ಮನೆಯಿಂದ ಹೊರಬಂದ ಕಾರಣ ಜೀವ ಉಳಿಸಿಕೊಂಡ ಮೊಜ್ತಬಾ

Kannadaprabha News   | Kannada Prabha
Published : Mar 18, 2026, 06:04 AM IST
Mojtaba Khamanei

ಸಾರಾಂಶ

ಇರಾನ್‌ ಸರ್ವೋಚ್ಚ ನಾಯಕನ ನಿವಾಸದ ಮೇಲೆ ಫೆ.28ರಂದು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅವರ ಪರಿವಾರದ ಅನೇಕರು ಸಾವನ್ನಪ್ಪಿದರೂ, ಪ್ರಸ್ತುತ ತಂದೆಯ ಸ್ಥಾನಕ್ಕೇರಿರುವ ಮೊಜ್ತಬಾ ಖಮೇನಿ ಮಾತ್ರ ಸ್ವಲ್ಪದರಲ್ಲಿಯೇ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದರು

 ಟೆಹ್ರಾನ್‌: ಇರಾನ್‌ ಸರ್ವೋಚ್ಚ ನಾಯಕನ ನಿವಾಸದ ಮೇಲೆ ಫೆ.28ರಂದು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅವರ ಪರಿವಾರದ ಅನೇಕರು ಸಾವನ್ನಪ್ಪಿದರೂ, ಪ್ರಸ್ತುತ ತಂದೆಯ ಸ್ಥಾನಕ್ಕೇರಿರುವ ಮೊಜ್ತಬಾ ಖಮೇನಿ ಮಾತ್ರ ಸ್ವಲ್ಪದರಲ್ಲಿಯೇ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದರು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಅಂದು ನಡೆದ ದಾಳಿಯಲ್ಲಿ ಮೊಜ್ತಬಾ ಸಾವನ್ನಪ್ಪಿದ್ದಾರೆ, ಇಲ್ಲವೇ, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ವದಂತಿಗಳ ನಡುವೆಯೇ ಮೊಜ್ತಬಾ ಕುರಿತ ರಹಸ್ಯ ವಿಷಯದ ಕುರಿತು ‘ಟೆಲಿಗ್ರಾಫ್‌’ ಪತ್ರಿಕೆ ವರದಿ ಮಾಡಿದೆ.

ಬಹಿರಂಗವಾಗಿದ್ದು ಹೇಗೆ?

ಇರಾನ್‌ನ ಉನ್ನತಾಧಿಕಾರಿಗಳು ಮತ್ತು ಐಆರ್‌ಜಿಸಿ ಕಮಾಂಡರ್‌ಗಳ ನಡುವೆ ಮಾ.12ರಂದು ನಡೆದ ಸಭೆಯ ಸಂಭಾಷಣೆಯ ಸೋರಿಕೆಯಾದ ತುಣುಕನ್ನು ಉಲ್ಲೇಖಿಸಿ ಈ ವರದಿಯನ್ನು ಮಾಡಲಾಗಿದೆ. ‘ದಾಳಿಯ ಸ್ವಲ್ಪ ಹೊತ್ತಿಗೂ ಮುನ್ನ ಆ ಕಟ್ಟಡದ ಅಂಗಳಕ್ಕೆ ಹೋಗಿದ್ದರಿಂದ ಮೊಜ್ತಬಾ ದೇವರ ದಯೆಯಿಂದ ಬದುಕಿದರು. 

ಒಟ್ಟು 3 ಕ್ಷಿಪಣಿಗಳು

ಒಟ್ಟು 3 ಕ್ಷಿಪಣಿಗಳು ಹಾರಿಬಂದಿದ್ದು, ಒಂದು ಅಯತೊಲ್ಲಾ ಇದ್ದ ಕಡೆ, ಇನ್ನೊಂದು ಅವರ ನಿವಾಸಕ್ಕೆ ಮತ್ತು ಮೂರನೆಯದು ಅವರ ಭಾವನ ಮನೆಗೆ ಅಪ್ಪಳಿಸಿತು. ಆ ವೇಳೆ ಮೆಟ್ಟಿಲು ಹತ್ತುತ್ತಿದ್ದ ಮೊಜ್ತಬಾ ಕಾಲಿಗೆ ಗಾಯವಾಯಿತು’ ಎಂದು ಅಲಿ ಖಮೇನಿಯ ದಿನಚರಿಯನ್ನು ನಿರ್ಧರಿಸುತ್ತಿದ್ದ ಮಜಾಹಿರ್ ಹೊಸೇನಿ ಹೇಳಿದ್ದಾರೆ ಎನ್ನಲಾಗಿದೆ. ಇದೇ ದಾಳಿಯಲ್ಲಿ ಮೊಜ್ತಬಾರ ಪತ್ನಿ ಮೃತಪಟ್ಟಿದ್ದರು.

ಮೊಜ್ತಬಾ ಗಂಭೀರವಾಗಿ ಗಾಯಗೊಂಡು ಕೋಮಾಗೆ ಜಾರಿದ್ದಾರೆ, ಅವರನ್ನು ಚಿಕಿತ್ಸೆಗಾಗಿ ರಷ್ಯಾಗೆ ರವಾನಿಸಲಾಗಿದೆ ಎಂಬೆಲ್ಲಾ ವರದಿಗಳ ನಡುವೆ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದುಬೈ, ಯುಎಇ ವಾಯು ಪ್ರದೇಶ ಪೂರ್ಣ ಬಂದ್‌
ಆಫ್ಘನ್‌ ಮೇಲೆ ಪಾಕ್‌ ದಾಳಿಗೆ 400ಕ್ಕೂ ಹೆಚ್ಚು ಮಂದಿ ಸಾವು?