ಉಗ್ರರ ಬದಲು ಅಮಾಯಕರ ಮೇಲೆ ವಾಯುದಾಳಿ ನಡೆಸಿತ್ತಾ ಅಮೆರಿಕ?

Published : Sep 12, 2021, 08:02 AM ISTUpdated : Sep 12, 2021, 08:28 AM IST
ಉಗ್ರರ ಬದಲು ಅಮಾಯಕರ ಮೇಲೆ ವಾಯುದಾಳಿ ನಡೆಸಿತ್ತಾ ಅಮೆರಿಕ?

ಸಾರಾಂಶ

* ಆ.29ರಂದು ನಡೆದಿದ್ದ ದಾಳಿಯಲ್ಲಿ 10 ನಾಗರಿಕರ ಸಾವು * ನ್ಯೂಯಾರ್ಕ್ ಟೈಮ್ಸ್‌ನಿಂದ ತನಿಖಾ ವರದಿ ಪ್ರಕಟ * ಐಸಿಸ್‌ ಉಗ್ರರ ಬದಲಿಗೆ ಪರಿಹಾರ ಕಾರ‍್ಯಕರ್ತನ ಮೇಲೆ ಅಮೆರಿಕ ದಾಳಿ?

ವಾಷಿಂಗ್ಟನ್‌(ಸೆ.12): ಆ.29ರಂದು ಐಸಿಸ್‌ ಉಗ್ರರ ವಾಹನದ ಮೇಲೆ ದಾಳಿ ನಡೆಸಿ ಸಂಭವನೀಯ ಆತ್ಮಾಹುತಿ ದಾಳಿ ತಡೆದಿದ್ದಾಗಿ ಹೇಳಿದ್ದ ಅಮೆರಿಕ, ತನ್ನ ಗುರಿಯನ್ನು ತಪ್ಪಿತ್ತು. ಅಮೆರಿಕದ ನಡೆಸಿದ ರೀಪರ್‌ ಡ್ರೋನ್‌ ದಾಳಿ, ವಾಸ್ತವಾಗಿ ಉಗ್ರರ ಬದಲಾಗಿ ಪರಿಹಾರ ಕಾರ್ಯಕರ್ತನ ವಾಹನದ ಮೇಲೆ ನಡೆದಿದ್ದು, ಘಟನೆಯಲ್ಲಿ 10 ನಾಗರಿಕರು ಸಾವನ್ನಪ್ಪಿದ್ದರು ಎಂದು ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್‌’ ವರದಿಯೊಂದನ್ನು ಪ್ರಕಟಿಸಿದೆ. ಘಟನಾ ಸ್ಥಳದ ವಿಡಿಯೋಗಳನ್ನು ವಿಶ್ಲೇಷಿಸಿ ಪತ್ರಿಕೆ ಈ ವರದಿ ಪ್ರಕಟಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆಂಟಗನ್‌, ದಾಳಿಯ ಪರಿಣಾಮಗಳನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ನಾಗರಿಕರ ಸಾವನ್ನು ತಪ್ಪಿಸಲು ನಮ್ಮಷ್ಟುಶ್ರಮ ವಹಿಸುವ ಸೇನೆ ಯಾವುದೂ ಇಲ್ಲ ಎಂದು ಹೇಳಿದೆ.

ವರದಿಯಲ್ಲೇನಿದೆ?:

ಆ.29ರಂದು ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ದಾಳಿಗೆ ಸಜ್ಜಾಗಿದ್ದ ವಾಹನವೊಂದರ ಮೇಲೆ ನಾವು ದಾಳಿ ನಡೆಸಿದ್ದೇವೆ. ಘಟನೆಯಲ್ಲಿ ಐಸಿಸ್‌ ಉಗ್ರರು ಸಾವನ್ನಪ್ಪಿದ್ದಾರೆ. ಡ್ರೋನ್‌ ದಾಳಿಯ ಬಳಿಕ ಘಟನಾ ಸ್ಥಳದಲ್ಲಿ ಭಾರೀ ಸ್ಫೋಟ ಕೇಳಿಬಂದಿದ್ದು, ಉಗ್ರರು ವಾಹನದಲ್ಲಿ ಸ್ಫೋಟಕ ಪದಾರ್ಥ ಇಟ್ಟಿದ್ದರು ಎಂಬುದಕ್ಕೆ ಸಾಕ್ಷಿ ಎಂದು ಅಮೆರಿಕ ಹೇಳಿಕೊಂಡಿತ್ತು.

ಆದರೆ ಐಸಿಸ್‌ ಎಝ್‌ಮರಾಯ್‌ ಅಹಮದಿ ಎಂಬ ಪರಿಹಾರ ಕಾರ್ಯಕರ್ತ ತನ್ನ ವಾಹನಕ್ಕೆ ನೀರಿನ ಬಾಟಲ್‌ಗಳನ್ನು ತುಂಬಿಸುತ್ತಿದ್ದುದ್ದನ್ನು ಮತ್ತು ತನ್ನ ಬಾಸ್‌ಗಾಗಿ ಲ್ಯಾಪ್‌ಟಾಪ್‌ ಕೊಂಡೊಯ್ಯುತ್ತಿದ್ದುದ್ದನ್ನೇ ಉಗ್ರರ ಕಾರ್ಯಾಚರಣೆ ಎಂದು ಭಾವಿಸಿದ ಅಮೆರಿಕ ಸೇನಾ ಪಡೆಗಳು ಆ ವಾಹನದ ಮೇಲೆ ದಾಳಿ ನಡೆಸಿದ್ದವು. ಈ ವೇಳೆ ಅಹಮದಿ ಸೇರಿದಂತೆ ಕಾರಿನಲ್ಲಿದ್ದ ಹಲವು ಮಕ್ಕಳು ಮತ್ತು ಹಿರಿಯರು ಸೇರಿ 18 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರಧಾನಿಗೆ ಜೋರ್ಡಾನ್‌ನಲ್ಲಿ ಭವ್ಯ ಸ್ವಾಗತ: ಐಎಂಇಸಿ ಕಾರಿಡಾರ್ ಕುರಿತು ಚರ್ಚೆ ನಿರೀಕ್ಷೆ
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ