ಭಾರ​ತದ ರೈತ ಹೋರಾಟದ ಬಗ್ಗೆ ಬ್ರಿಟನ್‌ ಸಂಸ​ತ್‌ ಚರ್ಚೆ

Published : Mar 04, 2021, 09:11 AM IST
ಭಾರ​ತದ ರೈತ ಹೋರಾಟದ ಬಗ್ಗೆ ಬ್ರಿಟನ್‌ ಸಂಸ​ತ್‌ ಚರ್ಚೆ

ಸಾರಾಂಶ

ಭಾರ​ತ​ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿ​ಭ​ಟ​ನಾ​ಕಾ​ರರ ಸುರ​ಕ್ಷ​ತೆ ವಿಚಾ​ರ| ಭಾರ​ತದ ರೈತ ಹೋರಾಟದ ಬಗ್ಗೆ ಬ್ರಿಟನ್‌ ಸಂಸ​ತ್‌ ಚರ್ಚೆ

ಲಂಡ​ನ್(ಮಾ.04)‌: ಭಾರ​ತ​ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿ​ಭ​ಟ​ನಾ​ಕಾ​ರರ ಸುರ​ಕ್ಷ​ತೆ ವಿಚಾ​ರ​ವು ಮುಂದಿನ ಸೋಮ​ವಾರ ಬ್ರಿಟನ್‌ ಸಂಸ​ತ್ತಿ​ನಲ್ಲಿ ಪ್ರತಿ​ಧ್ವ​ನಿ​ಸ​ಲಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವೇಳೆ ಈ ವಿಚಾ​ರ​ಗಳ ಕುರಿ​ತಾಗಿ ಸಂಸ​ತ್ತಿ​ನಲ್ಲಿ ಚರ್ಚೆ ನಡೆ​ಸ​ಬೇ​ಕೆಂದು ಒತ್ತಾ​ಯಿ​ಸಿ 10 ಸಾವಿ​ರಕ್ಕೂ ಹೆಚ್ಚು ಇ-ಅರ್ಜಿ​ಗಳು ಸಲ್ಲಿ​ಕೆ​ಯಾ​ಗಿತ್ತು. 10 ಸಾವಿ​ರಕ್ಕೂ ಹೆಚ್ಚು ಸಹಿ ಹೊಂದಿದ ಇ-ಅರ್ಜಿ​ಗಳ ಕುರಿ​ತಾಗಿ ಸಂಸ​ತ್ತಿ​ನಲ್ಲಿ ಚರ್ಚೆ ಕೈಗೆ​ತ್ತಿ​ಕೊ​ಳ್ಳ​ಬೇಕು. ಹೀಗಾಗಿ ಈ ಕುರಿ​ತಾಗಿ ಮುಂದಿನ ಸೋಮ​ವಾರ ಬ್ರಿಟನ್‌ ಸಂಸತ್ತು ಚರ್ಚೆ ನಡೆ​ಸ​ಲಿದೆ ಎಂದು ಬ್ರಿಟನ್‌ ಸಂಸ​ತ್ತಿನ ಅರ್ಜಿ​ಗಳ ಸಮಿತಿ ಬುಧ​ವಾರ ಖಚಿ​ತ​ಪ​ಡಿ​ಸಿದೆ.

ಲಂಡ​ನ್‌​ನ​ಲ್ಲಿ​ರುವ ಸಂಸ​ತ್ತಿನ ಆವ​ರಣದಲ್ಲಿನ ವೆಸ್ಟ್‌​ಮಿ​ನ್‌​ಸ್ಟರ್‌ ಹಾಲ್‌​ನಲ್ಲಿ 90 ನಿಮಿ​ಷ​ಗಳ ಈ ಚರ್ಚೆ​ಯಲ್ಲಿ ಸ್ಕಾಟಿಷ್‌ ನ್ಯಾಷ​ನಲ್‌ ಪಕ್ಷದ ಸದ​ಸ್ಯ​ರೊ​ಬ್ಬರು ಚರ್ಚೆಗೆ ಚಾಲನೆ ನೀಡ​ಲಿ​ದ್ದು, ಭಾರ​ತ​ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿ​ಭ​ಟ​ನಾ​ಕಾ​ರರ ಸುರ​ಕ್ಷ​ತೆಗೆ ಭಾರ​ತದ ಸರ್ಕಾ​ರದ ಮೇಲೆ ಬ್ರಿಟನ್‌ ಸರ್ಕಾರ ಒತ್ತಡ ಹೇರ​ಬೇಕು ಎಂದು ಒತ್ತಾ​ಯಿ​ಸ​ಲಿ​ದ್ದಾರೆ. ಆ ಬಳಿ​ಕ ಸಚಿ​ವ​ರೊ​ಬ್ಬರು ಸರ್ಕಾ​ರದ ಪರ​ವಾಗಿ ಉತ್ತ​ರಿ​ಸ​ಲಿ​ದ್ದಾರೆ.

ನೂತನ 3 ಕೃಷಿ ಕಾಯ್ದೆ​ಗಳ ಹಿಂಪ​ಡೆ​ತಕ್ಕೆ ಒತ್ತಾ​ಯಿಸಿ ದಿಲ್ಲಿ ಗಡಿ​ಗ​ಳಲ್ಲಿ ರೈತರು ನಡೆ​ಸು​ತ್ತಿ​ರುವ ರೈತರ ಪ್ರತಿ​ಭ​ಟ​ನೆ​ಯನ್ನು ಕೇಂದ್ರ ಸರ್ಕಾರ ಅಂತಾ​ರಾ​ಷ್ಟ್ರೀಯ ಸಂಚು ಎಂದು ಆರೋ​ಪಿ​ಸಿತ್ತು. ಇದರ ಬೆನ್ನಲ್ಲೇ, ಭಾರ​ತದ ವಿಚಾ​ರಕ್ಕೆ ಸಂಬಂಧಿಸಿ ಬ್ರಿಟ​ನ್‌​ ಸಂಸತ್ತು ಚರ್ಚೆಗೆ ಅಸ್ತು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!