ವಿಶ್ವದ ಅತಿ ದೊಡ್ಡ ಲಸಿಕೆ ಸಂಸ್ಥೆ ಸೀರಂ ಸಿಇಒಗೆ ಏಷ್ಯಾದ ವ್ಯಕ್ತಿ ಗೌರವ!

Published : Dec 06, 2020, 12:50 PM ISTUpdated : Dec 14, 2020, 07:23 AM IST
ವಿಶ್ವದ ಅತಿ ದೊಡ್ಡ ಲಸಿಕೆ ಸಂಸ್ಥೆ ಸೀರಂ ಸಿಇಒಗೆ ಏಷ್ಯಾದ ವ್ಯಕ್ತಿ ಗೌರವ!

ಸಾರಾಂಶ

ಕೋವಿಡ್‌ ವಿರುದ್ದದ ಹೋರಾಟದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿರುವ, ವಿಶ್ವದ ಅತೀ ದೊಡ್ಡ ಲಸಿಕೆ ಉತ್ಪಾದನಾ ಕೇಂದ್ರ ಪುಣೆಯ ಸೀರಂ ಸಂಸ್ಥೆ| ಸೀರಂ ಸಂಸ್ಥೆಯ ಸಿಇಒ ಅದರ್‌ ಪೂನಾವಾಲ (39) ಮತ್ತು ಇತರೆ 6 ಜನರನ್ನು ಸಿಂಗಾಪುರದ ‘ದಿ ಸ್ಟೆ್ರೖಟ್‌ ಟೈಮ್ಸ್‌’ ಪತ್ರಿಕೆ ‘ವರ್ಷದ ಏಷ್ಯಾ ವ್ಯಕ್ತಿಗಳು’ ಎಂದು ಗೌರವಿಸಿದೆ

ಸಿಂಗಾಪುರ(ಡಿ.06): ಕೋವಿಡ್‌ ವಿರುದ್ದದ ಹೋರಾಟದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿರುವ, ವಿಶ್ವದ ಅತೀ ದೊಡ್ಡ ಲಸಿಕೆ ಉತ್ಪಾದನಾ ಕೇಂದ್ರ ಪುಣೆಯ ಸೀರಂ ಸಂಸ್ಥೆಯ ಸಿಇಒ ಅದರ್‌ ಪೂನಾವಾಲ (39) ಮತ್ತು ಇತರೆ 6 ಜನರನ್ನು ಸಿಂಗಾಪುರದ ‘ದಿ ಸ್ಟೆ್ರೖಟ್‌ ಟೈಮ್ಸ್‌’ ಪತ್ರಿಕೆ ‘ವರ್ಷದ ಏಷ್ಯಾ ವ್ಯಕ್ತಿಗಳು’ ಎಂದು ಗೌರವಿಸಿದೆ.

ಇವರನ್ನು ‘ದಿ ವೈರಸ್‌ ಬಸ್ಟರ್ಸ್‌’ (ವೈರಸ್‌ ವಿನಾಶಕರು) ಎಂದು ಬಣ್ಣಿಸಿರುವ ಪತ್ರಿಕೆ, ಕೋವಿಡ್‌ ವಿರುದ್ಧದ ಹೋರಾಟಲ್ಲಿ ತಮ್ಮನ್ನು ಸಮರ್ಪಿಸಿದ ಪರಿಯನ್ನು ಕೊಂಡಾಂಡಿದೆ.

'ಗಂಭೀರ ಸ್ವರೂಪದ ಅಲರ್ಜಿ ಇರುವವರು ಫೈಝರ್‌ನಿಂದ ದೂರವಿರಿ!'

 ಸದ್ಯ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಬ್ರಿಟೀಷ್‌ -ಸ್ವೀಡಿಶ್‌ ಔಷಧಿ ಕಂಪನಿ ಆಸ್ಟ್ರಜೆನೆಕಾ ಜತೆ ಒಪ್ಪಂದ ಮಾಡಿಕೊಂಡು ಸಿರಂ ಸಂಸ್ಥೆ ‘ಕೊವಿಶೀಲ್ಡ್‌’ ಲಸಿಕೆಯನ್ನು ಉತ್ಪಾದಿಸುತ್ತಿದೆ.

ಲಸಿಕೆ ಸುರಕ್ಷೆ ಖಚಿತ ಆಗುವವರೆಗೂ ಜನ ಬಳಕೆಗಿಲ್ಲ: ಸೀರಂ

ಕೊರೋನಾ ನಿಗ್ರಹಕ್ಕೆ ಆಕ್ಸ್‌ಫರ್ಡ್‌ ವಿವಿ ಮತ್ತು ಅಸ್ಟ್ರಾಜೆನಿಕಾ ಸಿದ್ಧಪಡಿಸಿರುವ ‘ಕೋವಿಶೀಲ್ಡ್‌’ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದ್ದು, ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಭಾರತದಲ್ಲಿ ಈ ಲಸಿಕೆಯನ್ನು ಉತ್ಪಾದಿಸುತ್ತಿರುವ ಪುಣೆಯ ಸೀರಂ ಸಂಸ್ಥೆ ಪ್ರತಿಪಾದಿಸಿದೆ.

ಸೀರಂ, ಭಾರತ್‌ ಬಯೋಟೆಕ್‌ನಿಂದ ಮತ್ತಷ್ಟು ಮಾಹಿತಿ ಕೋರಿದ ಕೇಂದ್ರ!

ಇತ್ತೀಚೆಗಷ್ಟೇ ಈ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದರಿಂದ ತಾನು ನರ ಮತ್ತು ಮಾನಸಿಕ ರೋಗಕ್ಕೆ ತುತ್ತಾಗಿದ್ದು, ತನಗೆ 5 ಕೋಟಿ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಚೆನ್ನೈ ಮೂಲದ ವ್ಯಕ್ತಿಯೋರ್ವ ಇತರರ ಜೊತೆಗೂಡಿ ದಾವೆ ಹೂಡಿದ್ದ. ಇದರ ಬೆನ್ನಲ್ಲೇ, ಈ ಸಂಬಂಧ ಮಂಗಳವಾರ ಸ್ಪಷ್ಟನೆ ರೂಪದ ಹೇಳಿಕೆ ಬಿಡುಗಡೆ ಮಾಡಿರುವ ಸೀರಂ, ಲಸಿಕೆಯು ಸುರಕ್ಷಿತ ಎಂದು ಸಾಬೀತಾಗುವವರೆಗೂ ಸಮೂಹ ಬಳಕೆಗೆ ಇದನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ