'ಗೋಲಿ ಮಾರೋ' ಠಾಕೂರ್ ಸಾಹೇಬರು: ಮನೆಯಲ್ಲಿ ಪೂಜೆ ಮಾಡಿ ಬಂದರು!

By Suvarna NewsFirst Published Feb 1, 2020, 10:29 AM IST
Highlights

ಕೇಂದ್ರ ಬಜೆಟ್‌ಗೆ ಸಿದ್ಧಗೊಂಡ ಹಣಕಾಸು ಸಚಿವಾಲಯ| ಬಜೆಟ್ ಪ್ರತಿಯೊಂದಿಗೆ ಸಂಸತ್ತಿಗೆ ಆಗಮಿಸಿದ ನಿರ್ಮಲಾ ಸೀತಾರಾಮನ್| ನಿರ್ಮಲಾ ಸೀತಾರಾಮನ್‌ಗೆ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಸಾಥ್| ತಮ್ಮ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿದ ಅನುರಾಗ್ ಠಾಕೂರ್| ಹನುಮಾನ್ ಮೂರ್ತಿಗೆ ಪೂಜೆ ಸಲ್ಲಿಸಿದ ಅನುರಾಗ್ ಠಾಕೂರ್| ಕೇಂದ್ರ ಬಜೆಟ್ ಎಲ್ಲ ವರ್ಗದ ಜನರಿಗೂ ಸಿಹಿಯಾಗಲಿದೆ ಎಂದ ಅನುರಾಗ್|

ನವದೆಹಲಿ(ಫೆ.01): ಸಿಎಎ ವಿರೋಧಿಗಳಿಗೆ ಗುಂಡಿಕ್ಕಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್, ಕೇಂದ್ರ ಬಜೆಟ್‌ಗೆ ಸಂಪೂರ್ಣ ಸಿದ್ಧಗೊಂಡಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಜೆಟ್ ಪ್ರತಿ ಮೂಲಕ ಈಗಾಗಲೇ ಸಂಸತ್ತು ತಲುಪಿರುವ ಅನುರಾಗ್ ಠಾಕೂರ್, ಬಜೆಟ್ ಪ್ರತಿಗಳ ಹಂಚಿಕೆಯತ್ತ ಗಮನಹರಿಸಿದ್ದಾರೆ.

Delhi: MoS Finance Anurag Thakur offers prayers at his residence, ahead of the presentation of the Union Budget 2020-21 in the Parliament today. pic.twitter.com/dZrhl9v7c5

— ANI (@ANI)

ಇದಕ್ಕೂ ಮೊದಲು ತಮ್ಮ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿದ ಅನುರಾಗ್ ಠಾಕೂರ್, ಹನುಮಾನ್ ಮೂರ್ತಿಗೆ ನಮಸ್ಕರಿಸುತ್ತಿರುವ ಫೋಟೋ ವೈರಲ್ ಆಗಿದೆ.

'ಬಹೀ ಖಾತಾ' ಎಂಬ ಅಕ್ಷಯ ಪಾತ್ರೆ: ಸಂಸತ್ತಿಗೆ ಬಂತು ನಿರ್ಮಲಾ ದಂಡಯಾತ್ರೆ!

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅನುರಾಗ್ ಠಾಕೂರ್, ಪ್ರಸ್ತುತ ಕೇಂದ್ರ ಬಜೆಟ್ ಎಲ್ಲ ವರ್ಗದ ಜನರಿಗೂ ಸಿಹಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.



On the eve of , we’re sharing..amongst the oldest books in the Press Library; it narrates India’s economic transition since 1947.

The Budget Speech is perhaps the most guarded of all speeches,undergoing multiple drafts till its made public! pic.twitter.com/YSYhx6PxoI

— Office of Mr. Anurag Thakur (@Anurag_Office)
click me!