'ಅದೊಂದು ವಿಚಾರದಲ್ಲಿ ಗಾಂಧೀಜಿ ಹಾಗೆ ಮಾಡಬಾರದಿತ್ತು'

Published : Nov 18, 2020, 04:47 PM ISTUpdated : Nov 18, 2020, 04:49 PM IST
'ಅದೊಂದು ವಿಚಾರದಲ್ಲಿ ಗಾಂಧೀಜಿ ಹಾಗೆ ಮಾಡಬಾರದಿತ್ತು'

ಸಾರಾಂಶ

ರಾಮಾಯಣ ಮತ್ತು ಮಹಾಭಾರತದ ಕತೆ ಕೇಳಿ ಬೆಳೆದೆ/ ಆತ್ಮಕತೆಯಲ್ಲಿ ಒಬಾಮಾ ಉಲ್ಲೇಖ/ ತಮ್ಮ ಬಾಲ್ಯದ ದಿನಗಳನ್ನು ತೆರೆದಿಟ್ಟ ಅಮೆರಿಕ ಮಾಜಿ ಅಧ್ಯಕ್ಷ/  ಗಾಂಧೀಜಿ ಜಾತಿ ವ್ಯವಸ್ಥೆಗೆ ಪರಿಹಾರ ಹುಡುಕಲಿಲ್ಲ

ವಾಷಿಂಗ್ ಟನ್(ನ.  18) ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಜೀವನ ಚರಿತ್ರೆ 'ಅ ಪ್ರಾಮೀಸ್ಡ್ ಲ್ಯಾಂಡ್' ನಲ್ಲಿ ಭಾರತದ ವಿಚಾರಗಳನ್ನು ಹೇಳಿದ್ದಾರೆ. ರಾಮಾಯಣ ಮತ್ತು ಮಹಾಭಾರತದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ.

ಭಾರತಕ್ಕೆ ವಿಶೇಷ ಸ್ಥಾನ ನೀಡಿರುವ ಒಬಾಮ ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಬಾಲ್ಯದಲ್ಲಿ ಕೇಳಿ ಬೆಳೆದಿದ್ದೇನೆ ಎಂದಿದ್ದಾರೆ. ಭಾರತದಕ್ಕೆ ಪುರಾತನ ಮಾನ್ಯತೆ ಇದೆ. ಏಳು ನೂರು ಭಾಷೆಗಳ ಸಮ್ಮಿಲನ  ಇದೆ ಎಂದು ದಾಖಲೆಮಾಡಿದ್ದಾರೆ.


2010 ರವರೆಗೂ ನಾನು ಭಾರತಕ್ಕೆ  ಭೇಟಿ ಕೊಟ್ಟಿರಲಿಲ್ಲ. ಆದರೆ ಭಾರತದ ಬಗ್ಗೆ ವಿಶೇಷವಾದ ಸ್ಥಾನವೊಂದನ್ನು ಆಗಲೇ ನೀಡಿದ್ದೆ. ಇದಕ್ಕೆ ಕಾರಣ ಇದೆ. ನನ್ನ ಬಾಲ್ಯದ ದಿನಗಳನ್ನು ಇಂಡೋನೇಷಿಯಾದಲ್ಲಿ ಕಳೆದೆ. ಅಲ್ಲಿ ರಾಮಾಯಣ ಮತ್ತು ಮಹಾಭಾರತದ ಕತೆ ಆಲಿಸುತ್ತಿದ್ದೆ. 

'ಮನಮೋಹನ್ ಸಿಂಗ್‌ಗೆ ಸೋನಿಯಾ ಪಟ್ಟ ಕಟ್ಟಿದ್ದು ಯಾಕೆ?'

ಭಾರತ ಮತ್ತು ಪಾಕಿಸ್ತಾನದ ಕಾಲೇಜು ಗೆಳೆಯರು ದಾಲ್ ಮತ್ತು ಕೀಮಾ ಮಾಡುವುದನ್ನು ಹೇಳಿಕೊಟ್ಟಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಕಾಂಗ್ರೆಸ್ ಬಗ್ಗೆಯೂ ಮಾತನಾಡಿರುವ ಒಬಾಮಾ ಸೋನಿಯಾ ಗಾಂಧಿ ಯಾವ ಕಾರಣಕ್ಕೆ ಮನಮೋಹನ್ ಸಿಂಗ್ ಅವರನ್ನು  ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿದ್ದರು ಎಂಬ ವಿವರವನ್ನು ಹೇಳಿದ್ದರು.

ಗಾಂಧೀಜಿ ಭಾರತದ ಜಾತಿ ವ್ಯವಸ್ಥೆಗೆ ಪರಿಹಾರ ನೀಡಲಿಲ್ಲ; ಭಾರತದ ಬಗೆಗಿನ ನನ್ನ ಸೆಳೆತಕ್ಕೆ ಮುಖ್ಯ ಕಾರಣ ಮಹಾತ್ಮ ಗಾಂಧೀಜಿ. ಬ್ರಿಟಿಷರ ವಿರುದ್ಧ ಅವರು ನಡೆಸಿದ ಅಹಿಂಸಾ ಚಳವಳಿ.  ಆದರೆ ಗಾಂಧಿ ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿಭಾಯಿಸಲಿಲ್ಲ. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ತಡೆಯಲಿಲ್ಲ ಎಂದು ಒಬಾಮಾ ಬೇಸರ ವ್ಯಕ್ತಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!