
ನವದೆಹಲಿ(ಏ.05): 2020ರ ಮಾರ್ಚ್ನಿಂದ- ಆಗಸ್ಟ್ವರೆಗೆ ಸಾಲದ ಮೇಲಿನ ಕಂತು ಪಾವತಿಗೆ ನೀಡಿದ್ದ ವಿನಾಯಿತಿ ಯೋಜನೆಯ ಅಡಿ ಎಲ್ಲಾ ರೀತಿಯ ಸಾಲಗಳ ಮೇಲಿನ ಚಕ್ರ ಬಡ್ಡಿಯನ್ನೂ ಮನ್ನಾ ಮಾಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸುಮಾರು 1,800-2,000 ಕೋಟಿ ರು.ನಷ್ಟು ನಷ್ಟ ಸಂಭವಿಸಲಿದೆ.
2 ಕೋಟಿ ರು.ಗಿಂತಲೂ ಕಡಿಮೆ ಸಾಲಕ್ಕೆ ಸಂಪೂರ್ಣ ಬಡ್ಡಿ ಮನ್ನಾ ಮಾಡಬೇಕು ಎಂದು ಸುಪ್ರೀಂಕೋರ್ಟ್ ಕಳೆದ ವರ್ಷದ ನವೆಂಬರ್ನಲ್ಲಿ ತೀರ್ಪು ನೀಡಿತ್ತು. ಇದೀಗ ಅದನ್ನು 2 ಕೋಟಿ ರು.ಗಿಂತ ಮೇಲಿನ ಸಾಲಕ್ಕೂ ವಿಸ್ತರಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಹೀಗಾಗಿ ಬ್ಯಾಂಕುಗಳಿಗೆ ಸುಮಾರು 2000 ಕೋಟಿ ರು.ನಷ್ಟುಹೊರೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.