ಹಾಲು ಆಮದು ಸ್ಥಗಿತಗೊಳಿಸಲು ಮನವಿ

By Kannadaprabha NewsFirst Published Oct 12, 2019, 9:59 AM IST
Highlights

ಹಾಲು ಆಮದು ಸ್ಥಗಿತಗೊಳಿಸಬೇಕು ಎಂದು ರೈತರು ಮನವಿ ಮಾಡಿದರು. ಶಿಘ್ರ ಹಾಲು ಒಕ್ಕೂಟಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ದೊಡ್ಡಬಳ್ಳಾಪುರ (ಅ.12): ರಾಜ್ಯಕ್ಕೆ ನೆರೆ ರಾಜ್ಯ ಹಾಗೂ ವಿದೇಶಗಳಿಂದ ಹಾಲು ಆಮದಾಗುತ್ತಿದ್ದು, ಸ್ಥಳೀಯ ಹೈನುಗಾರರಿಗೆ ಅನ್ಯಾಯವಾಗುತ್ತಿದೆ ಎಂದು ರೈತರು ಅಸಮಾಧಾನ ಹೊರ ಹಾಕಿದರು. 

ಕೂಡಲೇ ಕೇಂದ್ರ ಸರ್ಕಾರ ಹಾಲು ಆಮದು ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಬಮೂಲ್‌ ನಿರ್ದೇಶಕ ಆನಂದ್‌ ಸಂಸದ ಬಿ.ಎನ್‌. ಬಚ್ಚೇಗೌಡರಿಗೆ ಮನವಿ ಪತ್ರ ಸಲ್ಲಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿಕ್ರಿಯಿಸಿದ ಸಂಸದರು, ರಾಜ್ಯದ ಎಲ್ಲ ಹಾಲು ಒಕ್ಕೂಟಗಳು ಈ ಬಗ್ಗೆ ನಿರ್ಣಯ ಕೈಗೊಂಡು ಕೆಎಂಎಫ್‌ ಮೂಲಕವೂ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರು ಸಂಬಂಧಪಟ್ಟಸಚಿವರ ಗಮನಕ್ಕೆ ತರಲಾ​ಗು​ವುದು. ಈ ಬಗ್ಗೆ ರೈತಸ್ನೇಹಿ ನಿರ್ಧಾರ ಕೈಗೊಳ್ಳಲು ಒತ್ತಡ ಹೇರುವುದಾಗಿ ಭರವಸೆ ನೀಡಿದರು.

click me!