ಇಂದು ಯಾವ ರಾಶಿಗೆ ಯಾವ ಫಲ. ಯಾರಿಗೆ ಶುಭ ತಿಳಿಯಿರಿ ಇಂದಿನ ಭವಿಷ್ಯದ ಮೂಲಕ
ಈ ರಾಶಿಗೆ ಎಚ್ಚರಿಕೆಯಿಂದ ಮುನ್ನಡೆದಲ್ಲಿ ಶುಭ ಫಲ
ಮೇಷ : ಸಾಕಷ್ಟು ಸಮಸ್ಯೆಗಳು ಇದ್ದರೂ ಸಂತೋಷದಿಂದಲೇ ಕಾಲ ಕಳೆಯಲಿದ್ದೀರಿ ಶತ್ರುಗಳು ಇಂದು ನಿಮ್ಮ ಸಹಾಯಕ್ಕೆ ಬರಲಿದ್ದಾರೆ.
ವೃಷಭ : ಸುಳ್ಳು ಆಪಾದನೆಗೆ ಗುರಿಯಾಗಲಿದ್ದೀರಿ. ಅಂದುಕೊಂಡಿದ್ದೆಲ್ಲವೂ ಆಗಲೇಬೇಕು ಎನ್ನುವ ಹಠ ಬೇಡ, ಶ್ರಮ ಪಟ್ಟರೆ ಫಲ
ಮಿಥು : ಬಹುಸಂಖ್ಯಾತರ ನಡುವಲ್ಲಿ ನಿಮ್ಮ ಮಾತಿಗೆ ಹೆಚ್ಚು ಬೆಲೆ ಸಿಗದು. ವಾದ ಮಾಡಿ ಪ್ರಯೋಜನವಿಲ್ಲ
ಕಟಕ: ಆದರ್ಶಕ್ಕೆ ಬಿದ್ದು ಹಣ ವ್ಯರ್ಥ ಮಾಡಿಕೊಳ್ಳದರಿ. ತಾಯಿಯ ಮಾತಿಗೆ ಹೆಚ್ಚು ಬೆಲೆ ನೀಡುವುದು ಒಳಿತು. ತಾಳ್ಮೆ ಮುಖ್ಯ
ಸಿಂಹ : ನಿಂದಕರ ಮಾತಿಗೆ ಮತ್ತೆ ಮತ್ತೆ ಸೊಪ್ಪು ಹಾಕುವುದು ಬೇಡ. ಸಾಧ್ಯವಾದಗ ವಿಚಾರಗಳ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ
ಕನ್ಯಾ : ಇಂದಿನ ಕಾರ್ಯಗಳನ್ನು ಇಂದೇ ಮಾಡಿ ಮುಇಸಿ, ನಾಳೆಗೆ ಎಂದು ಬಾಕಿ ಉಳಿಸಿಕೊಳ್ಳುವುದು ಬೇಡ. ಲಾಭದಲ್ಲಿ ಇಳಿಕೆ
ತುಲಾ : ಕೆಟ್ಟದ್ದು ಬೇಗನೇ ಹಬ್ಬುತ್ತದೆ. ನೀವು ಅದರ ಬಗ್ಗೆ ಹೆಚ್ಚು ಲಕ್ಷ್ಯ ನೀಡುವುದು ಬೇಡ. ನೀವು ಸಾಗುತ್ತಿರುವ ದಾರಿ ಸರಿಯಾಗಿದೆ.
ವೃಶ್ಚಿಕ : ಸಕಾರಾತ್ಮಕ ಚಿಂತನೆಗಳು ನಿಮ್ಮ ಶಕ್ತಿಯನ್ನು ಇಮ್ಮಡಿಹೊಳಿಸುತ್ತದೆ. ತಂದೆಯ ಆರ್ಥಿಕ ಸಹಕಾರದುಂದ ಮುಂದೆ ಸಾಗಲಿದ್ದೀರಿ.
ಧನಸ್ಸು : ಇತರರು ನಿಮ್ಮಂತೆಯೇ ಎಂದು ತಿಳಿದುಕೊಳ್ಳಿ. ಯಾರ ಮೇಲೆಯೂ ವಿಚಾನಕಾರಣ ಕೋಪ ಸರಿಯಲ್ಲ.
ಮಕರ : ಮತ್ತೊಬ್ಬರನ್ನು ಅಂಧಾನುಕರಣೆ ಮಾಡುವುದು ಬೇಡ, ಯಾರೊಂದಿಗೂ ಜಗಳ ಮಾಡಿಕೊಳ್ಳದಿರಿ. ಕೆಲಸದ ಒತ್ತಡ ಹೆಚ್ಚಲಿದೆ.
ಕುಂಭ : ಎಲ್ಲರೊಂದಿಗೂ ಆತ್ಮೀಯವಾಗಿ ನಡೆದುಕೊಳ್ಳಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೀರಿ. ಸೌಲಭ್ಯ ಹೆಚ್ಚಾಗಲಿದೆ.
ಮೀನ : ಅಭಿಮಾನಕ್ಕೆ ಬಿದ್ದು ಯಡವಟ್ಟು ಮಾಡಿಕೊಳ್ಳಲಿದ್ದೀರಿ. ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕಡೆ ಇರುವುದು ಬೇಡ