ಗರ್ಭದಲ್ಲೇ ಕಣ್ಮುಚ್ಚಿದ 9 ತಿಂಗಳ ಕಂದಮ್ಮ, ಅಮ್ಮನೂ ಸಾವು -ಆರೋಪಿ ಅರೆಸ್ಟ್! ಆಗಿದ್ದೇನು?

Published : Jul 11, 2026, 10:38 AM IST
bangalore pregnant lady

ಸಾರಾಂಶ

ಆನೇಕಲ್‌ನ ಹಳೆ ಚಂದಾಪುರದಲ್ಲಿ ಒಂಬತ್ತು ತಿಂಗಳ ಗರ್ಭಿಣಿ ಸವಿತಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದು ಕೊಲೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದು, ಪತಿ ಹೇಮರಾಜುನನ್ನು ಸೂರ್ಯನಗರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಆನೇಕಲ್: ಹೆರಿಗೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ನಡೆದಿದೆ.

ನೇಪಾಳ ಮೂಲದ ದಂಪತಿ

ಮೃತ ಮಹಿಳೆಯನ್ನು ನೇಪಾಳ ಮೂಲದ ಸವಿತಾ (21) ಎಂದು ಗುರುತಿಸಲಾಗಿದೆ. ಸವಿತಾ ಮತ್ತು ಪತಿ ಹೇಮರಾಜು ಕಳೆದ ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿ ಆನೇಕಲ್‌ಗೆ ಬಂದಿದ್ದರು. ಹಳೆ ಚಂದಾಪುರದಲ್ಲಿ ವಾಸವಿದ್ದ ಈ ದಂಪತಿ ಇಲ್ಲಿಯೇ ಕೆಲಸ ಮಾಡಿಕೊಂಡಿದ್ದರು. ಸವಿತಾ ಈಗ 9 ತಿಂಗಳ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದರು.

ಕುಟುಂಬಸ್ಥರಿಂದ ಕೊಲೆ ಆರೋಪ

ಸವಿತಾ ಸಾವು ಸಹಜವಲ್ಲ, ಇದು ಕೊಲೆ ಎಂದು ಆಕೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪತಿ ಹೇಮರಾಜು ಅವನೇ ಸವಿತಾಳನ್ನು ಕೊಲೆ ಮಾಡಿದ್ದಾನೆ ಎಂದು ಮೃತಳ ಸಂಬಂಧಿಕರು ದೂರು ನೀಡಿದ್ದಾರೆ. ಕೌಟುಂಬಿಕ ಕಲಹ ಅಥವಾ ಬೇರೆ ಯಾವುದೋ ಕಾರಣಕ್ಕೆ ಈ ಕೃತ್ಯ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಪೊಲೀಸರ ವಶದಲ್ಲಿ ಪತಿ

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸೂರ್ಯನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತಳ ಕುಟುಂಬಸ್ಥರ ದೂರಿನ ಮೇರೆಗೆ ಪತಿ ಹೇಮರಾಜುನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸವಿತಾ ಸಾವು ಕೊಲೆಯೇ? ಅಥವಾ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ? ಇಲ್ಲವೇ ಇದು ಸಹಜ ಸಾವೇ? ಎನ್ನುವ ಪ್ರಶ್ನೆಗಳಿಗೆ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಉತ್ತರ ಸಿಗಬೇಕಿದೆ. ಸದ್ಯಕ್ಕೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.  ಒಂಬತ್ತು ತಿಂಗಳ ಗರ್ಭಿಣಿ ಮತ್ತು ಹೊಟ್ಟೆಯಲ್ಲಿದ್ದ ಮಗು ಇಬ್ಬರೂ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಮರುಕ ಉಂಟುಮಾಡಿದೆ.

PREV
Read more Articles on
click me!

Recommended Stories

ಗುಡ್‌ನ್ಯೂಸ್.. ಬೆಂಗಳೂರಲ್ಲಿ ಮತ್ತೊಂದು 4.4 ಕಿ.ಮೀ ಸುರಂಗ ರಸ್ತೆ..!
ಆದಾಯ ಮೀರಿ ಆಸ್ತಿ ಪ್ರಕರಣ: 20 ವರ್ಷಗಳ ಲೆಕ್ಕ ಹಾಕಿದ ಪೊಲೀಸರು! ಜಮೀರ್‌ಗೆ ಲೋಕಾಯುಕ್ತ ಶಾಕ್