ರಾಜ್ಯಗಳಿಗೆ 40 ಸಾವಿರ ಕೋಟಿ ವಿತರಿಸಿದ ಕೇಂದ್ರ: ಕರ್ನಾಟಕಕ್ಕೆ 4,555.84 ಕೋಟಿ ರೂ!

Published : Oct 07, 2021, 04:29 PM IST
ರಾಜ್ಯಗಳಿಗೆ 40 ಸಾವಿರ ಕೋಟಿ ವಿತರಿಸಿದ ಕೇಂದ್ರ: ಕರ್ನಾಟಕಕ್ಕೆ 4,555.84 ಕೋಟಿ ರೂ!

ಸಾರಾಂಶ

* ರಾಜ್ಯಗಳಿಗೆ 40 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ ಕೇಂದ್ರ * ಜಿಎಸ್‌ಟಿ ಪರಿಹಾರದ ಕೊರತೆಯನ್ನು ನೀಗಿಸಲು ಹಣ ಬಿಡುಗಡೆ * ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಹಾರ 

ನವದೆಹಲಿ(ಅ.07): ಕೇಂದ್ರ ಸರ್ಕಾರವು(Union Govt) ರಾಜ್ಯಗಳಿಗೆ 40 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಜಿಎಸ್‌ಟಿ(GST) ಪರಿಹಾರದ ಕೊರತೆಯನ್ನು ನೀಗಿಸಲು ಈ ಮೊತ್ತವನ್ನು ಬ್ಯಾಕ್ ಟು ಬ್ಯಾಕ್ ಸಾಲ ಸೌಲಭ್ಯದ ಅಡಿಯಲ್ಲಿ ನೀಡಲಾಗಿದೆ, ಇದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ(Union Teritories) ಪರಿಹಾರ ನೀಡುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಮೊದಲು ಜುಲೈ 15, 2021 ರಂದು ರೂ .75,000 ಕೋಟಿ ಬಿಡುಗಡೆ ಮಾಡಲಾಗಿತ್ತು. ಈ ಬಿಡುಗಡೆಯೊಂದಿಗೆ, ಜಿಎಸ್‌ಟಿ ಪರಿಹಾರದ ವಿರುದ್ಧ ಬ್ಯಾಕ್ ಟು ಬ್ಯಾಕ್ ಸಾಲಗಳ ರೂಪದಲ್ಲಿ ಬಿಡುಗಡೆಯಾದ ಒಟ್ಟು ಮೊತ್ತವು ಪ್ರಸಕ್ತ ಹಣಕಾಸು ವರ್ಷದಲ್ಲಿ 1,15,000 ಕೋಟಿ ರೂಪಾಯಿಗಳನ್ನು ತಲುಪಿದೆ. ಈ ಬಿಡುಗಡೆಯು ಸಾಮಾನ್ಯ ಜಿಎಸ್‌ಟಿ ಪರಿಹಾರದ ಜೊತೆಗೆ ಪ್ರತಿ 2 ತಿಂಗಳಿಗೊಮ್ಮೆ ನಿಜವಾದ ಸೆಸ್ ಸಂಗ್ರಹದಿಂದ ಬಿಡುಗಡೆಯಾಗುತ್ತದೆ.

43 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ 

28.05.2021 ರಂದು ನಡೆದ 43 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ, ಕೇಂದ್ರ ಸರ್ಕಾರವು 2021-22 ರಲ್ಲಿ 1.59 ಲಕ್ಷ ಕೋಟಿ ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಳ್ಳಲು ನಿರ್ಧರಿಸಿದೆ. ಇದನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಂದೊಂದಾಗಿ ನೀಡಲಾಗುತ್ತದೆ. ಈ ಮೊತ್ತವು 2020-21ರ ಆರ್ಥಿಕ ವರ್ಷದಲ್ಲಿ ಇದೇ ರೀತಿಯ ಸೌಲಭ್ಯಕ್ಕಾಗಿ ಅಳವಡಿಸಲಾಗಿರುವ ತತ್ವಗಳಿಗೆ ಅನುಸಾರವಾಗಿದೆ, ಅಲ್ಲಿ 1.10 ಲಕ್ಷ ಕೋಟಿ ಮೊತ್ತವನ್ನು ಇದೇ ರೀತಿಯ ವ್ಯವಸ್ಥೆ ಅಡಿಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.

ಯಾವ ರಾಜ್ಯಕ್ಕೆ ಎಷ್ಟು ಮೊತ್ತ ಬಿಡುಗಡೆ(ಕೋಟಿಗಳಲ್ಲಿ)

* ಆಂಧ್ರ ಪ್ರದೇಶ 823.17
* ಅಸ್ಸಾಂ 446.30
* ಬಿಹಾರ 1,714.76
* ಛತ್ತೀಸ್‌ಗಢ 1249.09
* ಗೋವಾ 213.09
* ಗುಜರಾತ್ 3,280.58
* ಹರಿಯಾಣ 1,860.17
* ಹಿಮಾಚಲ ಪ್ರದೇಶ 678.01
* ಜಾರ್ಖಂಡ್ 624.92
* ಕರ್ನಾಟಕ 4,555.84
* ಕೇರಳ 2,198.55
* ಮಧ್ಯ ಪ್ರದೇಶ 1,763.81
* ಮಹಾರಾಷ್ಟ್ರ 3,467.25
* ಮೇಘಾಲಯ 35.47
* ಒಡಿಶಾ 1617.65
* ಪಂಜಾಬ್ 3,052.15
* ರಾಜಸ್ಥಾನ 1,828.48
* ತಮಿಳುನಾಡು 2,036.53
* ತೆಲಂಗಾಣ 1149.46
* ತ್ರಿಪುರ 100.88
* ಉತ್ತರ ಪ್ರದೇಶ 2,047.85
* ಉತ್ತರಾಖಂಡ 838.52
* ಪಶ್ಚಿಮ ಬಂಗಾಳ 1616.39
* ಕೇಂದ್ರಾಡಳಿತ ಪ್ರದೇಶ-ದೆಹಲಿ 1558.03
* ಜಮ್ಮು ಮತ್ತು ಕಾಶ್ಮೀರ- ಕೇಂದ್ರಾಡಳಿತ ಪ್ರದೇಶ 967.32
* ಪುದುಚೇರಿ- ಕೇಂದ್ರಾಡಳಿತ ಪ್ರದೇಶ 275.73

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಸ್ವಂತ ಉದ್ಯೋಗಿಗೆ ಸಾಲ ಕೊಡದ ದೇಶದ ಪ್ರತಿಷ್ಠಿತ ಬ್ಯಾಂಕ್: ಚಿಕಿತ್ಸೆ ನೀಡಲಾಗದೇ ಕ್ಯಾನ್ಸರ್ ಪೀಡಿತ ತಾಯಿ ಸಾವು
Indian Railways: ಗುಟ್ಕಾ ಪ್ರಿಯರಿಗಾಗಿ ವರ್ಷಕ್ಕೆ 1,200 ಕೋಟಿ ರೂ. ಖರ್ಚು ಮಾಡ್ತಿರೋ ರೈಲ್ವೆ ಇಲಾಖೆ!