ರಚಾರಗಳ ಮೂಲಕ  ಹಣ ಪತ್ತೆಹಚ್ಚಲು ಸಹಾಯ ಮಾಡಲಾಗುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದಾದ್ಯಂತ ಹಕ್ಕುದಾರರಿಲ್ಲದೆ ಉಳಿದಿರುವ ಕೋಟ್ಯಂತರ ರೂಪಾಯಿ ಠೇವಣಿಗಳನ್ನು ಮರುಪಡೆಯಲು ಬ್ಯಾಂಕುಗಳಿಗೆ ವಿಶೇಷ ಸೂಚನೆ ನೀಡಿದೆ. ಲಾಭಾಂಶ, ಬಡ್ಡಿ ವಾರಂಟ್‌ಗಳು, ವಿಮಾ ಆದಾಯ ಸೇರಿದಂತೆ ದಶಕಕ್ಕೂ ಹೆಚ್ಚು ಕಾಲ ಕ್ಲೈಮ್ ಮಾಡದ ಠೇವಣಿಗಳನ್ನು ಮರಳಿ ಹಕ್ಕುದಾರರಿಗೆ ತಲುಪಿಸುವ ನಿಟ್ಟಿನಲ್ಲಿ ಆರ್‌ಬಿಐ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ತೀರ್ಮಾನಿಸಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ತಿಳಿಸಿದೆ.

ದೇಶದಾದ್ಯಂತ ₹67,270 ಕೋಟಿ ರೂ. ಹಕ್ಕುದಾರರಿಲ್ಲದ ಹಣ

ಮಾರ್ಚ್ 4, 2024 ರ ವೇಳೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ದೇಶದಾದ್ಯಂತ ಸುಮಾರು ₹67,270 ಕೋಟಿ ರೂಪಾಯಿ ಹಕ್ಕುದಾರರಿಲ್ಲದೆ ಬ್ಯಾಂಕುಗಳಲ್ಲಿ ಉಳಿದಿದೆ. ಈ ಹಣವನ್ನು ಕ್ಲೈಮ್ ಮಾಡದ ಠೇವಣಿ ಎಂದು ವರ್ಗೀಕರಿಸಲಾಗಿದ್ದು, ಅಂತಿಮವಾಗಿ ಇದು ಆರ್‌ಬಿಐ ನಿರ್ವಹಿಸುವ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (Depositor Education and Awareness Fund – DEA Fund) ವರ್ಗಾಯಿಸಲಾಗುತ್ತದೆ.

ಹಕ್ಕುದಾರರಿಲ್ಲದ ಠೇವಣಿ ಎಂದರೇನು?

  • 10 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಸದ ಉಳಿತಾಯ ಅಥವಾ ಚಾಲ್ತಿ ಖಾತೆಗಳು
  • ಮೆಚ್ಯೂರಿಟಿ ಅವಧಿ ಮುಗಿದರೂ ವಾಪಸ್ ಪಡೆಯದ ಸ್ಥಿರ ಠೇವಣಿಗಳು (Fixed Deposits)
  • ಸಂಗ್ರಹಿಸದ ಲಾಭಾಂಶ (Dividend) ಅಥವಾ ಬಡ್ಡಿ (Interest)
  • ಈ ಎಲ್ಲಾ ರೀತಿಯ ಖಾತೆಗಳನ್ನು “ಹಕ್ಕುದಾರರಿಲ್ಲದ ಠೇವಣಿ” ಎಂದು ಪರಿಗಣಿಸಲಾಗುತ್ತದೆ.

ಕೇಂದ್ರೀಕೃತ ಪೋರ್ಟಲ್ ಮೂಲಕ ಮಾಹಿತಿ

ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, 2024ರ ಫೆಬ್ರವರಿಯ ಹಣಕಾಸು ನೀತಿ ಘೋಷಣೆಯಲ್ಲಿ ಕೇಂದ್ರೀಕೃತ ವೆಬ್ ಪೋರ್ಟಲ್ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಈ ಪೋರ್ಟಲ್ ಮೂಲಕ ಠೇವಣಿದಾರರು ಅಥವಾ ಅವರ ವಾರಸುದಾರರು ಬೇರೆಬೇರೆ ಬ್ಯಾಂಕುಗಳಲ್ಲಿ ಇರುವ ಹಕ್ಕುದಾರರಿಲ್ಲದ ಹಣವನ್ನು ಒಂದೇ ಜಾಗದಲ್ಲಿ ಹುಡುಕಿಕೊಳ್ಳಲು ಸಾಧ್ಯವಾಗುತ್ತದೆ.

ಈ UDGAM (Unclaimed Deposits – Gateway to Access Information) ಪೋರ್ಟಲ್ಗೆ ಈಗಾಗಲೇ ದೇಶದ 30 ಪ್ರಮುಖ ಬ್ಯಾಂಕುಗಳು ಸೇರಿಕೊಂಡಿದ್ದು, ಇದು ದೇಶದ 90% ಹಕ್ಕುದಾರರಿಲ್ಲದ ಠೇವಣಿಗಳನ್ನು ಒಳಗೊಂಡಿದೆ.

ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಿಗೆ ವಿಶೇಷ ಒತ್ತು

ಆರ್‌ಬಿಐ, ಕಡಿಮೆ ಸಾಕ್ಷರತೆ ಹೊಂದಿರುವ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವುದಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಬ್ಯಾಂಕುಗಳಿಗೆ ಸೂಚನೆ ನೀಡಿದೆ.

  • ಸ್ಥಳೀಯ ಭಾಷೆಗಳಲ್ಲಿ ಜಾಹೀರಾತು
  • ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಜಾಗೃತಿ ಅಭಿಯಾನ
  • ಖಾತೆದಾರರು ಹಾಗೂ ಅವರ ಕುಟುಂಬದ ಸದಸ್ಯರು ತಮ್ಮ ಹಕ್ಕಿನ ಹಣವನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ

ಇದರೊಂದಿಗೆ ರಾಜ್ಯಮಟ್ಟದ ಬ್ಯಾಂಕ್ ಸಮಿತಿಗಳು (SLBCs), ಹಕ್ಕುದಾರರಿಲ್ಲದ ಠೇವಣಿಗಳ ವಯೋ ಪ್ರೊಫೈಲ್ ಮತ್ತು ಬಕೆಟ್ ಆಧಾರದ ಮಾಹಿತಿ ವಿಶ್ಲೇಷಿಸಿ, ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಲಿವೆ.

ಠೇವಣಿದಾರರ ಹಿತಾಸಕ್ತಿಗೆ ಪ್ರಾಮುಖ್ಯತೆ

ಆರ್‌ಬಿಐನ ಈ ಅಭಿಯಾನದಿಂದಾಗಿ, ವರ್ಷಗಳ ಕಾಲ ಬ್ಯಾಂಕುಗಳಲ್ಲಿ ನಿಷ್ಕ್ರಿಯವಾಗಿ ಉಳಿದಿರುವ ಲಕ್ಷಾಂತರ ಜನರ ಠೇವಣಿಗಳು ಮತ್ತು ಲಾಭಾಂಶಗಳು ಮರಳಿ ಹಕ್ಕುದಾರರಿಗೆ ತಲುಪುವ ನಿರೀಕ್ಷೆ ಇದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಹಕ್ಕಿನ ಹಣವನ್ನು ಮರುಪಡೆಯಲು ಇದು ಮಹತ್ವದ ಹೆಜ್ಜೆಯಾಗಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!