ಎಂ.ಬಿ.ಪಾಟೀಲ್‌ಗೆ ತಲೆತಿರುಕ ಎಂದ ಉಪಮುಖ್ಯಮಂತ್ರಿ!

By Web DeskFirst Published Oct 20, 2019, 11:48 AM IST
Highlights

ಮಾಜಿ ಸಚಿವ ಎಂ.ಬಿ.ಪಾಟೀಲ್‌ ವಿರುದ್ಧ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿ| ನಾನು ತಲೆ ತಿರುಕರ ಬಗ್ಗೆ ಮಾತನಾಡುವುದಿಲ್ಲ| ಯಾರಾದರು ಪ್ರಜ್ಞಾವಂತರ ಬಗ್ಗೆ ಬೇಕಾದರೆ, ಮಾತಾಡುತ್ತೇನೆ| ಯೋಜನೆ ನನ್ನ ಕೂಸು, ತಾಯಿ ಎನ್ನಲು ಅದೇನು ಯಾರಪ್ಪನ ಆಸ್ತಿ ಅಲ್ಲ| ಯಾವುದೇ ಯೋಜನೆಗೆ ಸರ್ಕಾರವೇ ತಂದೆ-ತಾಯಿ. ವೈಯಕ್ತಿವಾಗಿ ಯಾರೂ ಯೋಜನೆಗೆ ತಂದೆತಾಯಿ ಆಗಲು ಸಾಧ್ಯವಿಲ್ಲ| 

ಅಥಣಿ(ಅ.20): ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಕುರಿತು ನಾನೇ ಈ ಯೋಜನೆಯ ಕೂಸು, ತಂದೆ-ತಾಯಿ ಎಂದು ಹೇಳಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್‌ ವಿರುದ್ಧ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿ ಕಾರಿದ್ದು, ತಲೆತಿರುಕ ಎಂದು ಜರಿದಿದ್ದಾರೆ. 

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಸವದಿ, ನಾನು ತಲೆ ತಿರುಕರ ಬಗ್ಗೆ ಮಾತನಾಡುವುದಿಲ್ಲ. ಯಾರಾದರು ಪ್ರಜ್ಞಾವಂತರ ಬಗ್ಗೆ ಬೇಕಾದರೆ, ಮಾತಾಡುತ್ತೇನೆ ಎಂದರು. ಯೋಜನೆ ನನ್ನ ಕೂಸು, ತಾಯಿ ಎನ್ನಲು ಅದೇನು ಯಾರಪ್ಪನ ಆಸ್ತಿ ಅಲ್ಲ. ಯಾವುದೇ ಯೋಜನೆಗೆ ಸರ್ಕಾರವೇ ತಂದೆ-ತಾಯಿ. ವೈಯಕ್ತಿವಾಗಿ ಯಾರೂ ಯೋಜನೆಗೆ ತಂದೆತಾಯಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹಾದಾಯಿ ಜಾರಿ ವಿಚಾರವಾಗಿ ಗೋವಾ ಸಿಎಂ ಜೊತೆಗೆ ನಮ್ಮ ಸಿಎಂ ಕೂಡ ಸಮಾಲೋಚನೆ ನಡೆಸಿದ್ದಾರೆ. ಈ ಬಗ್ಗೆ ಚರ್ಚಿಸಲು ಸಮಯ ಕೂಡ ನಿಗದಿಯಾಗಿತ್ತು. ಆದರೆ, ಗೋವಾದ ಕಾಂಗ್ರೆಸ್‌ ಪಕ್ಷ, ವಿರೋಧ ಪಕ್ಷ ಅಲ್ಲಿನ ಬಿಜೆಪಿಯ ಮೇಲೆ ಟೀಕಾಪ್ರಹಾರ ನಡೆಸಿದೆ. ಮಾತ್ರವಲ್ಲ, ಗೋವಾಕ್ಕೆ ಅನ್ಯಾಯವಾಗುತ್ತದೆ ಎಂದು ಅಲ್ಲಿನ ಕಾಂಗ್ರೆಸ್‌ ಪಕ್ಷ ಗಲಾಟೆ ನಡೆಸಿದೆ. ಹೀಗಾಗಿ ಚರ್ಚೆ ಸಮಯ ಮುಂದಕ್ಕೆ ಹೋಗಿದೆ ಎಂದು ತಿಳಿಸಿದ್ದಾರೆ. 

click me!