ಅಕ್ಕಿ, ಬೇಳೆಯಲ್ಲಿ ಸುಲಭವಾಗಿ ಕೀಟಗಳು ಬರುತ್ತವೆ. ಅವುಗಳನ್ನು ಸುಲಭವಾಗಿ ಹೇಗೆ ತೊಲಗಿಸುವುದು ಎಂದು ನೋಡೋಣ...
Kannada
ಲವಂಗ ಹಾಕಿ
ಲವಂಗದ ಘಾಟು ಕೀಟಗಳನ್ನು ದೂರವಿಡುತ್ತದೆ. ಲವಂಗದ ಘಾಟು ಅವುಗಳಿಗೆ ಸಹಿಸಲಾಗದು. ಅಕ್ಕಿ, ಬೇಳೆ ಡಬ್ಬಿಯಲ್ಲಿ ಒಂದೆರಡು ಲವಂಗ ಹಾಕಿಡಿ. ಕೀಟಗಳು ಬರೋಲ್ಲ, ಇರೋ ಕೀಟಗಳು ಜಾಗ ಖಾಲಿ ಮಾಡುತ್ತವೆ.
Kannada
ಬಿರಿಯಾನಿ ಎಲೆ
ಬಿರಿಯಾನಿ ಎಲೆಯ ವಾಸನೆ ಕೀಟಗಳಿಗೆ ಇಷ್ಟವಿಲ್ಲ. ಆದ್ದರಿಂದ ಅಕ್ಕಿ, ಬೇಳೆಯಲ್ಲಿ ಕೆಲವು ಬಿರಿಯಾನಿ ಎಲೆಗಳನ್ನು ಹಾಕಿ. ಇದರಿಂದ ಹುಳುಗಳನ್ನ ತೊಲಗಿಸಬಹುದು.
Kannada
ಒಣಮೆಣಸಿನಕಾಯಿ ಹಾಕಿ
ಒಣಮೆಣಸಿನಕಾಯಿ ಹಾಕಿದರೆ ಧಾನ್ಯ ಹೆಚ್ಚು ಕಾಲ ಉಳಿಯುತ್ತದೆ. ಮೆಣಸಿನಕಾಯಿ ಘಾಟು ಕೀಟಗಳಿಗೆ ಆಗಿರಬೋಲ್ಲ. ಅಕ್ಕಿ, ಬೇಳೆ ಚೀಲದಲ್ಲಿ ಅಥವಾ ಡಬ್ಬಿಗಳಲ್ಲಿ ಒಂದೆರಡು ಒಣ ಮೆಣಸಿನಕಾಯಿ ಹಾಕಿ.
Kannada
ಬೆಳ್ಳುಳ್ಳಿ ಎಸಳು ಹಾಕಿ
ಬೆಳ್ಳುಳ್ಳಿ ವಾಸನೆ ಕೀಟಗಳನ್ನು ದೂರವಿಡುತ್ತದೆ. ಧಾನ್ಯದ ಡಬ್ಬಗಳಲ್ಲಿ ಕೆಲವು ಎಸಳುಗಳನ್ನು ಹಾಕಿ.
Kannada
ಅರಿಶಿನ ಹಾಕಿ
ಅರಿಶಿನ ನೈಸರ್ಗಿಕ ಕ್ರಿಮಿನಾಶಕ. ಧಾನ್ಯವನ್ನು ಹೆಚ್ಚು ಕಾಲ ಸಂಗ್ರಹಿಸಲು ಸಹಾಯ ಮಾಡುತ್ತದೆ. ಅರಿಶಿನದ ತುಂಡುಗಳನ್ನು ಹಾಕಿ.