ಶುಭ ಮುಂಜಾನೆ ಓದುಗರೇ, ಈ ದಿನದ ನಿಮ್ಮ ಭವಿಷ್ಯ ನೋಡಿಕೊಂಡು ಬಿಡಿ!

Published : Jul 31, 2018, 07:20 AM IST
ಶುಭ ಮುಂಜಾನೆ ಓದುಗರೇ, ಈ ದಿನದ ನಿಮ್ಮ ಭವಿಷ್ಯ ನೋಡಿಕೊಂಡು ಬಿಡಿ!

ಸಾರಾಂಶ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕುಂಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಇಂದು ನಿಮ್ಮ ಮನಸ್ಸಿನ ಮೇಲೆ ಸತ್ಪರಿಣಾಮ ಮೂಡಲಿದೆ, ಓದುವ ಆಸಕ್ತಿ ಹಾಗೂ ಸಜ್ಜನರ ಸಹವಾಸ ದೊರೆಯಲಿದೆ. ಉತ್ತಮ ಕಾರ್ಯಗಳು ಪ್ರಾರಂಭವಾಗಲಿವೆ. ಶುಭದಿನ.  

ದೋಷಪರಿಹಾರ : ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ

ವೃಷಭ : ಆತ್ಮೀಯರೇ ಇಂದು ನಿಮ್ಮ ಉದ್ಯೋಗ ಸ್ಥಾನದಲ್ಲಿ ಸ್ತ್ರೀಯರಿಂದ ಅನುಕೂಲ, ವ್ಯಾಪಾರ ಕ್ಷಾತ್ರದಲ್ಲಿ ಸಹಾಯ, ಧನ ಲಾಭವನ್ನು ಕಾಣಬಹುದು. ನಿಮ್ಮ ಕಾಲಿನ ಭಾಗಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಕೋರ್ಟು ಕಚೇರಿ ಕೆಲಸದಿಂದ ಮಾನಸಿಕ ಬೇಸರ

ದೋಷ ಪರಿಹಾರ : ದುರ್ಗಾ ದೇವಿಗೆ 5 ನಮಸ್ಕಾರ ಮಾಡಿ

ಮಿಥುನ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಕೀರ್ತಿಯ ದಿನ, ಯಶಸ್ಸು ನಿಮ್ಮದಾಗಲಿದೆ. ಕಾರ್ಯ ಸಿದ್ಧಿಯೂ ಇದೆ. ಉತ್ತಮರ ಭೇಟಿ, ನಿಮ್ಮ ಗಂಟಲಿನ ಭಾಗದಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ. ನೀರಿನಲ್ಲಿ ವ್ಯತ್ಯಯವಾಗುತ್ತದೆ. 

ದೋಷ ಪರಿಹಾರ : ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ

ಕಟಕ : ಇಂದು ನಿಮ್ಮ  ಆರೋಗ್ಯದಲ್ಲಿ ಕೊಂಚ ವ್ಯತ್ಯಯವಾಗಬಹುದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು, ನಿಮ್ಮ ಹತ್ತಿರದ ಬಂಧುಗಳು ನಿಮ್ಮ ಕಷ್ಟವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಮಾನೋ ವೇದನೆ. 
  
ದೋಷ ಪರಿಹಾರ : ನಾಗ ದೇವರ ಆರಾಧನೆ ಮಾಡಿ 

ಸಿಂಹ : ಆತ್ಮೀಯರೇ ನಿಮ್ಮ ರಾಶಿಯಲ್ಲಿ ಸ್ಥಿತನಾಗಿರುವ ಶುಕ್ರನಿಂದ ಸ್ತ್ರೀಯರಿಂದ ಬೇಸರ, ಜಗಳ ಸಂಭವ, ಸಪ್ತಮದಲ್ಲಿರುವ ಚಂದ್ರ ಶುಕ್ರನನ್ನು ನೋಡುವುದರಿಂದ ಸ್ತ್ರೀಯರಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳೂ ಮೂಡಬಹುದು.

ದೋಷ ಪರಿಹಾರ : ಪಾರ್ವತಿ ಸಹಿತ ಶಿವ ದೇವಾಲಯಕ್ಕೆ ಹೋಗಿ ಭಸ್ಮ ಹಾಗೂ ಹೂವನ್ನು ಸಮರ್ಪಣೆ ಮಾಡಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಧನಾಗಮನದ ದಿನ, ಆದರೆ ಆರೋಗ್ಯದಲ್ಲಿ ವ್ಯತ್ಯಯವನ್ನೂ ಕಾಣುತ್ತೀರಿ. ನಿಮ್ಮ ಮನಸ್ಸು ನಿಮ್ಮ ಕೈಯಲ್ಲಿರುವುದಿಲ್ಲ. ಸ್ತ್ರೀಯರ ಮಾತಿನಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚರಿಸುವಾಗ ಎಚ್ಚರವಿರಲಿ.
  
ದೋಷ ಪರಿಹಾರ : ಮಹಾಲಕ್ಷ್ಮೀ ಸಹಿತ ವಿಷ್ಣು ವಿಗೆ 18 ನಮಸ್ಕಾರ ಹಾಕಿ.

ತುಲಾ :  ಆತ್ಮೀಯರೇ ನಿಮ್ಮ ಆತ್ಮ ಬಲ ಹೆಚ್ಚಲಿದೆ, ಸ್ತ್ರೀಯರಿಂದ ಅಂದರೆ ಹೆಣ್ಣುಮಕ್ಕಳಿದ್ದರೆ ಅವರಿಂದ ಧೈರ್ಯ ಸ್ಥೈರ್ಯ ಹಾಗೂ ಸಹಾಯ ಸಿಗಲಿದೆ. ನಿಮ್ಮ ಭ್ರಾತೃಗಳಲ್ಲಿ ಅಸಹಕಾರ. ಕಾಲಿನಲ್ಲಿ ಅಥವಾ ಗಂಟಲಿನಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. ಆಹಾರದಲ್ಲಿ ವ್ಯತ್ಯಯ ಮಾಡಿಕೊಳ್ಳಬೇಡಿ. 

ದೋಷ ಪರಿಹಾರ : ಶುಕ್ರ ಗ್ರಹ ಆರಾಧನೆ ಮಾಡಿ

ವೃಶ್ಚಿಕ : ಆತ್ಮೀಯರೇ, ನಿಮ್ಮ ಮಾತಿನಿಂದ ಕಲಹವಾಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚರಿಸುವಾಗ ಸ್ತ್ರೀಯರಿಗೆ ಅಥವಾ ಸ್ತ್ರೀಯರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ ನಿಮ್ಮಲ್ಲಿ ಒಂದು ಧೈರ್ಯ ನಿಮ್ಮ ಸರ್ವ ಕೆಲಸಗಳನ್ನೂ ಮುನ್ನಡೆಸುತ್ತದೆ. ಧೈರ್ಯವಾಗಿರಿ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ದೇಹದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇದೆ, ತೃತೀಯ ಚಂದ್ರ ನಿಮ್ಮ ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಮೂಡಿಸಬಹುದು. ನಿಮ್ಮ ದೈನಂದಿನ ಕಾರ್ಯಗಳೆಲ್ಲ ವಿಳಂಬವಾಗುತ್ತವೆ. ಜಾಗ್ರತೆಯಿಂದ ದಿನವನ್ನು ಕಳೆಯಿರಿ.

ದೋಷ ಪರಿಹಾರ : ಶಿವಾರಾಧನೆ ಅಥವಾ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ.

ಮಕರ :  ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಧನವ್ಯಯ, ಸ್ತ್ರೀ ಮೂಲಕ ಧನವ್ಯಯವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ನೀರಿನ ಸಲುವಾಗಿ ಅಥವಾ ದ್ರವ ಪದಾರ್ಥಗಳಿಗೆ ಹಣ ವ್ಯಯ ಮಾಡುತ್ತೀರಿ. ಸಾಮಾನ್ಯ ದಿನ.
  
ದೋಷ ಪರಿಹಾರ : ಶನಿ ಸ್ತೋತ್ರ ಪಠಿಸಿ

ಕುಂಭ : ಆತ್ಮೀಯರೇ ನಿಮ್ಮ ದೇಹದಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಕೆಲವರಿಗೆ ತಾಯಿಯಿಂದ ಅನುಕೂಲ, ಮತ್ತೂ ಕೆಲವರಿಗೆ ಉದ್ಯೋಗದಲ್ಲಿ ಅನುಕೂಲ, ಧನ ಲಾಭವೂ ಇದೆ.

ದೋಷ ಪರಿಹಾರ :  ಶಿವಾರಾಧನೆ ಮಾಡಿ, ಅಂದರೆ ಶಿವನಿಗೆ ಬಿಲ್ವಪತ್ರೆ ಸಮರ್ಪಣೆ ಮಾಡಿ
  
ಮೀನ : ಸ್ನೇಹಿತರೆ ಇಂದು ನಿಮ್ಮ ಮಕ್ಕಳಿಂದ ತೊಂದರೆಯಾಗುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ನಷ್ಟವೂ ಇದೆ. ಧನ ಲಾಭವೂ ಇದೆ. ಉದ್ಯೋಗದಲ್ಲಿ ಬದಲಾವಣೆ, ಮಾನಸಿಕ ತೊಂದರೆಗಳನ್ನು ಅನುಭವಿಸಬೇಕಾದೀತು. ಎಚ್ಚರವಾಗಿರಿ. 

PREV
click me!

Recommended Stories

ಇಂದು ಸರ್ವಾರ್ಥ ಸಿದ್ಧಿ ಯೋಗ ಬಂಪರ್‌ ಅದೃಷ್ಟ, ಸಂಪತ್ತು
ಇಂದು ಬುಧಾದಿತ್ಯ ರಾಜಯೋಗದಿಂದ ಈ ರಾಶಿಗೆ ಬಂಪರ್‌ ಲಾಟರಿ, ಅದೃಷ್ಟ