ಉದ್ಯಮಿಗಳ ಜತೆ ಸಹಭಾಗಿತ್ವಕ್ಕೆ ಮುಕ್ತ ಅವಕಾಶ: ಅಶ್ವತ್ಥ ನಾರಾಯಣ

Published : Sep 03, 2022, 09:07 PM IST
ಉದ್ಯಮಿಗಳ ಜತೆ ಸಹಭಾಗಿತ್ವಕ್ಕೆ ಮುಕ್ತ ಅವಕಾಶ: ಅಶ್ವತ್ಥ ನಾರಾಯಣ

ಸಾರಾಂಶ

ರಾಜ್ಯ ಸರಕಾರವು ಅಭಿವೃದ್ಧಿ ವಿಚಾರದಲ್ಲಿ ಉದ್ಯಮಿಗಳ ಜತೆ ಸಹಭಾಗಿತ್ವ ಹೊಂದಲು ಮುಕ್ತ ಮನಸ್ಸಿನಿಂದಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರು (ಸೆ. 3): ರಾಜ್ಯ ಸರಕಾರವು ಅಭಿವೃದ್ಧಿ ವಿಚಾರದಲ್ಲಿ ಉದ್ಯಮಿಗಳ ಜತೆ ಸಹಭಾಗಿತ್ವ ಹೊಂದಲು ಮುಕ್ತ ಮನಸ್ಸಿನಿಂದಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಗರದಲ್ಲಿ‌‌ ನೆಲೆಸಿರುವ ರೂರ್ಕಿ ಐಐಟಿ ಎಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವದಲ್ಲಿ ಅವರು ಶನಿವಾರ ಮಾತನಾಡಿದರು. ರೂರ್ಕಿ ಐಐಟಿ ಸಂಸ್ಥೆಯಲ್ಲಿ ಓದಿದವರು ಸಂಶೋಧನೆ, ವಿನ್ಯಾಸ, ಉತ್ಪನ್ನ ಇತ್ಯಾದಿ ಕ್ಷೇತ್ರಗಳಲ್ಲಿ ಕೊಡುತ್ತ ಬಂದಿರುವ ಕೊಡುಗೆ ಅಮೂಲ್ಯವಾಗಿದೆ. ಇದನ್ನು ಸಮಾಜ ಕೂಡ ಪುರಸ್ಕರಿಸಬೇಕು ಎಂದು ಅವರು ಕರೆ ಕೊಟ್ಟರು. ದೇಶದ ಪ್ರಗತಿಗೆ ಉದ್ಯಮಿಗಳು ಅತ್ಯಗತ್ಯ. ಇದರಿಂದ ಸಂಪತ್ತು ಮತ್ತು ಉದ್ಯೋಗಸೃಷ್ಟಿ ಎರಡಕ್ಕೂ ವೇಗ ಸಿಗುತ್ತದೆ. ಈಗಿನ ವರ್ಚುಯಲ್ ಯುಗದಲ್ಲಿ ಪ್ರತಿಭಾವಂತರು ಕೂತಲ್ಲಿಂದಲೇ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ನಿರ್ಣಾಯಕ ಕೊಡುಗೆ ಕೊಡಬಹುದು ಎಂದು ಅವರು ನುಡಿದರು. ಹಿಂದೆಲ್ಲ ಪ್ರತಿಭಾವಂತರು ಉಜ್ವಲ ಭವಿಷ್ಯ ಅರಸಿಕೊಂಡು ಅಮೆರಿಕ ಮತ್ತು ಇಂಗ್ಲೆಂಡ್ ಗಳಿಗೆ ವಲಸೆ ಹೋಗುತ್ತಿದ್ದರು. ಈಗ ಅಂತಹ ವಲಸೆಯ ಪ್ರಮಾಣ ಸಾಕಷ್ಟು ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಅವರು ವಿವರಿಸಿದರು.

ಪೇಟಿಎಂ, ರೇಝರ್‌ಪೇ, ಕ್ಯಾ‍ಶ್‌ಫ್ರೀಗೆ ಇಡಿ ಶಾಕ್; ಬೆಂಗಳೂರು ಕಚೇರಿಗಳ ಮೇಲೆ ದಾಳಿ

ಕರ್ನಾಟಕದಲ್ಲಿ ಐಐಎಸ್ಸಿ ಮತ್ತು ಯುವಿಸಿಇ ನೂರು ವರ್ಷಗಳನ್ನು ಕಂಡಿವೆ. ಬೆಂಗಳೂರು ಮೊದಲಿನಿಂದಲೂ ವಿಜ್ಞಾನ ನಗರವಾಗಿದ್ದು, ಇಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮಿಳಿತಗೊಂಡಿವೆ ಎಂದು ಅವರು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಅಶೋಕ್ ಸೂತಾ ಮುಂತಾದವರು ಇದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!