ಕೊರೋನಾ ಮಧ್ಯೆ ಬಜೆಟ್ ಅಗ್ನಿ ಪರೀಕ್ಷೆ, ನಿರ್ಮಲಾ ಲೆಕ್ಕಾಚಾರಕ್ಕೆ ಭೇಷ್ ಎಂದ ಪಿಎಂ ಮೋದಿ!

Published : Feb 01, 2021, 04:37 PM ISTUpdated : Feb 01, 2021, 04:47 PM IST
ಕೊರೋನಾ ಮಧ್ಯೆ ಬಜೆಟ್ ಅಗ್ನಿ ಪರೀಕ್ಷೆ, ನಿರ್ಮಲಾ ಲೆಕ್ಕಾಚಾರಕ್ಕೆ ಭೇಷ್ ಎಂದ ಪಿಎಂ ಮೋದಿ!

ಸಾರಾಂಶ

ಕೊರೋನಾ ಮಧ್ಯೆ ಆರ್ಥಿಕತೆಗೆ ಟಾನಿಕ್ ನೀಡುವ ಸವಾಲು| ನಿರ್ಮಲಾ ಸೀತಾರಾಮನ್ ಲೆಕ್ಕಾಚಾರಕ್ಕೆ ಭೇಷ್ ಎಂದ ಪಿಎಂ ಮೋದಿ| ಭಾರತ ಎದುರಿಸಬೇಕಾಗಿರುವ ಎಲ್ಲಾ ಸವಾಲುಗಳನ್ನು ಈ ಬಜೆಟ್ ಸ್ವೀಕರಿಸುವ ಸಾಮರ್ಥ್ಯ ಪ್ರದರ್ಶಿಸಿದೆ

ನವದೆಹಲಿ(ಫೆ. 01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2021ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಕೊರೋನಾದಿಂದಾಗಿ ನಲುಗಿದ್ದ ದೇಶದ ಆರ್ಥಿಕತೆಗೆ ಬಜೆಟ್ ಮೂಲಕ ಟಾನಿಕ್ ನೀಡಿರುವ ನಿರ್ಮಲಾ ಲೆಕ್ಕಾಚಾರವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. 

"

ಕೊರೋನಾ ಸೇರಿ ಪ್ರಸ್ತುತ ಭಾರತ ಎದುರಿಸಬೇಕಾಗಿರುವ ಎಲ್ಲಾ ಸವಾಲುಗಳನ್ನು ಈ ಬಜೆಟ್ ಸ್ವೀಕರಿಸುವ ಸಾಮರ್ಥ್ಯ ಪ್ರದರ್ಶಿಸಿದೆ. ಬಜೆಟ್ ಮಂಡಿಸುವ ಸವಾಲು ಸ್ವೀಕರಿಸಿ, ಅದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಹಣಕಾಸು ಸಚಿವಾಲಯ ನಿಜಕ್ಕೂ ಅಭಿನಂನೆಗೆ ಅರ್ಹ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಜೆಟ್ ಆತ್ಮನಿರ್ಭರ್ ಭಾರತದತ್ತ ದೃಢ ಹೆಜ್ಜೆಯನ್ನಿಟ್ಟಿದ್ದು, ಭಾರತೀಯರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿದ್ದಕ್ಕೆ ನಿರ್ಮಲಾ ಸೀತಾರಾಮನ್ ತಂಡಕ್ಕೆ ಅಭಿನಂದನೆ. ಕೊರೋನಾನಾ ಹಾವಳಿ ನಡುವೆ ದೇಶದ ಅರ್ಥವ್ಯವಸ್ಥೆಯನ್ನು ನಿಗದಿತ ಮಾರ್ಗದಲ್ಲಿ ಮುನ್ನಡೆಸುವುದು ಸುಲಭದ ವಿಚಾರವಲ್ಲ. ಹೀಗಿದ್ದರೂ ಈ ಬಾರಿಯ ಬಜೆಟ್ ಈ ನಿಟ್ಟಿನಲ್ಲಿ ನಮ್ಮನ್ನು ಪ್ರೆರೇಪಿಸುವ ಕೆಲಸ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಷ್ಟ ಎದುರಿಸುತ್ತಿರುವ ಉದ್ಯಮಗಳನ್ನು ಮೇಲೆಕ್ಕೆತ್ತಲು ಈಗಾಗಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಈ ಬಜೆಟ್ ಈ ಹಿಂದೆ ಘೋಷಣೆ ಮಾಡಲಾದ ಪ್ಯಾಕೇಜ್‌ಗೆ ಪೂರಕವಾಗಿ ಕೆಲಸ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!