ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಜಾರಿ ಮಾಡಲ್ಲ: ಸಿಎಂ ಘರ್ಜನೆ!

Published : Sep 11, 2019, 08:38 PM IST
ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಜಾರಿ ಮಾಡಲ್ಲ: ಸಿಎಂ ಘರ್ಜನೆ!

ಸಾರಾಂಶ

‘ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಜಾರಿಯಿಲ್ಲ’| ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಗೆ ವಿರೋಧ| ಹೊಸ ಕಾಯ್ದೆ ಜಾರಿ ಸಾಧ್ಯವಿಲ್ಲ ಎಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ| ಹೊಸ ಸಂಚಾರಿ ದಂಡ ತುಂಬಾ ಕಠಿಣ ಹಾಗೂ ಅಸಮರ್ಪಕವಾಗಿದೆ ಎಂದ ಮಮತಾ|

ಕೋಲ್ಕತ್ತಾ(ಸೆ.11): ಕೇಂದ್ರ ಸರ್ಕಾರದ ನೂತನ ಮೋಟಾರು​ ವಾಹನ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಹೊಸ ಸಂಚಾರಿ ದಂಡ ತುಂಬಾ ಕಠಿಣ ಹಾಗೂ ಅಸಮರ್ಪಕವಾಗಿದೆ ಎಂದು ದೂರಿರುವ ಮಮತಾ,  ಈ ಕಾಯ್ದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಟಿಎಂಸಿ ಈ ಹಿಂದೆಯೇ ಸಂಸತ್ತಿನಲ್ಲಿ ಮೋಟರ್​ ವಾಹನ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದ್ದು, ಜನರ ಭಾವನೆಗೆ ಧಕ್ಕೆಯಾಗುವ ಈ ಅಸಂವಿಧಾನಿಕ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.

PREV
click me!

Recommended Stories

ಏಪ್ರಿಲ್ ತಿಂಗಳ ಡಿಸ್ಕೌಂಟ್ ಆಫರ್, ವೆನ್ಯೂ, ಕ್ರೆಟಾ ಸೇರಿ ಹ್ಯುಂಡೈ ಕಾರುಗಳಿಗೆ ಭಾರಿ ರಿಯಾಯಿತಿ
ಕರ್ನಾಟಕದ ಎಮೊಬಿ ಎಲೆಕ್ಟ್ರಿಕ್ ಸ್ಕೂಟರ್ ಅತೀ ಕಡಿಮೆ ಬೆಲೆಯಲ್ಲಿ ಬಿಡುಗಡೆ