Kannada

ಮದುವೆಗೂ ಮುನ್ನ ಆ್ಯಸಿಡ್ ದಾಳಿ: ಪ್ರೇಮಿ ಕೃತ್ಯದಿಂದ ಕುಟುಂಬ ನಲುಗಿತು

ಉತ್ತರ ಪ್ರದೇಶದಲ್ಲಿ ಮೌನಲ್ಲಿ ಮದುವೆಗೂ ಮುನ್ನ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದಿದೆ. "ನೀನು ನನ್ನವಳಾಗದಿದ್ದರೆ..." ಎಂದು ಹೇಳಿ ಆರೋಪಿಯಿಂದ ದಾಳಿ.

Kannada

60% ಸುಟ್ಟು ಹೋದ ಯುವತಿ

  60% ಸುಟ್ಟು ಹೋದ ಸಂತ್ರಸ್ಥೆ ಸ್ಥಿತಿ ಗಂಭೀರ, ಇಡೀ ಗ್ರಾಮದಲ್ಲಿ ಸಂಚಲನ.

Kannada

ಸಂತೋಷದ ಸಮಾರಂಭದಲ್ಲಿ ದುಃಖ

25 ವರ್ಷದ ರೀಮಾ ಮದುವೆಯ ತಯಾರಿಯಲ್ಲಿದ್ದಳು, ಆದರೆ ಬ್ಯಾಂಕಿನಿಂದ ಹಿಂದಿರುಗುವಾಗ ಆಕೆಯ ಜೀವನದ ಅತ್ಯಂತ ದುರಂತ ಘಟನೆ ಕಾದಿತ್ತು.

Kannada

ದಾರಿಯಲ್ಲಿ ಎದುರಾದ ಕ್ರೌರ್ಯ

ಬ್ಯಾಂಕಿನಿಂದ 20 ಸಾವಿರ ಹಣ ತೆಗೆದುಕೊಂಡು ಹಿಂದಿರುಗುತ್ತಿದ್ದ ರೀಮಾಳನ್ನು ಬೈಕ್‌ನಲ್ಲಿದ್ದ ಇಬ್ಬರು ಯುವಕರು ತಡೆದರು ಮತ್ತು ಆಕೆಯ ಬಳಿ ಬೆಚ್ಚಿಬೀಳಿಸುವಂತಹ ಮಾತುಗಳನ್ನಾಡಿದರು.

Kannada

"ನಾನು ನಿನ್ನವನಾಗದಿದ್ದರೆ..."

"ನೀನು ನನ್ನವಳಾಗಲು ಸಾಧ್ಯವಿಲ್ಲದಿದ್ದರೆ, ಬೇರೆಯವರದ್ದೂ ಆಗಬಾರದು," ಎಂದು  ಹೇಳಿ ಯುವತಿಯ  ಮುಖದ ಮೇಲೆ ಆ್ಯಸಿಡ್ ಎರಚಿದ್ದಾನೆ.

Kannada

ಆ್ಯಸಿಡ್ ರೀಮಾಳ ಕನಸನ್ನು ನುಂಗಿಹಾಕಿತು

ಆ್ಯಸಿಡ್ ರೀಮಾಳ ಮುಖ, ಭುಜ, ಕುತ್ತಿಗೆ ಮತ್ತು ದೇಹದ ಮೇಲ್ಭಾಗದ ಮೇಲೆ ಬಿದ್ದಿತು, ಅವಳು 60% ಸುಟ್ಟುಹೋಗಿದ್ದಳು. ಆಕೆಯ ಕಿರುಚಾಟ, ನಲುಗಾಟಕ್ಕೆ ಇಡೀ ಗ್ರಾಮ ಬೆಚ್ಚಿಬಿದ್ದಿತು.

Kannada

ಜೀವನ್ಮರಣದ ಹೋರಾಟ ನಡೆಸುತ್ತಿರುವ ರೀಮಾ

ಗಂಭೀರ ಸ್ಥಿತಿಯಲ್ಲಿರುವ ರೀಮಾಳನ್ನು ಆಜಂಗಢದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಆಕೆಯ ಚಿಕಿತ್ಸೆ ನಡೆಯುತ್ತಿದೆ.

Kannada

ಮಾಜಿ ಪ್ರೇಮಿಯಿಂದ ಕ್ರೌರ್ಯ

ದಾಳಿಕೋರ ರಾಮ್ ಜನಮ್ ಸಿಂಗ್ ಪಟೇಲ್ ರೀಮಾಳ  ಮಾಜಿ ಗೆಳೆಯ. ಆಕೆಯ ಮದುವೆ ನಿಶ್ಚಯವಾಗಿದ್ದಕ್ಕೆ ಆತ ಕೋಪಗೊಂಡಿದ್ದ ಮತ್ತು ಸೇಡು ತೀರಿಸಿಕೊಳ್ಳಲು ಬಯಸಿದ್ದ.

Kannada

ಕ್ಷಣಾರ್ಧದಲ್ಲಿ ಸಂತೋಷ ಚೂರುಚೂರಾಯಿತು

ರೀಮಾಳ ತಾಯಿಗೆ ಪ್ರಜ್ಞೆ ತಪ್ಪಿದೆ, ತಂದೆ ಈಗಾಗಲೇ ತೀರಿಕೊಂಡಿದ್ದಾರೆ. ಈಗ ಆಕೆಯ ಮದುವೆಯ ಎಲ್ಲಾ ಕನಸುಗಳು  ಕಮರಿ ಹೋಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ದೊಡ್ಡ ಹುದ್ದೆ, ಲಕ್ಷ ರೂ. ಸಂಬಳ.. ಈ ಲಿಂಕ್ ಕ್ಲಿಕ್ ಮಾಡಿದ್ರೆ ಬದುಕು ಬೀದಿಗೆ!

ಯಾರೋ ಪರಿಚಿತರದ್ದು ಅನಿಸುತ್ತೆ; ಅಂತಾರಾಷ್ಟ್ರೀಯ ವಂಚನೆ ಕರೆ ಬಗ್ಗೆ ಎಚ್ಚರ!

ಉಗಾಂಡದಲ್ಲಿ ಮಗಳ ಬಂಧನ, ಅಸಾಹಾಯಕರಾದ ಭಾರತೀಯ ಬಿಲಿಯನೇರ್ ಉದ್ಯಮಿ!

ಪಾತಕ ಲೋಕವನ್ನು ಕಿರುಬೆರಳಲ್ಲಿ ನಡುಗಿಸಿದ ಹೆಣ್ಣಲ್ಲ ಹೆಮ್ಮಾರಿಗಳಿವರು!