ನವದೆಹಲಿ(ಜ.30): ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯುರೋಪಿಯನ್ ಸಂಸತ್ ಸದಸ್ಯರು ಮಂಡಿಸಿದ್ದ ನಿರ್ಣಯದ ಮೇಲಿನ ಮತ ಪ್ರಕ್ರಿಯೆಯನ್ನು ಸಂಸತ್ತು ಮುಂದೂಡಿದೆ.
ಸಿಎಎ ವಿರೋಧಿ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದ್ದು, ಆದರೆ ನಿರ್ಣಯದ ಮೇಲಿನ ಮತ ಪ್ರಕ್ರಿಯೆಯನ್ನು ಮುಂದಿನ ಮಾರ್ಚ್ಗೆ ಮುಂದೂಡಲಾಗಿದೆ ಯೂರೋಪಿಯನ್ ಯೂನಿಯನ್ ಸಂಸತ್ತು ಸ್ಪಷ್ಟಪಡಿಸಿದೆ.
ಮುಂದಿನ ಮಾರ್ಚ್ನಲ್ಲಿ ಯೂರೋಪಿಯನ್ ಸಂಸತ್ತಿನ ಮಹಾಧಿವೇಶನ ನಡೆಯಲಿದ್ದು, ಈ ವೇಳೆ ಸಿಎಎ ಗೆ ಸಂಬಂಧಿಸಿದ ಮತ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗದೆ.
ಭಾರತಕ್ಕೆ ಫುಲ್ ಸಪೋರ್ಟ್: ಐರೋಪ್ಯ ಒಕ್ಕೂಟ ನಿಯೋಗದ ಘೋಷಣೆ!
ಅಲ್ಲಿಯವೆಗೂ ಸಿಎಎ ವಿರೋಧಿ ನಿರ್ಣಯದ ಮೇಲಿನ ಚರ್ಚೆ ನಿಗದಿಯಂತೆಯೇ ಮುಂದುವರೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಯೂರೋಪಿಯನ್ ಯೂನಿಯನ್ ಸಂಸತ್ತು ಮಾಹಿತಿ ನೀಡಿದೆ.
ಯುರೋಪಿಯನ್ ಸಂಸತ್ನಲ್ಲಿ ಸಿಎಎ ಸಂಬಂಧ ಮತ ಎಣಿಕೆ ನಡೆಯದಂತೆ ಭಾರತ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಸದ್ಯ ಜಯ ಲಭಿಸಿದ್ದು, ಆದರೂ ನಿರ್ಣಯದ ಮೇಲಿನ ಚರ್ಚೆ ಮುಂದುವರೆದಿರುವುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ