ನಾಮ ಇಡಲು ಬಂದಾಗ ‘ಬೇಡಪ್ಪ ಬೇಡ’ ಎಂದು ಹಿಂದೆ ಸರಿದ ಸಿದ್ದರಾಮಯ್ಯ!

By Web DeskFirst Published Jun 27, 2019, 10:53 PM IST
Highlights

ಮಾಜಿ ಸಿಎಂ ಸಿದ್ದರಾಮಯ್ಯಗೆ ಅಂದು ನಾಮ ಇಟ್ಟವರನ್ನ ಕಂಡ್ರೆ ಭಯ, ಇಂದು ಹಣೆಗೆ ನಾಮ ಇಟ್ಟುಕೊಳ್ಳೋಕೆ ಭಯ.. ಹೌದು ಇಂಥದ್ದೊಂದು ಪ್ರಕರಣ ನಡೆದು ಹೋಗಿದೆ.

ಬಾಗಲಕೋಟೆ[ಜೂ. 27]  ಕುಂಕುಮ ನಾಮ ಇಡಲು ಬಂದ್ರೆ ಬೇಡಪ್ಪ ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಿಂದಕ್ಕೆ ಸರಿದಿದ್ದಾರೆ.

ತಮ್ಮ ಸ್ವಕ್ಷೇತ್ರ ಬಾದಾಮಿಯ ಚಿಮ್ಮನಕಟ್ಟಿ ಗ್ರಾಮದಲ್ಲಿ ಸಿದ್ದರಾಮಯ್ಯ ಹಣೆಗೆ ಕುಂಕುಮ ಇಡುವುದನ್ನುನಿರಾಕರಿಸಿದ್ದಾರೆ.

Video:ಸಿದ್ದುಗೆ ಶೂ ಹಾಕಲು ಬಂದ ಮುಖಂಡ: ಏ…ಬಿಡಯ್ಯ…ಮಿಡಿಯಾದವ್ರು ಇದ್ದಾರೆ...

ರಸ್ತೆ ಕಾಮಗಾರಿಗೆ ಭೂಮಿಪೂಜೆ ವೇಳೆ ಸಿದ್ದುಗೂ ಕುಂಕುಮ ನಾಮ ಇಡಲು ಮುಂದಾಗಿದ್ದ  ಗ್ರಾಮಸ್ಥರು ಮುಂದಾಗುತ್ತಿದ್ದರು. ಈ ಹಿಂದೆ ಸ್ವಕ್ಷೇತ್ರಕ್ಕೆ ಬಂದಾಗ ಕುಂಕುಮ ನಾಮ ಹಾಕಿದವರನ್ನ ಕಂಡ್ರೆ ಭಯ ಎಂದು ಸಿದ್ದರಾಮಯ್ಯ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. 


 

click me!