
ನವದೆಹಲಿ(ಜೂ.10): ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ರೈತರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 72 ರು.ನಷ್ಟುಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಇದರಿಂದಾಗಿ ಬೆಂಬಲ ಬೆಲೆ 2021-22ನೇ ಬೆಳೆ ವರ್ಷಕ್ಕೆ ಕ್ವಿಂಟಾಲ್ಗೆ 1,940 ರು.ಗೆ ಏರಿಕೆಯಾಗಲಿದೆ. ಬೆಳೆ ವರ್ಷವನ್ನು ಸರ್ಕಾರ ಜುಲೈನಿಂದ ಜೂನ್ವರೆಗೆ ಪರಿಗಣಿಸುತ್ತದೆ.
2020-21ರ ಬೆಳೆ ವರ್ಷದಲ್ಲಿ ಭತ್ತದ ಬೆಂಬಲ ಬೆಲೆ 1,868 ರು. ಇತ್ತು. ಇದು ಈಗ 1940 ರು.ಗೆ ಹೆಚ್ಚಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ಭತ್ತ ಸೇರಿ ಒಟ್ಟು 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಈ ಏರಿಕೆ ಬಳಿಕ ಕೃಷಿಕರು ತಮ್ಮ ಉತ್ಪಾದನಾ ವೆಚ್ಚಕ್ಕಿಂತ ಶೇ.5-58ರಷ್ಟುಬೆಲೆ ಪಡೆಯಲಿದ್ದಾರೆ ಎಂದು ಸರ್ಕಾರ ಹೇಳಿದೆ.
| ಉತ್ಪನ್ನ | ಏರಿಕೆ | ಹೊಸದರ |
| ಭತ್ತ | 1,940 ರು. | |
| ಹತ್ತಿ | 72 ರು. | 5726 ರು. |
| ಜೋಳ | 211ರು. | 2,738 ರು |
| ರಾಗಿ | 118 ರು. | .3,377 ರು. |
| ಮೆಕ್ಕೆಜೋಳ | 82 ರು. | 1,870 ರು |
| ಸೋಯಾಬೀನ್ | 20 ರು. | .3,950 ರು. |
| ನೆಲಗಡಲೆ | 70 ರು. | 5,550 ರು. |
| ಸೂರ್ಯಕಾಂತಿ ಬೀಜ | 130 ರು | 6,015 ರು. |
| ತೊಗರಿ | 300 ರು. | 6,300 ರು. |
| ಉದ್ದು | 300 ರು | 6,300 ರು. |
| ಹೆಸರುಬೇಳೆ | 79 ರು. | 7,275 ರು. |
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.