ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ತಮ್ಮ ಹೊಸ ಪ್ರವಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
tv-talk Jun 23 2026
Author: Pavna Das Image Credits:Instagram
Kannada
ಪ್ರಕೃತಿ ಮಡಿಲಲ್ಲಿ ವೈಷ್ಣವಿ
ಪ್ರಕೃತಿಯ ಮಡಿಲಲ್ಲಿ ಪತಿ ಜೊತೆ ಸುತ್ತಾಡಿಕೊಂಡು, ಪ್ರಕೃತಿ ಸೊಬಗನ್ನು ಆಸ್ವಾದಿಸುತ್ತಿರುವ ವೈಷ್ಣವಿ ಅವರ ಈ ಫೋಟೊಗಳು ಎಲ್ಲರ ಗಮನ ಸೆಳೆಯುತ್ತಿವೆ.
Image credits: Instagram
Kannada
ಮೇಘಾಲಯದಲ್ಲಿ ವೈಷ್ಣವಿ ಗೌಡ
ವೈಷ್ಣವಿ ಗೌಡ ತಮ್ಮ ಪತಿ ಜೊತೆ ಮಾನ್ಸೂನ್ ಆರಂಭದಲ್ಲಿ ಪ್ರಕೃತಿ ಸೌಂದರ್ಯದ ರಮಣೀಯರ ತಾಣವಾದ ಮೇಘಾಲಯಕ್ಕೆ ತೆರಳಿದ್ದು, ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
Image credits: Instagram
Kannada
ಪತಿ ಜೊತೆ ಟ್ರಾವೆಲ್ ಮೂಡಲ್ಲಿ ನಟಿ
ಹಸಿರು ಹೊಲಗಳು, ದೂರದಲ್ಲಿ ಕಾಣುವ ಬೆಟ್ಟಗಳು ಮತ್ತು ಅಸ್ತಮಿಸುತ್ತಿರುವ ಸೂರ್ಯನ ಕಂಗೊಳಿಸುವ ದೃಶ್ಯಗಳ ನಡುವೆ ಗಂಡನ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
Image credits: Instagram
Kannada
ವೈಷ್ಣವಿ ಗೌಡ ಪೋಸ್ಟ್ ವೈರಲ್
ಫೋಟೋಗಳ ಜೊತೆಗೆ ಅವರ ಕ್ಯಾಪ್ಶನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತದಂತಹ ಸುಂದರ ತಾಣ ಇರುವಾಗ? ಯಾಕೆ ಎಲ್ಲರೂ ವಿದೇಶಕ್ಕೆ ಹಾರೋದು ಎಂದಿದ್ದಾರೆ ನಟಿ.
Image credits: Instagram
Kannada
ಭಾರತವಿರುವಾಗ ವಿದೇಶ ಯಾಕೆ?
ನಮ್ಮ ಭಾರತವೇ ಎಲ್ಲವನ್ನೂ ಹೊಂದಿರುವಾಗ ಜನರು ಸಾವಿರಾರು ಮೈಲುಗಳಷ್ಟು ದೂರ ವಿದೇಶಗಳಿಗೆ ಪ್ರಯಾಣಿಸುವುದು ಏಕೆ ಎಂದು ನನಗೆ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ.
Image credits: Instagram
Kannada
ಭಾರತದಲ್ಲಿ ಎಲ್ಲವೂ ಇದೆ
ನಮ್ಮ ಭಾರತದಲ್ಲೇ ಹಿಮಾಚ್ಛಾದಿತ ಪರ್ವತಗಳಿವೆ, ಸ್ವಚ್ಛವಾದ ಸರೋವರಗಳಿವೆ, ದಟ್ಟ ಕಾಡುಗಳಿವೆ, ಚಿನ್ನದಂತೆ ಹೊಳೆಯುವ ಮರುಭೂಮಿಗಳಿವೆ, ಸುಂದರ ಕಡಲತೀರಗಳಿವೆ, ಪುರಾತನ ದೇವಾಲಯಗಳಿವೆ.
Image credits: Instagram
Kannada
ಮೈಲಿ ದೂರ ಹೋಗೋದು ಯಾಕೆ?
ವೈವಿಧ್ಯಮಯ ಸಂಸ್ಕೃತಿಗಳಿವೆ ಹಾಗೂ ರುಚಿಕರವಾದ ಆಹಾರಗಳಿವೆ. ಹಾಗಿದ್ದಾಗ ಸಾವಿರಾರು ಮೈಲಿ ದೂರದ ದೇಶಗಳಿಗೆ ಏಕೆ ಹೋಗಬೇಕು?" ಎಂದು ಪ್ರಶ್ನಿಸಿದ್ದಾರೆ.
Image credits: Instagram
Kannada
ಭಾರತವನ್ನು ಎಕ್ಸ್ ಪ್ಲೋರ್ ಮಾಡಿ
ನಾನು ಭಾರತವನ್ನು ಹೆಚ್ಚು ಎಕ್ಸ್’ಪ್ಲೋರ್ ಮಾಡಿದಷ್ಟು, ಸ್ವರ್ಗವು ಯಾವಾಗಲೂ ವಿದೇಶದಲ್ಲಿ ಇರುವುದಿಲ್ಲ, ಅದು ಇಲ್ಲಿಯೇ ಇದೆ ಎಂದು ನನಗೆ ಅರಿವಾಗುತ್ತದೆ ಎಂದು ನಟಿ ಹೇಳಿದ್ದಾರೆ.
Image credits: Instagram
Kannada
ಭಾರತವೇ ಸ್ವರ್ಗ
ಭಾರತದ ಬಗ್ಗೆ ವೈಷ್ಣವಿ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಅಭಿಮಾನಿಗಳು ಸಹಮತ ವ್ಯಕ್ತಪಡಿಸಿದ್ದು, ಭಾರತವೇ ಸ್ವರ್ಗ, ನಮ್ಮ ದೇಶದ ಸೌಂದರ್ಯವನ್ನು ಇನ್ನಷ್ಟು ಎಕ್ಸ್ ಪ್ಲೋರ್ ಮಾಡಬೇಕು ಎಂದಿದ್ದಾರೆ.