ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು

Suvarna News   | Asianet News
Published : Jan 13, 2020, 07:15 AM IST
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು

ಸಾರಾಂಶ

13 ಜನೆವರಿ 2020 ರ ಭವಿಷ್ಯ| ಇಂದು ನಿಮ್ಮ ಭವಿಷ್ಯ ಹೇಗಿದೆ? ಯಾರಿಗೆ ಶುಭ? ಇಲ್ಲಿದೆ ವಿವರ

ಮೇಷ: ಆಗುವ ಕೆಲಸ ಆಗುತ್ತದೆಂದು ಸುಮ್ಮನೆ ಇದ್ದರೆ ಯಾವುದು ಆಗದು. ಅದರಲ್ಲಿ ನಿಮ್ಮ ಶ್ರಮ ಇರಬೇಕು. ಆಗ ಮಾತ್ರ ಜಯ ಸಿಗುತ್ತದೆ.

ವೃಷಭ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ. ದಿನದಂತ್ಯದಲ್ಲಿ ಧನ ಲಾಭ. ಮಕ್ಕಳಿಂದ ಮನೆಯಲ್ಲಿ ನೆಮ್ಮದಿ. ಮಕ್ಕಳಿಗೆ ಶುಭ ದಿನ.

ಮಿಥುನ: ಇಷ್ಟು ದಿನ ನೀವು ಪ್ರಯತ್ನಿಸುತ್ತಿದ್ದ ವಿಷಯದಲ್ಲಿ ಸಫಲರಾಗುವಿರಿ. ಮನೆಯವರಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಶುಭದಿನ.

ಕಟಕ: ಬೆಂಕಿ ಬಗ್ಗೆ ಎಚ್ಚರ ಇರಲಿ. ಮನಸ್ಸಲ್ಲಿ ಭಯ, ಆತಂಕವಿದ್ದಲ್ಲಿ ಅದನ್ನು ಧ್ಯಾನದಿಂದ ಮಾತ್ರ ದೂರಾಗಿಸಲು ಸಾಧ್ಯ. ಮಕ್ಕಳಿಗೆ ಶುಭದಿನ

ಸಿಂಹ: ಇಂದು ತುಂಬಾ ಮೌನವಾಗಿರುವಿರಿ. ಆದರೆ ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಯಶಸ್ಸು ಸಿಗಲಿದೆ. ಸಂತೋಷ ಹೆಚ್ಚಲಿದೆ.

ಒಂದು ರಾಶಿಗೆ ಲಾಭದೊಂದಿಗೆ ಒಳ್ಳೆಯ ವಿಚಾರ ಕಾದಿದೆ : ವಾರ ಭವಿಷ್ಯ

ಕನ್ಯಾ: ಮನುಷ್ಯನೂ ವಿಷ ಜಂತುವಿದ್ದಂತೆ. ಹಾಗಾಗಿ ತಕ್ಷಣಕ್ಕೆ ಯಾರನ್ನೂ ನಂಬದಿರುವುದು ಒಳಿತು. ಮನೆಯಲ್ಲಿ ನೆಮ್ಮದಿ ಇರಲಿದೆ. ಶುಭಫಲ.

ತುಲಾ: ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿ ಕೊಂಡು ಮುಂದೆ ಸಾಗಿ. ಆತುರ ಇರಲಿ. ಅತಿ ಯಾದ ಆತುರ ಬೇಡ. ಜವಾಬ್ದಾರಿ ಇರಲಿದೆ.

ವೃಶ್ಚಿಕ: ದೂರದ ಪ್ರಯಾಣದಿಂದ ಆಯಾಸವಾಗಲಿದೆ. ಮಹತ್ವದ ವಿಚಾರವಗಳನ್ನು ಮನೆಯವರ ಜೊತೆ ಸೇರಿ ನಿರ್ಧರಿಸಿದರೆ ಒಳಿತು.

ಧನಸ್ಸು: ಆರೋಗ್ಯದ ಕಡೆ ಗಮನವಿರಲಿ. ದೇಹಕ್ಕೆ ಒಗ್ಗುವ ಆಹಾರ ಪದಾರ್ಥಗಳನ್ನು ಸೇವಿಸಿ. ದಿನದಂತ್ಯದಲ್ಲಿ ಸಿಹಿ ಸುದ್ದಿ ಕೇಳಲಿದ್ದೀರಿ.

ಮಕರ: ಮಕ್ಕಳಿಗೆ ಓದಿನಲ್ಲಿ ಸ್ವಲ್ಪ ಅಡೆತಡೆ ಬಂದರೂ ದಿನದಂತ್ಯದಲ್ಲಿ ನಿರಾಳರಾಗಿ ಪೂರ್ಣಗೊಳಿಸುವಿರಿ. ಶ್ರಮದ ದಿನ ನಿಮ್ಮದಾಗುತ್ತದೆ.

ಕುಂಭ: ಹೊಸ ಸ್ನೇಹಿತರು ಸಿಗಲಿದ್ದು, ಹಳೆಯ ಸ್ನೇಹಿತರ ಭೇಟಿ ಸಾಧ್ಯತೆ. ಪುರುಷರಿಗೆ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು.

ಮೀನ: ಕೆಲಸ ಕಾರ್ಯಗಳಲ್ಲಿ ಗಡಿಬಿಡಿ ಬೇಡ. ಎಲ್ಲಾ ಕಾರ್ಯ ಸುಗಮವಾಗಿ ಆಗಲಿದೆ. ತಲೆಕೆಡಿಸಿ ಕೊಂಡರೆ ಆರೋಗ್ಯದಲ್ಲಿ ಏರುಪೇರಾಗಲಿದೆ.

PREV
click me!

Recommended Stories

ನೀವು ಕೂಡ ಬಿಸಿ ಬಿಸಿ ಕಾವಲಿ ಮೇಲೆ ತಣ್ಣೀರು ಹಾಕ್ತೀರಾ? ಎಲ್ಲಾ ಬರ್ಬಾದ್ ಆಗುತ್ತೆ ಹುಷಾರ್!
ಬ್ರಹ್ಮಮುಹೂರ್ತದಲ್ಲಿ ಎದ್ದು ಈ ಕೆಲಸ ಮಾಡಿ… ನಿಮ್ಮ ಜೀವನ ಬದಲಾಗುತ್ತೆ!