ದಿನ ಭವಿಷ್ಯ: ಆರ್ಥಿಕ ಸಮಸ್ಯೆಗೆ ಪರಿಹಾರ, ಸೂಕ್ತ ಸಮಯಕ್ಕೆ ಕಾಯದೆ ಕೆಲಸವಾರಂಭಿಸಿ

Published : Jul 06, 2019, 07:14 AM ISTUpdated : Jul 06, 2019, 08:44 AM IST
ದಿನ ಭವಿಷ್ಯ: ಆರ್ಥಿಕ ಸಮಸ್ಯೆಗೆ ಪರಿಹಾರ, ಸೂಕ್ತ ಸಮಯಕ್ಕೆ ಕಾಯದೆ ಕೆಲಸವಾರಂಭಿಸಿ

ಸಾರಾಂಶ

ಇಂದು ನಿಮ್ಮ ಭವಿಷ್ಯ ಹೇಗಿದೆ? ಯಾವೆಲ್ಲಾ ಫಲ ಇದೆ? ಇಲ್ಲಿದೆ ನೋಡಿ ಇಂದಿನ ಭವಿಷ್ಯ

ಮೇಷ: ಮೊಸರಿನಲ್ಲಿಯೂ ಕಲ್ಲನ್ನು ಹುಡುಕುವ ಮಂದಿಯ ವಿಚಾರದಲ್ಲಿ ಮೌನ ವಹಿಸುವುದು ಒಳಿತು. ಅಂದುಕೊಂಡಿದ್ದು ನೆರವೇರಲಿದೆ.

ವೃಷಭ: ಹಿಂದೆ ಮಾಡಿದ್ದ ಸಾಲಗಳನ್ನು ಇಂದು ತೀರಿಸಲಿದ್ದೀರಿ. ಕೋಪ ಮಾಡಿಕೊಂಡರೆ ಯಾವ ಕಾರ್ಯವೂ ಸಿದ್ಧಿಯಾಗದು

ಮಿಥುನ: ಅಪರಿಚಿತರು ನಿಮಗೆ ಇಂದು ನೆರವು ನೀಡಲಿದ್ದಾರೆ. ಕಷ್ಟ ಎಂದುಕೊಂಡು ಕೈ ಕಟ್ಟಿ ಕೂರುವುದು ತರವಲ್ಲ. ಧೈರ್ಯವಿರಲಿ.

ಕಟಕ: ಹಳೆಯ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲೊಂದು ಹೊಸ ಉತ್ಸಾಹ ಉಂಟಾಗಲಿದೆ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ

ಸಿಂಹ: ಅಗತ್ಯ ಹಣ ಹೊಂದಿಸಿಕೊಳ್ಳಲು ಇಡೀ ದಿನ ಕಳೆಯಲಿದ್ದೀರಿ. ಎಲ್ಲರನ್ನೂ ಗೌರವದಿಂದ ಕಾಣುವುದು ಒಳ್ಳೆಯದ್ದು. ಶುಭ ಫಲ

ಕನ್ಯಾ: ಆತ್ಮವಂಚನೆ ಮಾಡಿಕೊಂಡು ಬದುಕುವವರ ನಡುವಿನಿಂದ ಹೊರ ಬರುವಿರಿ. ಸೂಕ್ತ ಸಮಯಕ್ಕಾಗಿ ಕಾಯದೇ ಕೆಲಸ ಆರಂಭಿಸಿ

ತುಲಾ: ಸಮಸ್ಯೆ ಸಣ್ಣದಿದ್ದಾಗಲೇ ಬಗೆಹರಿಸಿಕೊಳ್ಳಲು ಮುಂದಾಗಿ, ಇಲ್ಲವಾದರೆ ಮುಂದೆ ಕಷ್ಟ ಎದುರಿಸಬೇಕಾದೀತು. ನೆಮ್ಮದಿ ಹೆಚ್ಚಲಿದೆ

ವೃಶ್ಚಿಕ: ಕಾರ್ಯ ಸಾಧುವಲ್ಲದ ಕೆಲಸಕ್ಕೆ ಕೈ ಹಾಕದಿರಿ. ಕಂಡ ಕನಸು ನನಸಾಗಲಿದೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಎಚ್ಚರ ಇರಲಿ. ನಂಬಿ ಕೆಟ್ಟವರಿಲ್ಲ.

ಧನುಸ್ಸು: ಶುಭ ಕಾರ್ಯಗಳು ಮುಂದೂಡಲ್ಪಡುತ್ತವೆ. ಮನೆ ಬದಲಾಯಿಸುವ ಯೋಚನೆಯೂ ಜಾರಿಗೆ ಬರುವುದಿಲ್ಲ. ತಂದೆಯ ಮಾತು ಕೇಳಿ.

ಮಕರ: ಎಲ್ಲಾ ಕೆಲಸವನ್ನೂ ಶುರು ಮಾಡಿ ಅರ್ಧಕ್ಕೆ ನಿಲ್ಲಿಸುವುದು ಸರಿಯಲ್ಲ. ಹಿಡಿದ ಕೆಲಸವನ್ನು ಪೂರ್ಣಗೊಳಿಸಿ ಮುಂದಿನ ಕಾರ್ಯ ಕೈಗೊಳ್ಳಿ.

ಕುಂಭ:ಕಷ್ಟಪಟ್ಟು ಮಾಡಿದ ಕಾರ್ಯ ನೀರಿನಲ್ಲಿ ಹೋಮ ಮಾಡಿದಂತೆ ಆಗುವುದು. ಆರೋಪಗಳಿಂದ ಮುಕ್ತರಾಗುವಿರಿ.

ಮೀನ: ದೇವಸ್ಥಾನಗಳ ಭೇಟಿ ಸಾಧ್ಯತೆ. ಬಂಧ ಗಳೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಮನೆಯಲ್ಲಿ ಸಂತಸ ಹೆಚ್ಚಾಗಲಿದೆ. ಶುಭ ಫಲ

PREV
click me!

Recommended Stories

ನೀವು ಕೂಡ ಬಿಸಿ ಬಿಸಿ ಕಾವಲಿ ಮೇಲೆ ತಣ್ಣೀರು ಹಾಕ್ತೀರಾ? ಎಲ್ಲಾ ಬರ್ಬಾದ್ ಆಗುತ್ತೆ ಹುಷಾರ್!
ಬ್ರಹ್ಮಮುಹೂರ್ತದಲ್ಲಿ ಎದ್ದು ಈ ಕೆಲಸ ಮಾಡಿ… ನಿಮ್ಮ ಜೀವನ ಬದಲಾಗುತ್ತೆ!