ವಾರ ಭವಿಷ್ಯ: ಈ ರಾಶಿಯವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವ ಸಮಯವಿದು

By Suvarna NewsFirst Published Nov 29, 2020, 8:12 AM IST
Highlights

ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ

ಮೇಷ: ನೀವು ನಂಬಿರುವ ವ್ಯಕ್ತಿಗಳಿಂದಲೇ ನಿಮಗೆ ತೊಂದರೆಯುಂಟಾಗಲಿದೆ. ಬರುವ ಕಷ್ಟಕ್ಕೆ ಹೆದರುವುದು ಬೇಡ. ನಿಮ್ಮ ಸಹಾಯಕ್ಕೆ ಸಾಕಷ್ಟು ಮಂದಿ ಮುಂದೆ ಬರಲಿದ್ದಾರೆ. ಈ ವಾರ ನಿಮ್ಮ ಬಾಳಿಗೆ ಶುಭ ಕಾರಕ. ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗುವುದು ಬೇಡ. ಹೆಚ್ಚು ಆತ್ಮವಿಶ್ವಾಸ ಅಪಾಯಕಾರಿ. ತಾಳ್ಮೆ ಇರಲಿ.

ವೃಷಭ: ಮತ್ತೊಬ್ಬರನ್ನು, ಅವರ ಶಕ್ತಿ ಸಾಮರ್ಥ್ಯಗಳನ್ನು ಅಳೆದು ತೂಗಿ ನೋಡುವುದು ಬೇಡ. ನಿಮ್ಮಲ್ಲಿನ ಗುಣಗಳೇ ನಿಮಗೆ ಮಾನ್ಯತೆ ದೊರಕಿಸಿಕೊಡಲಿವೆ. ಹಣಕಾಸಿನ ವಿಚಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ ಇರಲಿ. ಮನೆಗೆ ಬಂಧುಗಳು ಆಗಮಿಸಲಿದ್ದಾರೆ. ಕೈ ಸಾಲಗಳು ಹೆಚ್ಚಾಗಲಿವೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಯವಾಗಲಿದೆ.

ಮಿಥುನ: ಯಾರಿಗೂ ಅಂಜುವ ಅವಶ್ಯಕತೆ ಇಲ್ಲ. ನಿಮ್ಮ ನಿರ್ಧಾರಗಳಿಗೆ ಬದ್ಧವಾಗಿ ನೀವು ನಡೆಯುವಿರಿ. ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವ ಸಮಯವಿದು. ಹೆಚ್ಚು ಉತ್ಸಾಹದಿಂದ ವಾರ ವೀಡೀ ಕೆಲಸ ಮಾಡುವಿರಿ. ಬಂಧುಗಳೊಂದಿಗೆ ಆತ್ಮೀಯತೆ ಸಾಧ್ಯವಾಗಲಿದೆ. ನಿಮ್ಮನ್ನು ನೀವು ನಂಬಿ ನಡೆಯಿರಿ.

ಕಟಕ: ನಿಮ್ಮ ಭಾವನೆಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯಲಿದೆ. ನಿಮ್ಮ ನೆಚ್ಚಿನ ವ್ಯಕ್ತಿ ಹೆಚ್ಚು ಹತ್ತಿರವಾಗುವನು. ಗೃಹಿಣಿಯರಿಗೆ ಹೆಚ್ಚು ಅನುಕೂಲಗಳು ಆಗಲಿವೆ. ತಂದೆಯ ಆರೋಗ್ಯ ಚೇತರಿಕೆಯಿಂದ ಮನಸ್ಸಿಗೆ ಸಂತೋಷ ದೊರೆಯಲಿದೆ. ಖರ್ಚುಗಳು ಅಧಿಕವಾಗಲಿವೆ. ಅಂತೆಯೇ ಆದಾಯವೂ ಹೆಚ್ಚಲಿದೆ.

ಸಿಂಹ: ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ವಾರದಲ್ಲಿ ಹೆಚ್ಚು ದಿನ ಮನೆಯಿಂದ ಹೊರಗೇ ಇರಲಿದ್ದೀರಿ. ಹೊಸ ಕೆಲಸಗಳು ಕೈಗೂಡಲಿವೆ. ವಾರಾಂತ್ಯದಲ್ಲಿ ನೆಮ್ಮದಿ ನೆಲೆಗೊಳ್ಳಲಿದೆ. ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ನಿಮಗೆ ಗೊತ್ತಿಲ್ಲದ ಮನಃಶಾಸ್ತ್ರದಲ್ಲಿರುವ ಬಣ್ಣದ ಗುಟ್ಟನ್ನು ಇಲ್ ಹೇಳ್ತೀವಿ ಕೇಳಿ!

ಕನ್ಯಾ: ಆರೋಗ್ಯದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ. ಹಿರಿಯರ ಆಶೀರ್ವಾದದಿಂದ ಪ್ರಗತಿ. ಬಂಧು ಬಳಗವೆಲ್ಲಾ ಒಟ್ಟಿಗೆ ಸೇರುವುದು. ಸಂತಸಕ್ಕೆ ಸಾಕಷ್ಟು ಕಾರಣಗಳು ಸಿಕ್ಕಲಿವೆ. ಬದ್ಧತೆಯಿಂದ ಮಾಡುವ ಕೆಲಸದಿಂದ ಹೆಚ್ಚು ಪ್ರಸಿದ್ಧಿ ಹೊಂದು ವಿರಿ. ಮಾತಿನ ಮೇಲೆ ಹೆಚ್ಚು ಹಿಡಿತವಿರಲಿ. ನೆಮ್ಮದಿಯು ಹೆಚ್ಚಾಗಲಿದೆ.

ತುಲಾ: ಜಾಣತನದಿಂದ ಹಿಡಿದ ಕೆಲಸದಲ್ಲಿ ಉನ್ನತಿ ಸಾಧಿಸುವಿರಿ. ಗೆಳೆಯರ ಸಹಾಯದಿಂದ ಹೊಸ ವಾಹನ ಕೊಳ್ಳುವಿರಿ. ಓದಿನಲ್ಲಿ ಪ್ರಗತಿ. ಮಾತಿನಲ್ಲಿ ಸಂಯಮವಿರಲಿ. ಮಕ್ಕಳ ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ಆತ್ಮೀಯರ ಸಾಧನೆಯಿಂದ ಸಂತೋಷ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಉಂಟಾಗಲಿದೆ. 

ವೃಶ್ಚಿಕ: ಬ್ಯಾಂಕ್ ಸಾಲ, ಇಎಂಐಗಳಿಂದ ಸಾಧ್ಯವಾದಷ್ಟು ದೂರ ಇರಲು ಪ್ರಯತ್ನಿಸಿ, ಸಣ್ಣ ಉದ್ದಿಮೆದಾರರಿಗೆ ಸಾಲದ ಹೊರೆ ಹೆಚ್ಚಾಗಲಿದೆ. ಮಾನಸಿಕ ಸ್ಥೈರ್ಯದಿಂದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಿರಿ. ತಂದೆಯ ಮಾರ್ಗದರ್ಶನದಲ್ಲಿ ನಡೆಯುವುದು ಸೂಕ್ತ. ನರಸಿಂಹನ ಪೂಜೆ ಮಾಡಿ.

ಧನಸ್ಸು: ಮದುವೆ ಮೊದಲಾದ ಶುಭ ಕಾರ್ಯಗಳನ್ನು ಮುಂದೂಡುವುದು ಒಳಿತು. ದೈಹಿಕವಾಗಿ ಸದೃಢರಾಗುವಿರಿ. ಆರ್ಥಿಕ ಸಮಸ್ಯೆಗಳು ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗುತ್ತಾ ಸಾಗಲಿವೆ. ಕೆಲಸದಲ್ಲಿ ಪ್ರಗತಿ. ಹೊಸ ವಸ್ತುಗಳನ್ನು ಕೊಳ್ಳುವ ಕನಸು ಈಡೇರಲಿದೆ. 

ಮಕರ:ಒಳ್ಳೆಯ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣುವುದು ಬೇಡ. ಸಾಧ್ಯವಾದಷ್ಟು ಮೌನವಾಗಿರುವುದು ಒಳಿತು. ಮಾಡುವ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಹಿಂದಿನ ಉಳಿತಾಯಗಳಿಂದ ನೂತನ ಉದ್ಯಮ ಸ್ಥಾಪನೆ. 

ಕುಂಭ: ಸಹೋದ್ಯೋಗಿಗಳಿಂದ ಆಗುತ್ತಿದ್ದ ಅನಗತ್ಯ ಕಿರಿಕಿರಿಗೆ ಮುಕ್ತಿ ದೊರೆಯಲಿದೆ. ಸಾಫ್ಟ್‌ವೇರ್ ಉದ್ಯೋಗಿ ಗಳಿಗೆ ವೃತ್ತಿ ಬದಲಾವಣೆಯ ಅವಕಾಶ. ನೂತನ ದಂಪತಿಗಳಿಗೆ ಶುಭ ಸುದ್ದಿ ತಿಳಿಯಲಿದೆ. ಹೊಸ ಮನೆ ಕೊಳ್ಳುವ ಕನಸನ್ನು ಸದ್ಯಕ್ಕೆ ಕೈ ಬಿಡುವುದು ಉತ್ತಮ. ನೂತನ ದಂಪತಿಗಳ ಬಾಳಿನಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ. 

ಮೀನ: ಮನೆ ದೇವರಿಗೆ ಪೂಜೆ ಸಲ್ಲಿಸಿಬರುವುದು ಉತ್ತಮ. ಮನಸ್ಸಿನ ನೆಮ್ಮದಿಗೆ ಅಡೆತಡೆ ಉಂಟು ಮಾಡುವ ಸಾಕಷ್ಟು ವಿಚಾರಗಳು ಎದುರಾಗಲಿವೆ. ಸ್ವಲ್ಪ ಧೈರ್ಯದಿಂದ ಎಲ್ಲವನ್ನೂ ಎದುರಿಸಿ. ಮಕ್ಕಳ ತುಂಟಾಟದಿಂದ ಮನೆಯಲ್ಲಿ ಸಂತೋಷ. ಕೆಲಸದಲ್ಲಿ ಪ್ರಗತಿ.

click me!