ಕೊರಗು ಬೇಡ ಈ ರಾಶಿಯವರಿಗೆ ಲಾಭ ಸಿಗಲಿದೆ

Published : Sep 26, 2019, 07:18 AM ISTUpdated : Sep 26, 2019, 07:40 AM IST
ಕೊರಗು ಬೇಡ ಈ ರಾಶಿಯವರಿಗೆ ಲಾಭ ಸಿಗಲಿದೆ

ಸಾರಾಂಶ

ಸೆಪ್ಟೆಂಬರ್ 26  ಗುರುವಾರ, ಹೇಗಿದೆ ಇಂದಿನ ದಿನ ಭವಿಷ್ಯ ?

ಮೇಷ: ಮನಸ್ಸು ಮಾಡಿದರೆ ಆಗದೇ ಇರುವ ಕೆಲಸ
ಯಾವುದೂ ಇಲ್ಲ. ಸೋಮಾರಿತನವನ್ನು
ಬಿಟ್ಟು ಮುಂದೆ ಸಾಗಿದರೆ ಶುಭ ಫಲ.

ವೃಷಭ: ಗೆಲ್ಲಲು ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳಿ.
ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದು ಬೇಡ.
ಹಳೆಯ ಸಾಲಗಳು ವಾಪಸ್ ಆಗಲಿವೆ.

ಮಿಥುನ: ತಂದೆ-ತಾಯಿಗೆ ನೀವೇ ಧೈರ್ಯ ಹೇಳಿ
ಅವರಲ್ಲಿ ಚೈತನ್ಯ ತುಂಬುವ ಕೆಲಸ
ಮಾಡಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ.

ಕಟಕ : ಹೆಚ್ಚು ಮಾತಿನಿಂದ ಏನೂ ಆಗುವುದಿಲ್ಲ.
ಅದಕ್ಕೆ ಬದಲಾಗಿ ಶ್ರಮವಹಿಸಿ ದುಡಿಯಲು
ಆರಂಭಿಸಿ. ಆತ್ಮವಿಶ್ವಾಸವಿದ್ದರೆ ಗೆಲುವು ಖಚಿತ.

ಸಿಂಹ: ಒಳ್ಳೆಯದು ಅನ್ನಿಸಿದ್ದನ್ನು ಕಾಲಹರಣ
ಮಾಡದೇ ಮಾಡಿ ಮುಗಿಸಿ. ಐದು ಬೆರಳುಗಳು
ಸಮ ಇಲ್ಲ. ಹಾಗೆಯೇ ವ್ಯಕ್ತಿಗಳೂ ಕೂ

ಕನ್ಯಾ: ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.
ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು
ಬೇಡ. ಸೂಕ್ತ ನಿರ್ಧಾರದೊಂದಿಗೆ ಸಾಗುತ್ತಿರಿ.

 ತುಲಾ: ಭವಿಷ್ಯದ ಬಗ್ಗೆ ಯೋಚನೆ ಇರಲಿ. ಆದರೆ
ಅದನ್ನೇ ತಲೆಯಲ್ಲಿ ಇಟ್ಟುಕೊಂಡು
 ಕೊರಗುವುದು ಬೇಡ. ಆದಾಯದಲ್ಲಿ ಹೆಚ್ಚಳ.

ವೃಶ್ಚಿಕ: ಅಪ್ರಿಯವಾದ ಸಂಗತಿಗಳ ಬಗ್ಗೆ ಹೆಚ್ಚು ಚಿಂತೆ
ಮಾಡುತ್ತಾ ಕೂರುವುದು ಬೇಡ. ಅಗತ್ಯಕ್ಕಿಂತ
ಹೆಚ್ಚು ಮಾತು, ಊಟ ಕೂಡದು. ಶುಭ ಫಲ.

ಧನಸ್ಸು:ಮತ್ತೊಬ್ಬರ ಕಷ್ಟಕ್ಕೆ ನೀವು ನೆರವಾಗಿ ನಿಲ್ಲಲಿ
ದ್ದೀರಿ. ನಿಮ್ಮಲ್ಲಿರುವ ನೋವಿಗೆ ಮತ್ತೊಬ್ಬರು
ನೆರವಾಗಲಿದ್ದಾರೆ. ಕಷ್ಟಪಟ್ಟರೆ ಫಲ ಇದೆ. 

ಮಕರ : ಗುಣಾತ್ಮಕ ಚಿಂತನೆ ಮತ್ತು ಕಾರ್ಯಗಳಿಗೆ
ಹೆಚ್ಚು ಒತ್ತು ನೀಡಲಿದ್ದೀರಿ. ನಿಮ್ಮ ವ್ಯಕ್ತಿತ್ವ
ವನ್ನು ಬಲಿ ಕೊಟ್ಟುಕೊಳ್ಳದಿರಿ. ತಾಳ್ಮೆ ಇರಲಿ.

 ಕುಂಭ : ಹೊಸತನಕ್ಕೆ ಹೊಂದಿಕೊಳ್ಳಬೇಕಾದ
ಅನಿವಾರ್ಯತೆ ಬಂದೊದಗಲಿದೆ. ಎಲ್ಲರೂ
ನಿಮ್ಮ ಸ್ನೇಹಿತರು ಎಂದುಕೊಳ್ಳುವುದು ಬೇಡ.

ಮೀನ:  ಜೊತೆಗಿದ್ದವರೇ ಇಂದು ನಿಮ್ಮ ಬೆನ್ನಿಗೆ ಚೂರಿ
ಹಾಕುವ ಕಾರ್ಯ ಮಾಡಲಿದ್ದಾರೆ.
ಮೀನ ಎಚ್ಚರಿಕೆಯಿಂದ ಇದ್ದರೆ ಅಪಾಯ ಬರದು.

PREV
click me!

Recommended Stories

ಮೂಕಾಂಬಿಕೆ ದರ್ಶನ ಬಳಿಕ ಪಕ್ಷ ಸ್ಥಾಪಿಸಿ ಸಿಎಂ ಆಗಿದ್ದ ಎಂಜಿಆರ್, AIADMK ಚಿಹ್ನೆಗೂ ಇದೆ ಕೊಲ್ಲೂರು ನಂಟು
ಶಿವಲಿಂಗದ ಜೊತೆ ಸರ್ಪ… ಈ ಕನಸು ಮತ್ತೆ ಮತ್ತೆ ಬಿದ್ದರೆ ಅದಕ್ಕೇನು ಅರ್ಥ?