ಅಡುಗೆ ಮನೆಯಲ್ಲಿ ಬಳಸುವ ಜೀರಿಗೆಗೆ ವಾಸ್ತು ಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸಿ, ಸುಖ-ಸಮೃದ್ಧಿ ಹೆಚ್ಚಿಸಲು ಜೀರಿಗೆಯ ಈ ಪರಿಹಾರಗಳು ಸಹಕಾರಿ ಎಂದು ನಂಬಲಾಗಿದೆ.
vaastu Sep 02 2026
Author: Ashwini HR Image Credits:Getty
Kannada
ಲಕ್ಷ್ಮಿ ಕಟಾಕ್ಷಕ್ಕಾಗಿ
ಶುಕ್ರವಾರದಂದು ಮನೆಯ ಮುಖ್ಯ ದ್ವಾರದ ಬಳಿ ಸ್ವಲ್ಪ ಜೀರಿಗೆಯನ್ನು ಸಿಂಪಡಿಸಿ ಅಥವಾ ಸಣ್ಣ ಕೆಂಪು ಬಟ್ಟೆಯಲ್ಲಿ ಜೀರಿಗೆ ಕಟ್ಟಿ ಬಾಗಿಲಿಗೆ ನೇತುಹಾಕಿ. ಇದರಿಂದ ಮನೆಯೊಳಗೆ ಧನಲಕ್ಷ್ಮಿಯ ಪ್ರವೇಶವಾಗುತ್ತದೆ ಎಂಬ ನಂಬಿಕೆಯಿದೆ.
Image credits: Our own
Kannada
ಸಾಲದ ಬಾಧೆಯಿಂದ ಮುಕ್ತಿ
ಸಾಲದ ಸುಳಿಯಿಂದ ಹೊರಬರಲು ಶನಿವಾರ ಸಂಜೆ ಸ್ವಲ್ಪ ಹಸಿ ಜೀರಿಗೆಯನ್ನು ತೆಗೆದುಕೊಂಡು ಯಾರಿಗೂ ತಿಳಿಯದಂತೆ ಮಣ್ಣಿನಲ್ಲಿ ಹೂತುಹಾಕಿ ಶನಿ ದೇವನನ್ನು ಪ್ರಾರ್ಥಿಸಿ. ಇದು ಸಾಲದ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Image credits: Our own
Kannada
ದೃಷ್ಟಿ ದೋಷ ನಿವಾರಣೆಗೆ
ನಿಮ್ಮ ಮೇಲಿರುವ ನಕಾರಾತ್ಮಕ ಶಕ್ತಿ ಅಥವಾ ದೃಷ್ಟಿ ದೋಷ ಹೋಗಲಾಡಿಸಲು, ಒಂದು ಹಿಡಿ ಜೀರಿಗೆಯನ್ನು ತೆಗೆದುಕೊಂಡು ತಲೆಯ ಮೇಲೆ ಏಳು ಬಾರಿ ಸುತ್ತಿ ಹರಿಯುವ ನೀರಿನಲ್ಲಿ ಎಸೆಯಿರಿ. ಇದು ಕೆಟ್ಟ ದೃಷ್ಟಿಯನ್ನು ದೂರ ಮಾಡುತ್ತದೆ.
Image credits: Our own
Kannada
ಸಂಪತ್ತು ವೃದ್ಧಿಯಾಗಲು
ಅನವಶ್ಯಕ ಖರ್ಚುಗಳನ್ನು ತಡೆದು ಹಣ ಉಳಿತಾಯವಾಗಲು ಸ್ವಲ್ಪ ಜೀರಿಗೆಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರ್ಸ್ನಲ್ಲಿ ಅಥವಾ ಹಣ ಇಡುವ ಬೀರು ಹತ್ತಿರ ಇಡಿ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
Image credits: X
Kannada
ದಾನದ ಮಹತ್ವ
ಗುರುವಾರ ಅಥವಾ ಶುಕ್ರವಾರದಂದು ಜೀರಿಗೆಯನ್ನು ದಾನ ಮಾಡುವುದು ಬಹಳ ಶುಭ. ಇದು ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ವಾಸ್ತು ತಜ್ಞರು ತಿಳಿಸುತ್ತಾರೆ.
Image credits: Getty
Kannada
ಗಮನಿಸಿ
ಈ ಮೇಲೆ ತಿಳಿಸಲಾದ ಮಾಹಿತಿಯು ಕೇವಲ ಸಾಂಪ್ರದಾಯಿಕ ನಂಬಿಕೆಗಳು ಮತ್ತು ವಾಸ್ತು ಶಾಸ್ತ್ರದ ಆಧರಿತವಾಗಿದೆ. ಇವುಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.